Breaking News

ಸಿಎಂ ಪರ ಪುತ್ರನ ಚುನಾವಣಾ ಪ್ರಚಾರ !

Spread the love

ಸಿಎಂ ಪರ ಪುತ್ರನ ಚುನಾವಣಾ ಪ್ರಚಾರ !

ಯುವ ಭಾರತ ಸುದ್ದಿ ಶಿಗ್ಗಾವಿ :
ಮುಖ್ಯಮಂತ್ರಿ ಆದ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಇಡೀ ರಾಜ್ಯವನ್ನು ಸುತ್ತಾಡಿ ಚುನಾವಣಾ ಪ್ರಚಾರ ನಡೆಸಬೇಕಾಗಿದೆ. ಹೀಗಾಗಿ ಸ್ವಕ್ಷೇತ್ರದಲ್ಲಿ ಅವರ ಪುತ್ರ ತಂದೆಯ ಪರವಾಗಿ ಇದೀಗ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ.

ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಪುತ್ರ ಭರತ ಬೊಮ್ಮಾಯಿ ಸೋಮವಾರ ಭರ್ಜರಿ ಮತಯಾಚನೆ ನಡೆಸಿದ್ದಾರೆ.

ಪ್ರಚಾರ ಆರಂಭಿಸಿದ ಆರಂಭದ ದಿನವೇ ಅವರು ಗೆಲುವನ್ನು ತೀರ್ಮಾನ ಮಾಡುವುದು ಕ್ಷೇತ್ರದ ಜನರೇ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ನನ್ನ ತಂದೆಯನ್ನು ಸೋಲಿಸುವುದಾಗಿ ಹೇಳಿದ್ದಾರೆ. ತಂದೆಯವರು 35 ವರ್ಷದ ರಾಜಕೀಯ ಅನುಭವದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅವರನ್ನು ಗೆಲ್ಲಿಸಬೇಕು. ತಂದೆಯವರು ಮತ್ತೆ ಆಯ್ಕೆಯಾಗಬೇಕೋ ಬೇಡವೆಂಬ ತೀರ್ಮಾನವನ್ನು ಜನ ಮಾಡುತ್ತಾರೆ. ಕಾಂಗ್ರೆಸ್ ಇದನ್ನು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eighteen − 17 =