Breaking News

Yuva Bharatha

ಕೆ.ಎಸ್. ಈಶ್ವರಪ್ಪ ಹಾಗೂ  ರಮೇಶ ಜಾರಕಿಹೊಳಿಯವರಿಗೆ ಇಂದೇ ಗುಡ್ ನ್ಯೂಸ್ ?

ಕೆ.ಎಸ್. ಈಶ್ವರಪ್ಪ ಹಾಗೂ  ರಮೇಶ ಜಾರಕಿಹೊಳಿಯವರಿಗೆ ಇಂದೇ ಗುಡ್ ನ್ಯೂಸ್ ? ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ನಡೆವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿಗೆ ತೆರಳಲಿದ್ದಾರೆ. ಇದು ಸಚಿವ ಸಂಪುಟ ಸೇರುವ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರಿಗೆ ಶುಭ ಸಂದೇಶ ರವಾನಿಸುವ ಸಂಕೇತ ಇದೆ. ಇವರಿಬ್ಬರು ಸೇರಿ ಆರು ಜನರಿಗೆ ಸಚಿವ …

Read More »

ಬೆಳಗಾವಿಯ ಸಿಂದೊಳ್ಳಿಯಲ್ಲಿ ಕೊಲೆ

ಬೆಳಗಾವಿಯ ಸಿಂದೊಳ್ಳಿಯಲ್ಲಿ ಕೊಲೆ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ತಾಲೂಕಿನ ಸಿಂದೊಳ್ಳಿ ಗ್ರಾಮದಲ್ಲಿ ಯುವಕರ ಮೇಲೆ ರವಿವಾರ ಮಾರಣಾಂತಿಕ ಹಲ್ಲೆ ನಡೆದಿದೆ. ಒಬ್ಬ ಮೃತಪಟ್ಟಿದ್ದು ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಬಸವರಾಜ (23 ವರ್ಷ) ಮೃತಪಟ್ಟಿದ್ದು, ಗಿರೀಶ್ ಗಾಯಗೊಂಡಿದ್ದಾನೆ. ಗ್ರಾಮದಲ್ಲಿ ಭಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

Read More »

ಜನಾಂಗೀಯ ನಾಡಿ ಮಿಡಿತವೇ ಸಾಹಿತ್ಯ: ಸರ್ವಾಧ್ಯಕ್ಷ ಈರಣ್ಣ ಬೆಕಿನಾಳ

ಜನಾಂಗೀಯ ನಾಡಿ ಮಿಡಿತವೇ ಸಾಹಿತ್ಯ: ಸರ್ವಾಧ್ಯಕ್ಷ ಈರಣ್ಣ ಬೆಕಿನಾಳ ಯುವ ಭಾರತ ಸುದ್ದಿ ಬಸವನಬಾಗೇವಾಡಿ: ಸಾಹಿತ್ಯವೆಂದರೆ ಬರಿ ಪಾಂಡಿತ್ಯವಲ್ಲ. ಅದು ಜನಾಂಗೀಯ ನಾಡಿ ಮಿಡಿತ. ಜನರಾಡುವ ಭಾಷೆಯಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವ ಭಾಷೆಯ ಪ್ರತೀಕ ಹಾಗೂ ಸಂವೇದನಾಶೀಲ ಮಾಧ್ಯಮವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಈರಣ್ಣ ಬೆಕಿನಾಳ ಹೇಳಿದರು. ತಾಲ್ಲೂಕಿನ ಮನಗೂಳಿಯ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಹೆಣ್ಣು ಮಕ್ಕಳ ಶಾಲೆ …

Read More »

26ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ

26ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಯುವ ಭಾರತ ಸುದ್ದಿ ಬೆಳಗಾವಿ : ಸ್ಥಳೀಯ ರುಕ್ಮಿಣಿನಗರ ಕಣಬರ್ಗಿ ರಸ್ತೆಯ ಶ್ರೀ ನವದುರ್ಗಾ ಅಯ್ಯಪ್ಪ ಮಂದಿರದ 26ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮ ದಿ.24 ಹಾಗೂ 25 ರಂದು ಎರಡು ದಿನಗಳಕಾಲ ಸಡಗರದಿಂದ ಜರುಗಿತು. ದಿ.24 ರಂದು ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಅಯ್ಯಪ್ಪಸ್ವಾಮಿಯ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ದಿ.25 ರಂದು ಬೆಳಿಗ್ಗೆ …

