ವೃತ್ತಿ ನಿರತ ಛಾಯಾಗ್ರಾಹಕರ ಸಂಘಕ್ಕೆ ಆಯ್ಕೆ!!
ಗೋಕಾಕ: ವೃತ್ತಿ ನಿರತ ಛಾಯಾಗ್ರಾಹಕರ ಸಂಘ ಗೋಕಾಕ ೨೦೨೨-೨೩ ನೇಯ ಸಾಲಿನ ಅಧ್ಯಕ್ಷರಾಗಿ ಲಕ್ಷ್ಮಣ ಯಮಕನಮರಡಿ ಉಪಾಧ್ಯಕ್ಷರಾಗಿ ರವಿ ಉಪ್ಪಿನ ಆಯ್ಕೆಯಾಗಿದ್ದಾರೆ.
ಬುಧವಾರದಂದು ನಗರದ ಸಂಘದ ಕಾರ್ಯಾಲಯದಲ್ಲಿ ನಿಕಟಪೂರ್ವ ಅಧ್ಯಕ್ಷ ಮಧುಸೂದನ್ ಸೋಣಗೋಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೆ ಆರ್, ಸಹ ಕಾರ್ಯದರ್ಶಿಯಾಗಿ ಗಂಗಾಧರ ಕಳ್ಳಿಗುದ್ದಿ, ಖಜಾಂಚಿಯಾಗಿ ರಾಜಶೇಖರ ರಜಪೂತ ಆಯ್ಕೆಯಾಗಿದ್ದಾರೆ.
ಸಂದರ್ಭದಲ್ಲಿ ಆನಂದ ವಣ್ಣುರ, ಸುರೇಶ ರಜಪೂತ, ಕಾಡಪ್ಪ ನಾಯಿಕ, ರಾಘವೇಂದ್ರ ಮಾಲದಿನ್ನಿ, ಮುಕೇಶ ಹಾಗರಗಿ, ರಾಜು ಕಲಾಲ ಉಪಸ್ಥಿತರಿದ್ದರು.
YuvaBharataha Latest Kannada News
