Breaking News

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಯ್ಕೆ ಮಾಡಿ-ರಮೇಶ ಜಾರಕಿಹೊಳಿ.!

Spread the love

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಯ್ಕೆ ಮಾಡಿ-ರಮೇಶ ಜಾರಕಿಹೊಳಿ.!


ಗೋಕಾಕ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಯ್ಕೆ ಮಾಡುವಂತೆ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಜಾರಕಿಹೊಳಿ ಮನವಿ ಮಾಡಿದರು.
ಮಂಗಳವಾರದAದು ನಗರದ ಕುರುಬರುದಡ್ಡಿಯಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು ನಿಮ್ಮೇಲ್ಲರ ಆರ್ಶಿವಾದದಿಂದ ೬ ಬಾರಿ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲು ಈ ಬಾರಿಯು ನನ್ನನ್ನು ಆಶೀರ್ವಾದಿಸುವಂತೆ ಮನವಿ ಮಾಡಿದರು.
ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಹತ್ತು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತ ಬಂದಿದ್ದೇನೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ತರಲು ಬಿಜೆಪಿಗೆ ಮತ ನೀಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಿಚಂದ ಪಡಲಕರ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ನಗರಸಭೆ ಸ್ಥಾಯಿ ಸಮಿತಿ ಚೆರಮನ್ ಸಿದ್ದಪ್ಪ ಹುಚ್ಚರಾಮಗೋಳ, ಅಮರನಾಥ ಜಾರಕಿಹೊಳಿ, ಕೆಂಚಪ್ಪ ಗೌಡರ, ದೇವಪ್ಪ ಗುಡಗುಡಿ, ರಾಯಪ್ಪ ಗೊಟೇನ್ನವರ, ಉದ್ದಪ್ಪ ಗುಡಗುಡಿ, ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಘಟಕದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಪದಾಧಿಕಾರಿಗಳಾದ ಶಾಮಾನಂದ ಪೂಜೇರಿ, ಬಸವರಾಜ ಹಿರೇಮಠ, ಲಕ್ಷö್ಮಣ ಖಡಕಬಾವಿ, ಜ್ಯೋತಿ ಕೋಲಾರ, ರಾಜೇಶ್ವರಿ ಒಡೆಯರ್, ಕುಸುಮಾ ಖನಗಾಂವಿ, ಶ್ರೀದೇವಿ ತಡಕೋಡ, ಮುಖಂಡರಾದ ಮಡೆಪ್ಪ ತೋಳಿನವರ, ಟಿ.ಆರ್.ಕಾಗಲ್, ಕುತಬ್ಬುದ್ದಿನ ಗೋಕಾಕ, ಜಾವೇದ್ ಗೋಕಾಕ, ಪ್ರಭು ಚವ್ಹಾಣ, ಜ್ಯೋತಿಬಾ ಸುಭಂಜಿ, ಪರಶುರಾಮ ಭಗತ್, ಚಿತೇಂದ್ರ ಮಾಂಗಳೇಕರ, ಅಶೋಕ ಪಾಟೀಲ, ಬಸವರಾಜ ಕತ್ತಿ, ಬಸವರಾಜ ಉನ್ನಿ, ಅಬ್ದುಲರಹೆಮಾನ ದೇಸಾಯಿ, ಮೋಶಿನ ಖೋಜಾ, ಯೂಸುಫ್ ಅಂಕಲಗಿ, ಎಂ.ಜಿ.ಮುಜಾವರ, ಅಡಿವೇಪ್ಪ ಕಿತ್ತೂರ, ಭಸವಂತಪ್ನ ಉಳ್ಳಾಗಡ್ಡಿ, ಕಾಡಪ್ಟ ಮೇಸ್ತಿ, ತಳದಪ್ಪ ಅಮ್ಮಣಗಿ, ಅಶೋಕ್ ರಾಠೋಡ, ಲಕ್ಷ್ಮಣ ಯಮಕನಮರಡಿ, ದರ್ಶನ ತುರಾಯಿದಾರ, ಅನಿಲ ತುರಾಯಿದಾರ, ದುರ್ಗಪ್ಪ ಶಾಸ್ತ್ರೀಗೋಲ್ಲರ, ಶ್ರೀಶೈಲ ಫೂಜಾರಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

2 − 1 =