Read More »

ಭರದಿಂದ ಸಾಗಿದ ‘ವಿಜಯ ಪತಾಕೆ’

ಭರದಿಂದ ಸಾಗಿದ ‘ವಿಜಯ ಪತಾಕೆ’ ಯುವ ಭಾರತ ಸುದ್ದಿ ಬೆನಕನಕಟ್ಟಿ (ಧಾರವಾಡ): ‘ಶ್ರೀ ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್’ ಚಿತ್ರನಿರ್ಮಾಣ ಸಂಸ್ಥೆಯ ಅಡಿಯ ನಿರ್ಮಾಣಗೊಳ್ಳುತ್ತಿರುವ ‘ವಿಜಯಪತಾಕೆ’ ಕನ್ನಡ ಚಲನಚಿತ್ರದ ಚಿತ್ರೀಕರಣವು ಕಳೆದೊಂದು ವಾರದಿಂದ ಧಾರವಾಡ , ಬೆನಕನಕಟ್ಟಿ, ನಿಗದಿ ಸುತ್ತಮುತ್ತ ಸದ್ದಿಲ್ಲದೆ ಭರದಿಂದ ಚಿತ್ರೀಕರಣ ನಡೆಸಿದೆ. ಈಗಾಗಲೇ ಶೇಕಡಾ ೮೦ ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಾಗಲಕೋಟ ಜಿಲ್ಲೆಯ ಸಿದ್ದನಕೊ:ಳ್ಳದಲ್ಲೂ ಚಿತ್ರೀಕರಣ ನಡೆಸಿತ್ತು. ಸದ್ಯ ಮಾತಿನ ಭಾಗದ ಚಿತ್ರೀಕರಣವನ್ನು ಸಂಪೂರ್ಣ ಮುಗಿಸುತ್ತೇವೆ. …

Read More »

ವಾಜಪೇಯಿ ಜನ್ಮದಿನಾಚರಣೆ

ವಾಜಪೇಯಿ ಜನ್ಮದಿನಾಚರಣೆ ಯುವ ಭಾರತ ಸುದ್ದಿ ಬೆಳಗಾವಿ: ಅಜಾತ ಶತ್ರು ರಾಜಕೀಯ ಮುತ್ಸದ್ದಿ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದ ಧಿಮಂತ ನಾಯಕ ವಾಜಪೇಯಿಯವರ ರಾಜಕೀಯ ರಂಗದಲ್ಲಿ ಮೀನಗುವ ನಕ್ಷತ್ರವಾಗಿ ಸದಾ ಅವರ ಬೆಳಕು ಅಭಿವೃದ್ಧಿಪರ ಚಿಂತನೆಗೆ ಅತ್ಯವಶ್ಯಕವಾಗಿದೆ ಎಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು. ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಘಟಕದಿಂದ ರವಿವಾರ ನಗರದ ಆರ್ ಪಿಡಿ ವೃತ್ತದಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ …

Read More »

ಅಥರ್ಗಾದಲ್ಲಿ ಕೆರೆ ತುಂಬುವ ಕಾಮಗಾರಿ ಲೋಕಾರ್ಪಣೆ ; ಕೆರೆಗೆ ಬಾಗಿನ ಅರ್ಪಿಸಿದ ಗೋವಿಂದ ಕಾರಜೋಳ

ಅಥರ್ಗಾದಲ್ಲಿ ಕೆರೆ ತುಂಬುವ ಕಾಮಗಾರಿ ಲೋಕಾರ್ಪಣೆ ; ಕೆರೆಗೆ ಬಾಗಿನ ಅರ್ಪಿಸಿದ ಗೋವಿಂದ ಕಾರಜೋಳ ಯುವ ಭಾರತ ಸುದ್ದಿ ಇಂಡಿ: ೨೦ ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ.ಕಾವೇರಿಯಿಂದ ಭೀಮೆಯ ವರೆಗೂ ರಾಜ್ಯಾಧ್ಯಂತ ಕೆರೆ ತುಂಭಿಸುವ ಯೋಜನೆ ಜಾರಿಯಲ್ಲಿ ಇದೆ.ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿಗೆ ಆದ್ಯತೆ ನೀಡುವ ಉದ್ದೇಶದಿಂದ ೭೫೦೦ ಕೋಟಿ ರೂ.ಗಳನ್ನು ನೀರಾವರಿ ಯೋಜನೆಗೆ ಅಽವೇಶನದಲ್ಲಿ ಒಪ್ಪಿಗೆ ಪಡೆದುಕೊಂಡು ಸರ್ಕಾರ ಮಂಜೂರು ಮಾಡಿದೆ.ಅಖಂಡ …

