Breaking News

51 ಲಕ್ಷ ರೂ.ಗೆ ಮಾರಾಟವಾಯ್ತು ಅಕ್ಕಿ ಕಾಳಿಗಿಂತ ಚಿಕ್ಕ ಬ್ಯಾಗ್‌

51 ಲಕ್ಷ ರೂ.ಗೆ ಮಾರಾಟವಾಯ್ತು ಅಕ್ಕಿ ಕಾಳಿಗಿಂತ ಚಿಕ್ಕ ಬ್ಯಾಗ್‌ ಬೆಂಗಳೂರು : ಕಲಾವಿದನೊಬ್ಬ ರಚಿಸಿದ ಬ್ಯಾಗ್‌ ಅಕ್ಕಿ ಕಾಳಿಗಿಂತ ಚಿಕ್ಕದಾಗಿದೆ ಎಂಬುದು ನೆನಪಿದೆಯೇ? ಈ ‘ಲೂಯಿ ವಿಟಾನ್’ ಬ್ಯಾಗ್ ಇದೀಗ ಹರಾಜಿನಲ್ಲಿ $63,000, ಅಂದಾಜು ₹51 ಲಕ್ಷಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಬ್ರೂಕ್ಲಿನ್ ಮೂಲದ ಕಲೆ ಮತ್ತು ಜಾಹೀರಾತು ಸಮೂಹವಾದ MSCHF ನಿಂದ ಇನ್ಸ್ಟಾಗ್ರಾಂ(Instagram)ನಲ್ಲಿ “MSCHF ನಿಂದ ಮೈಕ್ರೋಸ್ಕೋಪಿಕ್ ಕೈಚೀಲ ಎಂಬ ಶೀರ್ಷಿಕೆಯಡಿ ಅದರ ಚಿತ್ರಗಳನ್ನು ಹಂಚಿಕೊಂಡಾಗ ಬ್ಯಾಗ್ …

Read More »

ಶ್ರೀ ಪ್ರಸಂಗಸಾಗರ ಮುನಿಗಳ ಬೆಳಗಾವಿ ಪುರಪ್ರವೇಶ ಇಂದು

ಶ್ರೀ ಪ್ರಸಂಗಸಾಗರ ಮುನಿಗಳ ಬೆಳಗಾವಿ ಪುರಪ್ರವೇಶ ಇಂದು ಬೆಳಗಾವಿ : ಆಚಾರ್ಯ ಪುಷ್ಪದಂತಸಾಗರ ಮುನಿಗಳ ಪರಮಶಿಷ್ಯರಾದ ಶ್ರೀ 108 ಪ್ರಸಂಗಸಾಗರಜೀ ಮುನಿಗಳ ಚಾರ್ತುಮಾಸ ಬೆಳಗಾವಿಯಲ್ಲಿ ನಡೆಯಲಿದ್ದು, ಜೂ.30 (ಶುಕ್ರವಾರ)ರಂದು ಶ್ರೀಗಳು ಬೆಳಗಾವಿ ನಗರಕ್ಕೆ ಪುರಪ್ರವೇಶ ಮಾಡಲಿದ್ದಾರೆ. ಈಗಾಗಲೇ ವಿವಿಧಡೆ ಚಾರ್ತುಮಾಸ ನಡೆಸಿ ಧರ್ಮಪ್ರಭಾವನೆ ಕೈಗೊಂಡಿರುವ ಪ್ರಸಂಗಸಾಗರ ಮುನಿಗಳು ಬೆಳಗಾವಿಯಲ್ಲಿ ಚಾರ್ತುಮಾಸ ಆಚರಣೆ ಮಾಡಲಿದ್ದು, ಬೆಳಗಾವಿಯಲ್ಲಿಯೂ ಧರ್ಮಪ್ರಭಾವನೆಯ ಕಾರ್ಯಕ್ರಮಗಳು ನಡೆಯಲಿವೆ. ಜೂ.30 ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಆರ್.ಟಿ.ಓ. ಸರ್ಕಲ್ …

Read More »

