Breaking News

ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನ- ಬಾಲಚಂದ್ರ ಜಾರಕಿಹೋಳಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ.!!

Spread the love

ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನ- ಬಾಲಚಂದ್ರ ಜಾರಕಿಹೋಳಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ.!!

 

 

ಯುವ ಭಾರತ ಸುದ್ದಿ ಗೋಕಾಕ್ : ತಾಲೂಕಿನ ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನವಾಗಿದೆ. ಘಟಪ್ರಭಾ ನದಿ ನೀರು ಗ್ರಾಮವನ್ನು ಸುತ್ತುವರೆದು ರಸ್ತೆ ಸಂಪರ್ಕ ಕಡಿತಗೊಂಡಿದೆ.‌ಪ್ರವಾಹಕ್ಕೆ ಹೆದರಿ ನಿನ್ನೆ ರಾತ್ರಿಯೇ ಜನ ಗ್ರಾಮ ಖಾಲಿ ಮಾಡಿದ್ದಾರೆ. ಉಳಿದ ಜನರು ಒಬ್ಬಬ್ಬರಾಗಿ ತಮ್ಮ‌ ವಸ್ತುಗಳನ್ನ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಇನ್ನೂ ಈ ಗ್ರಾಮದ ಜನರಿಗೆ ಶಾಸಕ ಬಾಲಚಂದ್ರ ಜಾರಕಿಹೋಳಿ ಊಟದ ವ್ಯವಸ್ಥೆ ಮಾಡಿದ್ದಾರೆ.ಅಷ್ಟೇ ಅಲ್ಲ ನಮಗೆ ಬೇಕಾದ ಎಲ್ಲ‌ ವ್ಯವಸ್ಥೆ ಮಾಡಿದ್ದಾರೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.

ರಸ್ತೆಯಲ್ಲಿಯೇ ಠಿಕಾಣಿ:
ಚಿಗಡೊಳ್ಳಿ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ಗ್ರಾಮ ಹೊರಗಡೆ ಬಂದಿರುವ ಸಂತ್ರಸ್ಥರು ತಮ್ಮೂರಿಗೆ ಹೋಗುವ ರಸ್ತೆಯಲ್ಲಿ ಠಿಕಾಣೆ ಹೂಡಿದ್ದಾರೆ. ತಮ್ಮೊಂದಿಗೆ ಎತ್ತು, ಹಸು, ಕೋಳಿ,ಆಡುಗಳನ್ನ ತೆಗೆದುಕೊಂಡು ಬಂದಿದ್ದಾರೆ. ಟ್ಯಾಕ್ಟರ್ ಕೆಳಗಡೆ ಗ್ಯಾಸ ಹೊತ್ತಿಸಿ ಊಟ ತಯಾರಿಸುತ್ತಿದ್ದಾರೆ.

 

 

ನಡುಗಡ್ಡೆಯಾದ ಅಡಿಬಟ್ಟಿ ಗ್ರಾಮ: ಟಪ್ರಭಾ ನದಿ ತುಂಬಿ ಹರಿಯುತ್ತಿರುವುದರಿಂದ ಅಡಿಬಟ್ಟಿ ಗ್ರಾಮವೂ ಸಹ ನಡುಗಡ್ಡೆಯಾಗಿದೆ.ನದಿ ನೀರು‌ ನಾಲ್ಕು ದಿಕ್ಕಿನಲ್ಲಿ ಸುತ್ತುವರೆದಿರುವುದರಿಂದ ಗ್ರಾಮ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿವೆ. ನದಿ ನೀರು ಗ್ರಾಮ ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಇಲ್ಲಿನ ಜನರನ್ನ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

4 × 3 =