Read More »

ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಮಾವಾಸ್ಯೆ ಅನುಭಾವ

ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಮಾವಾಸ್ಯೆ ಅನುಭಾವ ಯುವ ಭಾರತ ಸುದ್ದಿ ಬೆಳಗಾವಿ : ನೇಯ್ಗೆ ಕಾಯಕದ ಜೇಡರ ದಾಸಿಮಯ್ಯನವರು ಸಮಾಜದ ಸತ್ಯ, ಧರ್ಮ, ನ್ಯಾಯ, ನೀತಿಯ ಬಲವಾದ ಪ್ರತಿ ಪಾದಕರಾಗಿದ್ದರು. ಸಮಾಜದವರ ಅನ್ಯಾಯ ,ಅನಾಚಾರದ ನಡೆಯನ್ನು ತಮ್ಮ ವಚನಗಳಲ್ಲಿ ನೇರವಾಗಿ ಖಂಡಿಸಿದ್ದುಂಟು. ಅವರದು ನಿರ್ಭಿತಿ, ನಿರ್ಭಿಡೆಯ ನಡೆ, ನೆಟ್ಟ ನೇರ ನುಡಿ. ಪತಿಯ ಮನದಿಂಗಿತವನ್ನು ಅರಿತು ನಡೆಯಬಲ್ಲ ದುಗ್ಗಳೆಯನ್ನು ಕೈಹಿಡಿದು ಸಂಸಾರ ಯೋಗಿ ಎನ್ನಿಸಿದರು ಎಂದು ವಿಶ್ರಾಂತ ಪ್ರಾಚಾರ್ಯ …

Read More »

ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ ಬಿ.ಎಸ್.ಪಾಟೀಲ ಯಾಳಗಿ ಸಲಹೆ

ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ ಬಿ.ಎಸ್.ಪಾಟೀಲ ಯಾಳಗಿ ಸಲಹೆ ಯುವ ಭಾರತ ಸುದ್ದಿ ದೇವರಹಿಪ್ಪರಗಿ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕೆಪಿಸಿಸಿ ಸದಸ್ಯರಾದ ಬಿ ಎಸ್ ಪಾಟೀಲ ಯಾಳಗಿ ಹೇಳಿದರು. ಮತಕ್ಷೇತ್ರದ ಕಲಕೇರಿ ಗ್ರಾಮದ …

Read More »

ಕುರುಕ್ಷೇತ್ರ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿಗೆ ಪಾರಗಾಂವೆ, ದುರದುಂಡಿ

ಕುರುಕ್ಷೇತ್ರ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿಗೆ ಪಾರಗಾಂವೆ, ದುರದುಂಡಿ ಯುವ ಭಾರತ ಸುದ್ದಿ ಗೋಕಾಕ : ಇಲ್ಲಿನ ವಕೀಲರ ಸಂಘದ ಸದಸ್ಯರು ಬೆಳಗಾವಿ ಜಿಲ್ಲೆಯ ಅಧಿವಕ್ತ ಪರಿಷತ್ ಉಪಾಧ್ಯಕ್ಷ ಎಂ ವ್ಹಿ ಪಾರಗಾಂವೆ, ಕಾರ್ಯದರ್ಶಿ ವಾಯ್.ಎಲ್.ದುರದುಂಡಿ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ನ ೧೬ ನೇ ರಾಷ್ಟ್ರೀಯ ಅಧಿವೇಶನದಲ್ಲಿ ಆಹ್ವಾನಿತರಾಗಿ ಪಾಲ್ಗೊಳಲಿದ್ದಾರೆ.

Read More »