Breaking News

ನಂದಗಡ ಪೊಲೀಸರ ಕಾರಾಚರಣೆ : ಅಕ್ರಮವಾಗಿ ಸಾಗಿಸುತ್ತಿದ್ದ 4 ಕೆಜಿ ಶ್ರೀಗಂಧ ಕಟ್ಟಿಗೆ ವಶ : ಓರ್ವನ ಬಂಧನ

Spread the love

ನಂದಗಡ ಪೊಲೀಸರ ಕಾರಾಚರಣೆ : ಅಕ್ರಮವಾಗಿ ಸಾಗಿಸುತ್ತಿದ್ದ 4 ಕೆಜಿ ಶ್ರೀಗಂಧ ಕಟ್ಟಿಗೆ ವಶ : ಓರ್ವನ ಬಂಧನ

ಯುವ ಭಾರತ ಸುದ್ದಿ ಬೆಳಗಾವಿ :                      ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಶ್ರೀಗಂಧ ಕಟ್ಟಿಗೆಯ ತುಂಡುಗಳನ್ನು ವಶಪಡಿಸಿಕೊಂಡಿರುವ ಜಿಲ್ಲೆಯ ನಂದಗಡ ಪೊಲೀಸ ಠಾಣೆಯ ಪೊಲೀಸರು ಓರ್ವನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌
ಆನಂದ ರಾಮನ್ನವರ (27) ಶ್ರೀಗಂಧ ಸಾಗಾಟ ಪ್ರಕರದಲ್ಲಿ ಬಂಧಿತ ಆರೋಪಿಯಾಗಿದ್ದಾನೆ. ದಿ. 18ರಂದು ಮಧ್ಯಾಹ್ನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಸಬಾ ನಂದಗಡ ಗ್ರಾಮದ ವ್ಯಾಪ್ತಿಯಲ್ಲಿ ಅಕ್ತಮವಾಗಿ ಶ್ರೀಗಂಧದ ಗಿಡದ ತುಂಡುಗಳನ್ನು ಅರಣ್ಯ ಇಲಾಖೆ ಯಾವದೇ ಅನುಮತಿ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುವ ಬಗ್ಗೆ ಖಚಿತ ಮಾಹಿತಿ ಪಡೆದ ನಂದಗಡ ಪಿಎಸ್ ಐ ಎಚ್. ಶ್ರೀನಿವಾಸನ್, ಹಾಗೂ ಸಿಬ್ಬಂದಿಗಳಾದ (ಎನ್.ಬಿ. ಬೆಳವಡಿ, ಸಿಎಚ್‌ಸಿ 966), ಎಮ್.ಎಮ್ ಮುಲ್ಲಾ (ಸಿಎಚ್‌ಸಿ-571), ಯು.ಬಿ.ಶಿಂತ್ರಿ (ಸಿಎಚ್‌ಸಿ-2662)ನಂದಗಡ ಪೊಲೀಸ್ ಠಾಣೆಯ ಪಿಐ ಬಸವರಾಜ ಲಮಾಣಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆರೋಪಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧ ತುಂಡುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.
ಈ ಸದರಿ ಪ್ರಕರಣ ಕುರಿತು
ಆರೋಫಿತನ ಮೇಲೆ ನಂದಗಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 35/2023 ಕಲಂ-
379 ಐ.ಪಿ.ಸಿ ಮತ್ತು ಕಲಂ 86, 87 ಕರ್ನಾಟಕ ಅರಣ್ಯ ಅಧಿನಿಯಮ 1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × 5 =