
ಯುವ ಭಾರತ ಸುದ್ದಿ, ಗೋಕಾಕ: ತಾಲೂಕಿನ ಅರಭಾಂವಿ ಪಟ್ಟಣದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವವನ್ನು ಕೋವಿಡ್-19 ಕಾರಣದಿಂದ ರದ್ದು ಪಡಿಸಿರುವದಾಗಿ ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.
ಕಾರ್ತಿಕ ಮಾಸದ ದಿ.18, 18, 2020ರಂದು ಜರುಗಲಿದ್ದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವಕ್ಕೆ ರಾಜ್ಯ, ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ ಹೀಗಾಗಿ ಕೋವಿಡ್- 19ಹಿನ್ನಲೆ ಸರಕಾರದ ಆದೇಶದ ಅನುಸಾರ ರದ್ದು ಮಾಡಿ, ಜಾತ್ರಾ ಕಮೀಟಿಯಿಂದ ದೇವಸ್ಥಾನದ ಆವರಣದಲ್ಲಿ ಫಲಕವನ್ನು ಅಳವಡಿಸಲಾಗಿದೆ. ಭಕ್ತಾಧಿಗಳು ಸರಳ ಹಾಗೂ ಅಗತ್ಯ ಮುಂಜಾಗೃತ ಕ್ರಮವಗಳನ್ನು ಅನುಸರಿಸುವ ಮೂಲಕ ಆಚರಿಸಬೇಕು. ವ್ಯಾಪಾರಸ್ಥರಿಗೆ ಪಟ್ಟಣದಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಜಾತ್ರಾ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದೆ.
YuvaBharataha Latest Kannada News