Breaking News

ಗ್ರಾಮ ಪಂಚಾಯತನ ಚುನಾವಣೆಯಲ್ಲಿ 39ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆ.!

Spread the love


ಯುವ ಭಾರತ ಸುದ್ದಿ,  ಗೋಕಾಕ: ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮ ಪಂಚಾಯತನ ಚುನಾವಣೆಯಲ್ಲಿ ೩೯ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜಕೀಯ ಪಕ್ಷಗಳಿಗೆ ತಳಮಟ್ಟದಲ್ಲಿ ಭದ್ರ ಬುನಾದಿಯಂತಿರುವ ಈ ಪಂಚಾಯಿತಿ ಚುನಾವಣೆಯಲ್ಲಿ ಮತದಾನಕ್ಕೂ ಮುನ್ನವೇ ಗೋಕಾಕ ತಾಲೂಕಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗೆಲುವಿನ ಖಾತೆ ತೆರೆದಿದೆ.
ಮಮದಾಪೂರ ಗ್ರಾಪಂನ ಲಕ್ಷಿö್ಮÃ ಮುತ್ತೆಪ್ಪ ರಕ್ಷೀ, ರೂಪಾ ಸುನೀಲ ಅವರಾದಿ, ಭೀಮಪ್ಪ ಲಕ್ಷö್ಮಪ್ಪ ಚಂದರಗಿ, ರಾಜು ಯಲ್ಲಪ್ಪ ಬೆಳಗಲಿ, ಸಿದ್ದಲಿಂಗಪ್ಪ ಲಕ್ಷö್ಮಪ್ಪ ಪೂಜೆರಿ, ಉದ್ದವ್ವ ಹಣಮಂತ ಚಿಕ್ಕನ್ನವರ, ಬಸವ್ವ ಪಾಟೀಲ. ಬೆಣಚಿನಮರಡಿ (ಕೊಂ) ಗ್ರಾಪಂನ ಸುರೇಖಾ ಮಯೂರ ಕುರಿ, ಸುನಂದಾ ಪ್ರಕಾಶ ವಡ್ಡರ, ಮಂಜುಳಾ ಲಕ್ಷö್ಮಣ ಪಾಟೀಲ. ಮಕ್ಕಳಗೇರಿ ಗ್ರಾಪಂನ ಉದ್ದವ್ವ ಫಕೀರಪ್ಪ ದಂಡಿನ, ಸಾಂವಕ್ಕ ಹ ದುರದುಂಡಿ, ಪುಂಡಲಿಕ ಕಾಗಲ್. ಮಾಲದಿನ್ನಿ ಗ್ರಾಪಂನ ರುಕ್ಮವ್ವ ಸಿದ್ದಪ್ಪ ಭರಮನ್ನವರ, ಖನಗಾಂವ ಗ್ರಾಪಂನ ಕವಿತಾ ಗುಳ್ಳಿ, ರೇಣುಕಾ ಲಗಮೇಶಿ, ಶ್ರೀಮತಿ ವಿಮಲವ್ವ ಬಡಿಗೇರ, ರಾಜು ತಡಸನೂರ, ಮೆಲ್ಮಟ್ಟಿ ಗ್ರಾಪಂನ ಮಾಲಿಂಗ ಬಂಗೆನ್ನವರ, ಪಾರ್ವತಿ ಯಲಿಗಾರ. ಗುಜನಾಳ ಗ್ರಾಪಂನ ಜಾನಕ್ಕ ಪೋಲಿಸಗೌಡರ, ಸಾಂವಕ್ಕ ಹಗೆದಾಳ, ರೇಣುಕಾ ಹರಿಜನ, ಲಕ್ಷಿö್ಮÃಬಾಯಿ ಗಸ್ತಿ, ಸಕ್ಕುಬಾಯಿ ಪೂಜೇರಿ, ಮಹೇಶ ನೀರಲಗಿ, ಬಸಪ್ಪ ಈರಪಾನಗೋಳ, ಪಾಮಲದಿನ್ನಿ ಗ್ರಾಪಂನ ಪ್ರೇಮಾ ಈಶ್ವರ ದಂಡಿನ, ಶಿಂಧಿಕುರಬೇಟ ಗ್ರಾಪಂನ ಭೀಮಶೀ ಬಿರನಾಳ, ಎಮ್ ವಿ ಕರೋಶಿ, ಕುಂದರಗಿ ಗ್ರಾಪಂನ ಅರಬವ್ವ ಹರಿಜನ, ಮಿಡಕನಟ್ಟಿ ಗ್ರಾಪಂನ ಸುವರ್ಣ ಗಸ್ತಿ, ಬೆಣಚನಮರ್ಡಿ (ಉ) ಗ್ರಾಪಂನ ಬಾಳವ್ವ ಬಾಳಪ್ಪ ರಾಯನ್ನವರ, ಚಂದ್ರವ್ವ ಹರಿಜನ, ಮದವಾಲ ಗ್ರಾಪಂನ ಶಿರಗೌಡ ಪಾಟೀಲ, ಆನಂದ ಬಾರಿಮರದ, ಕಸ್ತೂರಿ ಓಬಿ, ಮಹಾದೇವಿ ನಾಯ್ಕ ಸೇರಿ ಒಟ್ಟು೩೯ ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಎಲ್ಲ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿಗರಾಗಿದ್ದಾರೆ. ಈ ಅವಿರೋಧ ಆಯ್ಕೆಗೆ ಗ್ರಾಮಸ್ಥರು ಹಾಗೂ ಸಚಿವರ ಅಭಿಮಾನಿಗಳು ಹರ್ಷವ್ಯಕ್ತಪಡಿಸಿದ್ದಾರೆ.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

three × 1 =