ಯತ್ನಾಳ್​​, ರೇಣುಕಾಚಾರ್ಯಗೆ ನೊಟೀಸ್‌

ಯತ್ನಾಳ್​​, ರೇಣುಕಾಚಾರ್ಯಗೆ ನೊಟೀಸ್‌ ಬೆಂಗಳೂರು: ಬಿಜೆಪಿ ನಾಯಕರು ಬಹಿರಂಗವಾಗಿ ಪಕ್ಷಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಶಾಸಕ ರೇಣುಕಾಚಾರ್ಯ ಸೇರಿ ಕೆಲವರಿಗೆ ಬಹಿರಂಗ ಹೇಳಿಕೆ ನೀಡದಂತೆ ನೋಟಿಸ್‌ ಜಾರಿ ಮಾಡಿದೆ. ಒಂದು ವಾರದೊಳಗಾಗಿ ಲಿಖಿತ ರೂಪದಲ್ಲಿ ಇದಕ್ಕೆ ಉತ್ತರ ನೀಡಬೇಕೆಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಪಕ್ಷ ಸಾಕಷ್ಟು ಬಾರಿ ಸೂಚಿಸಿದರೂ ಕೂಡ ತಾವು ಪದೇ ಪದೇ ರಾಜ್ಯ …

Read More »

ಬಂಧಿತ ಸಚಿವ ಸೆಂಥಿಲ್ ಬಾಲಾಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ

ಬಂಧಿತ ಸಚಿವ ಸೆಂಥಿಲ್ ಬಾಲಾಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ ಚೆನ್ನೈ: ಬಂಧಿತ ವಿದ್ಯುತ್ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಗುರುವಾರ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ಸಚಿವ ಸೆಂಥಿಲ್ ಬಾಲಾಜಿ ಅವರು ಉದ್ಯೋಗಕ್ಕಾಗಿ ಹಣ ತೆಗೆದುಕೊಳ್ಳುವುದು ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನಿಖೆಯ ಮೇಲೆ …

Read More »

ವಿಶ್ವ ವಿದ್ಯಾಲಯಗಳು ಜ್ಞಾನದಾಹವಾಗಬೇಕು: ಎಲ್. ಹನುಮಂತಯ್ಯ

ವಿಶ್ವ ವಿದ್ಯಾಲಯಗಳು ಜ್ಞಾನದಾಹವಾಗಬೇಕು: ಎಲ್. ಹನುಮಂತಯ್ಯ ಯುವ ಭಾರತ ಸುದ್ದಿ ಬೆಳಗಾವಿ : ಸಮಕಾಲೀನ ಸಂದರ್ಭದಲ್ಲಿ ಬಹುತೇಕ ವಿಶ್ವ ವಿದ್ಯಾಲಯಗಳ ಪ್ರಸಾರಾಂಗಗಳು ಜ್ಞಾನ ಪ್ರಸರಣ ಕಾರ್ಯವನ್ನು ಮರೆತು ನಿಷ್ಕ್ರಿಯವಾಗಿವೆ. ಇಂತಹ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಜ್ಞಾನವನ್ನು ಬಿತ್ತರಿಸುವ ಮಹತ್ತರ ಕಾರ್ಯದಲ್ಲಿ ಕ್ರಿಯಾಶೀಲವಾಗುವುದರೊಂದಿಗೆ ಮತ್ತೆ ಗತ ವೈಭವಕ್ಕೆ ಕರೆದೊಯ್ಯುತ್ತಿದೆ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ರಾಣಿ ಚನ್ನಮ್ಮ ಅಧ್ಯಯನ …

Read More »

ಆದಿಪುರುಷ ಸಿನಿಮಾ ಕುರಿತು ನ್ಯಾಯಾಲಯ ಸಿಡಿಮಿಡಿ

ಆದಿಪುರುಷ ಸಿನಿಮಾ ಕುರಿತು ನ್ಯಾಯಾಲಯ ಸಿಡಿಮಿಡಿ ದೆಹಲಿ : ಆದಿಪುರುಷ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಬುಧವಾರ ಸಿನಿಮಾ ನಿರ್ಮಾಪಕರು ಧಾರ್ಮಿಕ ಪಠ್ಯಗಳಿಂದ ದೂರವಿರಬೇಕು ಮತ್ತು ಅವುಗಳ ಬಗ್ಗೆ ಸಿನಿಮಾ ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ. ನಿಷೇಧವನ್ನು ಕೋರಿ ಸಲ್ಲಿಸಿದ ಮನವಿಗಳಿಗೆ ಪ್ರತಿಕ್ರಿಯೆಯಾಗಿ ವೈಯಕ್ತಿಕ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ (ಸಿಬಿಎಫ್‌ಸಿ) …

