Breaking News

ಪಿಕೆಪಿಎಸ್ ಚುನಾವಣೆ ರಮೇಶ ಜಾರಕಿಹೊಳಿ ಬೆಂಬಲಿತ ಸದಸ್ಯರ ಅವಿರೋಧ ಆಯ್ಕೆ.!

ಪಿಕೆಪಿಎಸ್ ಚುನಾವಣೆ ರಮೇಶ ಜಾರಕಿಹೊಳಿ ಬೆಂಬಲಿತ ಸದಸ್ಯರ ಅವಿರೋಧ ಆಯ್ಕೆ.! ಯುವ ಭಾರತ ಸುದ್ದಿ  ಗೋಕಾಕ:  ಕೊಳವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ ಎಲ್ಲ ೧೨ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ, ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾರ್ಗದರ್ಶನದಲ್ಲಿ ನಡೆದ ಅವಿರೋಧ ಆಯ್ಕೆ ಪ್ರಕ್ರೀಯೆಯಲ್ಲಿ ನೂತನ ಸದಸ್ಯರಾಗಿ ಸಿದ್ದಪ್ಪ ಸಿದ್ದಪ್ಪ ರಂಗನ್ನವರ, …

Read More »

ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ.!

ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ.! ಯುವ ಭಾರತ ಸುದ್ದಿ  ಗೋಕಾಕ: ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ನಗರದ ವಿವಿಧ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಆಶೀರ್ವಾಧ ಪಡೆದರು. ನಗರದ ಗೊಲ್ಲರ ಗಲ್ಲಿಯ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಆಚಾರ್ಯ ಗಲ್ಲಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ ಹಾಗೂ ಶಿವಾಜಿ ವೃತ್ತದ ಶ್ರೀ ಕರೇಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಆಚಾರ್ಯ ಗಲ್ಲಿಯಲ್ಲಿ …

Read More »

ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ರಸಮಂಜರಿ ಕಾರ್ಯಕ್ರಮ

ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ರಸಮಂಜರಿ ಕಾರ್ಯಕ್ರಮ ಗೋಕಾಕ: ಗೋಕಾಕ ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ಯುಗಾದಿ ಹಬ್ಬದ ನಿಮಿತ್ಯ ಆಯೋಜಿಸಿದಲಾದ ರಸಮಂಜರಿ ಕಾರ್ಯಕ್ರಮವನ್ನು ಶಾಸಕರ ಕಚೇರಿ ಸಹಾಯಕ ಸುರೇಶ ಸನದಿ ಚಾಲನೆ ನೀಡಿದರು. ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾರ್ಗದರ್ಶನದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲ ಸಾಂಸ್ಕೃತಿಕ ಪ್ರಕೋಷ್ಠದಿಂದ ಜರುಗಿದ ರಸಮಂಜರಿ ಕಾರ್ಯಕ್ರಮದಲ್ಲಿ ಮಧುರ ಸಂಗೀತ ಬಳಗದ ಮಂಜುನಾಥ ಹುಡೇದ, ಜಯಶ್ರೀ ನಾಯ್ಕ …

Read More »

ಹಳೆ ಸೇಡಿಗಾಗಿ ಎರಡು ಗುಂಪಿನ ಮಧ್ಯೆ ಪರಸ್ಪರ ಮಾರಕಾಸ್ತ್ರಗಳಿಂದ ದಾಳಿ ಹಲವರಿಗೆ ಗಾಯ ಓರ್ವ ಆಸ್ಪತ್ರೆಯಲ್ಲಿ ಸಾವು!!

ಹಳೆ ಸೇಡಿಗಾಗಿ ಎರಡು ಗುಂಪಿನ ಮಧ್ಯೆ ಪರಸ್ಪರ ಮಾರಕಾಸ್ತ್ರಗಳಿಂದ ದಾಳಿ ಹಲವರಿಗೆ ಗಾಯ ಓರ್ವ ಆಸ್ಪತ್ರೆಯಲ್ಲಿ ಸಾವು!! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ಹಳೆ ಸೇಡಿಗಾಗಿ ಎರಡು ಗುಂಪಿನ ಮಧ್ಯೆ ಪರಸ್ಪರ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ಹಲವರು ಗಾಯಗೊಂಡಿದ್ದು, ಅಲ್ಲದೇ ಗಂಭೀರವಾಗಿ ಗಾಯಗೊಂಡ ಓರ್ವ ಆಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ಇಂದು ಸಂಜೆ ನಡೆದಿದೆ. ಬೆಳಗಾವಿ ತಾಲೂಕಿನ ಸುನಕುಂಪಿ ಗ್ರಾಮದ 25 ವರ್ಷದ …

Read More »

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆ ಮಾಡಿ ಶಾಸಕ ರಮೇಶ್ ಜಾರಕಿಹೊಳಿ.!

