Breaking News

ಗೋಕಾಕ್ -ಲೋಳಸುರ್ ಸೇತುವೆ ಸಂಪೂರ್ಣ ಜಲಾವೃತಗೊಂಡು.. ಸಂಚಾರ ಸ್ಥಗಿತ!!

Spread the love

ಗೋಕಾಕ್ -ಲೋಳಸುರ್ ಸೇತುವೆ ಸಂಪೂರ್ಣ ಜಲಾವೃತಗೊಂಡು.. ಸಂಚಾರ ಸ್ಥಗಿತ!!
ಯುವ ಭಾರತ ಸುದ್ದಿ  ಗೋಕಾಕ: ಹಿಡಕಲ್ ಜಲಾಶಯದಿಂದ ಹೆಚ್ಚುವರಿಗಾಗಿ 40000 ಕ್ಯೂಸೆಕ್ಸ ನೀರು ಘಟಪ್ರಭಾ ನದಿಗೆ ಹರಿದು ಬಿಟ್ಟಿದ್ದರಿಂದ ಸಂಕೇಶ್ವರ – ನರಗುಂದ ರಾಜ್ಯ ಹೆದ್ದಾರಿ ಲೋಳಸುರ ಸೇತುವೆ ಸಂಪೂರ್ಣ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಬೆಳಗಾವಿ, ವಿಜಯಪುರ, ಸೊಲ್ಹಾಪುರ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ಜಲಾವೃತಗೊಂಡು ಪ್ರಯಾಣಿಕರು‌ ಪರದಾಡುವಂತವಾಗಿದೆ. ಕಳೆದ ವರ್ಷಷ್ಟೇ ಮಹಾಪೂರಕ್ಕೆ  ತತ್ತರಿಸಿ ಹೊಗಿದ್ದ ಗೋಕಾಕ ನಗರವು ‌ ಈ ಬಾರಿಯು ಕೂಡ ಪ್ರವಾಹ ಭೀತಿ‌ ಎದುರಾಗಿದ್ದು ಘಟಪ್ರಭಾ ನದಿ‌ ದಡದಲ್ಲಿರುವ ಹಾಲಬಾಗ ಗಲ್ಲಿ, ಕುಂಬಾರ ಗಲ್ಲಿ , ಹಳು ಧನಗಳ ಪೇಟೆ, ಮಂಟನ ಮಾರ್ಕೆಟ, ಬೋಜಗಾರ ಗಲ್ಲಿ ಗಳಲ್ಲಿ‌ ನೀರು‌ ನುಗ್ಗಿದೆ. ಪ್ರವಾಹ ಪೀಡಿತ ನಿರಾಶ್ರಿತರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕಾಡಳಿತ ಸೂಚನೆ ನೀಡಿದ್ದು ಲೋಳಸುರ ಸೇತುವೆ ಬಳಿ ಪೋಲಿಸ ಬಂದುಬಸ್ತ ಒದಗಿಸಲಾಗಿದೆ.

Spread the love

About Yuva Bharatha

Check Also

ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಮಂತ್ರಿ ಜಿ ಪರಮೇಶ್ವರ ಅವರುಗಳ ಸಿಡಿ ಬಂದರೂ ಬರಬಹುದು-ಶಾಸಕ ರಮೇಶ ಜಾರಕಿಹೊಳಿ.!

Spread the loveಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಮಂತ್ರಿ ಜಿ ಪರಮೇಶ್ವರ ಅವರುಗಳ ಸಿಡಿ ಬಂದರೂ ಬರಬಹುದು-ಶಾಸಕ ರಮೇಶ ಜಾರಕಿಹೊಳಿ.! …

Leave a Reply

Your email address will not be published. Required fields are marked *

11 − 6 =