Read More »

ಆಂಧ್ರಪ್ರದೇಶದಲ್ಲಿ 1000 ವರ್ಷ ಹಳೆಯ ಕನ್ನಡ ಶಿಲ್ಪ ಪತ್ತೆ

ಆಂಧ್ರಪ್ರದೇಶದಲ್ಲಿ 1000 ವರ್ಷ ಹಳೆಯ ಕನ್ನಡ ಶಿಲ್ಪ ಪತ್ತೆ ಹೈದರಾಬಾದ್ : ಹೈದರಾಬಾದ್ ಹೊರವಲಯದ ಹಳ್ಳಿಯೊಂದರಲ್ಲಿ ಒಂಬತ್ತು- ಹತ್ತನೇ ಶತಮಾನದ ಅಸ್ತಿತ್ವ ತೋರಿಸಿರುವ ಜೈನ ತೀರ್ಥಂಕರ ಶಿಲ್ಪಗಳು ಮತ್ತು ಕನ್ನಡ ಶಾಸನ ಹೊಂದಿರುವ ಎರಡು ಚೌಕಾಕಾರದ ಕಂಬಗಳು ಇತ್ತೀಚಿಗೆ ಪತ್ತೆಯಾಗಿದೆ. ಪಿ. ಶ್ರೀನಾಥ ರೆಡ್ಡಿ ಅವರು ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ ಮಂಡಲದ ಎನಿಕೆ ಪಲ್ಲಿ ಗ್ರಾಮದಲ್ಲಿ ಎರಡು ಕಂಬಗಳ ಉಪಸ್ಥಿತಿ ಬಗ್ಗೆ ಮಾಹಿತಿ ನೀಡಿದ ನಂತರ ಪುರಾತತ್ವ ಶಾಸ್ತ್ರಜ್ಞ ಇ. …

Read More »

ಖಾಸಗಿ ಬಸ್ ಪಲ್ಟಿ : ಬೆಳಗಾವಿಯ ಚಾಲಕ ಸಾವು

ಖಾಸಗಿ ಬಸ್ ಪಲ್ಟಿ : ಬೆಳಗಾವಿಯ ಚಾಲಕ ಸಾವು ಹಾವೇರಿ : ಇಂದು ಬೆಳಗಿನ ಜಾವ ಖಾಸಗಿ ಬಸ್ ಪಲ್ಟಿಯಾಗಿ ಚಾಲಕ ಸೇರಿ ಇಬ್ಬರು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನಿಂದ ಮೀರಜ್ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ. ಬೆಳಗಾವಿ ಮೂಲದ …

Read More »

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ದಾ ಮತ್ತು ಬಿಜೆಪಿ ನಾಯಕರು ಬುಧವಾರ ಮಹತ್ವದ ಸಭೆ ನಡೆಸಿ ಚರ್ಚಿಸಿದ್ದಾರೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು …

Read More »

ಈ ವರ್ಷದ ಭಗವದ್ಗೀತೆ ಅಭಿಯಾನದ ಕೇಂದ್ರಸ್ಥಾನ ಬೆಳಗಾವಿ – ಸ್ವರ್ಣವಲ್ಲಿ ಶ್ರೀ

ಈ ವರ್ಷದ ಭಗವದ್ಗೀತೆ ಅಭಿಯಾನದ ಕೇಂದ್ರಸ್ಥಾನ ಬೆಳಗಾವಿ – ಸ್ವರ್ಣವಲ್ಲಿ ಶ್ರೀ ಬೆಳಗಾವಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ಪ್ರತಿ ವರ್ಷ ನಡೆಸಲಾಗುವ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನವನ್ನು ಈ ವರ್ಷ ಬೆಳಗಾವಿಯನ್ನು ಕೇಂದ್ರಸ್ಥಾನವಾಗಿಸಿಕೊಂಡು ನಡೆಸಲಾಗುವುದು ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ತಿಳಿಸಿದ್ದಾರೆ. ಮಂಗಳವಾರ ಸಂಜೆ ಬೆಳಗಾವಿಯಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಈ ವಿಷಯವನ್ನು ಅವರು ಪ್ರಕಟಿಸಿದರು. ನವೆಂಬರ್ 21ರಿಂದ ಡಿಸೆಂಬರ್ 22ರವರೆಗೆ ಭಗವದ್ಘೀತೆ …

Read More »