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆ ಮಾಡಿ ಶಾಸಕ ರಮೇಶ್ ಜಾರಕಿಹೊಳಿ.! ಗೋಕಾಕ: ಗೋಕಾಕ ಮತಕ್ಷೇತ್ರದ ನಾಗರಿಕರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಮತ್ತು ಆನಂದ ಚಿತ್ರ ಮಂದಿರಗಳಲ್ಲಿ ಬೆಳಿಗ್ಗೆ ೯ ಗಂಟೆಯಿAದ ೧೨ ಗಂಟೆ ವರೆಗೆ ಉಚಿತವಾಗಿ “ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆಗೆ ಅವಕಾಶ ಮಾಡಿಕೊಟ್ಟಿದ್ದು, ಸೋಮವಾರದಂದು ಲಕ್ಷ್ಮೀ ಚಿತ್ರ ಮಂದಿರದಲ್ಲಿ ಗೋಕಾಕ ನಾಗರಿಕರು ಚಲನಚಿತ್ರ ವಿಕ್ಷಿಸಿದರು. “ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆಗೆ ಎಪ್ರೀಲ್ …

Read More »

ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.! ಗೋಕಾಕ: ಇಲ್ಲಿಯ ಕಿಲ್ಲಾ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆಯೋಜಿಸಲಾದ ಲೋಕಕಲ್ಯಾಣಕ್ಕಾಗಿ ನವಗ್ರಹ ಮಹಾಯಾಗ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಭಾಗವಹಿಸಿ ಆಶೀರ್ವಾಧ ಪಡೆದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಬಜರಂಗದಳ ಮುಖಂಡ ಸದಾಶಿವ ಗುದಗಗೋಳ, ಶ್ರೀರಂಗ …

Read More »

ಜಾರಕಿಹೊಳಿಯನ್ನ ವಿಶ್ವನಾಥನನ್ನ ಯಾರು ತುಳಿಯಲು ಸಾಧ್ಯವಿಲ್ಲ-ಎಚ್ ವಿಶ್ವನಾಥ.!

ಜಾರಕಿಹೊಳಿಯನ್ನ ವಿಶ್ವನಾಥನನ್ನ ಯಾರು ತುಳಿಯಲು ಸಾಧ್ಯವಿಲ್ಲ-ಎಚ್ ವಿಶ್ವನಾಥ.! ಗೋಕಾಕ: ಮೈತ್ರಿ ಸರಕಾರದ ಪತನ ಮಾಡಿ, ಬಿಜೆಪಿ ಸರಕಾರ ರಚನೆ ಮಾಡಲು ತ್ಯಾಗ ಮಾಡಿದ ಶಾಸಕರನ್ನು ರಾಜ್ಯ ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ. ಜಾರಕಿಹೊಳಿಯನ್ನ ವಿಶ್ವನಾಥನ್ನ ಯಾರು ತುಳಿಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ ಹೇಳಿದರು. ರವಿವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ನೇಹಿತ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಸರಕಾರ ರಚನೆ …

Read More »

ಅಂಬಲಿಯೊಡೆಯ ಶ್ರೀ ಅಡವಿಸಿದ್ಧೇಶ್ವರ ರಥೋತ್ಸವ.!

ಅಂಬಲಿಯೊಡೆಯ ಶ್ರೀ ಅಡವಿಸಿದ್ಧೇಶ್ವರ ರಥೋತ್ಸವ.!  ಯುವ ಭಾರತ ಸುದ್ದಿ  ಗೋಕಾಕ: ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಅಂಬಲಿಯೊಡೆಯ ಶ್ರೀ ಅಡವಿಸಿದ್ಧೇಶ್ವರ ರಥೋತ್ಸವ ಸಾವಿರಾರು ಭಕ್ತಸಮೂಹದೊಂದಿಗೆ ಅದ್ದೂರಿಯಾಗಿ ಜರುಗಿತು. ಶ್ರೀ ಅಡವಿಸಿದ್ದೇಶ್ವರ ರಥಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಜಿ ಪೂಜೆ ನೆರವೆರಿಸುವ ಮೂಲಕ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಯಚೂರು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಈ ಸಂದರ್ಭದಲ್ಲಿ ರಾಯಚೂರು ನವಲಕಲ್ಲು ಬೃಹನ್ಮಠದ …

Read More »

ಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ-ಮುರುಘರಾಜೇಂದ್ರ ಶ್ರೀ.!

ಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ-ಮುರುಘರಾಜೇಂದ್ರ ಶ್ರೀ.!  ಯುವ ಭಾರತ‌ ಸುದ್ದಿ  ಗೋಕಾಕ: ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಶುಕ್ರವಾರದಂದು ನಗರದ ಸಮುದಾಯ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಸಮೃದ್ಧಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಗೋಕಾಕ ಹಾಗೂ ಕಾರ್ಮಿಕ ಇಲಾಖೆ …

Read More »

ಗುರುವಿನ ಆಶೀರ್ವಾದದಿಂದ ಅಮೃತಜೀವನ ಸಾಧ್ಯ– ಮುರುಗೋಡ ನೀಲಕಂಠ ಶ್ರೀ

ಗುರುವಿನ ಆಶೀರ್ವಾದದಿಂದ ಅಮೃತಜೀವನ ಸಾಧ್ಯ– ಮುರುಗೋಡ ನೀಲಕಂಠ ಶ್ರೀ ಗೋಕಾಕ: ಮಠ-ಮಾನ್ಯಗಳು, ಜಾತ್ರೆಗಳಲ್ಲಿ ಭಾಗವಹಿಸುವುದರಿಂದ ನಾಡಿನ ಅನೇಕ ಮಠಾಧೀಶರ ಆಶೀರ್ವಾದ ಸಿಗುತ್ತದೆ ಇದರಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಮುರಗೋಡದ ಮಹಾಂತ ದುರುದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು ಆಶೀರ್ವದಿಸಿದರು. ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದೇಶ್ವರ ಜಾತ್ರ ಮಹೋತ್ಸವದ ಕುಂದರನಾಡೋತ್ಸವ-೨೦೨೨ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಗೋಕಾಕ: ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ …

Read More »