Breaking News

ಶ್ರೀರಾಮಸೇನೆಯ ರಮಾಕಾಂತ ಕೊಂಡುಸ್ಕರ ಈಗ ಎಂಇಎಸ್ ಅಭ್ಯರ್ಥಿ !

Spread the love

ಶ್ರೀರಾಮಸೇನೆಯ ರಮಾಕಾಂತ ಕೊಂಡುಸ್ಕರ ಈಗ ಎಂಇಎಸ್ ಅಭ್ಯರ್ಥಿ !

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಂಇಎಸ್ ಅಭ್ಯರ್ಥಿಯಾಗಿ ರಮಾಕಾಂತ ಕೊಂಡುಸ್ಕರ ಆಯ್ಕೆಯಾಗಿದ್ದಾರೆ.

ಶನಿವಾರ ನಗರದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಮಾಕಾಂತ ಕೊಂಡುಸ್ಕರ ಅವರನ್ನು ಎಂಇಎಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ರಮಾಕಾಂತ ಕೊಂಡುಸ್ಕರ ಈ ಮೊದಲು ಪ್ರಮೋದ ಮುತಾಲಿಕ ಅವರ ಶ್ರೀರಾಮಸೇನೆಯಲ್ಲಿ ಗುರುತಿಸಿಕೊಂಡಿದ್ದರು. ನಂತರ ಅದರಿಂದ ಹೊರಬಂದು ಶ್ರೀರಾಮ ಸೇನೆ ಹಿಂದುಸ್ತಾನ ಹೆಸರಿನಲ್ಲಿ ತಮ್ಮದೇ ಆದ ಸಂಘಟನೆ ಅಸ್ತಿತ್ವಕ್ಕೆ ತಂದಿದ್ದರು. ಕನ್ನಡ ಹಾಗೂ ಮರಾಠಿ ಭಾಷಿಕರು ಈ ಸಂಘಟನೆಯಲ್ಲಿ ಇದ್ದರು. ಆದರೆ, ರಮಾಕಾಂತ ಕೊಂಡುಸ್ಕರ ಕೆಲ ತಿಂಗಳುಗಳ ಹಿಂದೆ ಎಂಇಎಸ್ ನಿಯೋಗದೊಂದಿಗೆ ಮುಂಬೈಗೆ ತೆರಳಿ ಶಿವಸೇನಾ ಬಾಳ ಸಾಹೇಬ್ ಠಾಕ್ರೆ ಬಣದ ಅಧ್ಯಕ್ಷ ಉದ್ದವ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಇದೀಗ ಅವರು ಕಟ್ಟಾ ಎಂಇಎಸ್ ಜೊತೆ ಸೇರಿಕೊಂಡಿರುವುದರಿಂದ ಈ ಹಿಂದೆ ಅವರೊಂದಿಗಿದ್ದ ಕನ್ನಡ ಭಾಷಿಕರು ಅತಂತ್ರರಾಗುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಭಯ ಪಾಟೀಲ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಭಾವತಿ ಚಾವಡಿ ಕಣಕ್ಕಿಳಿದಿದ್ದಾರೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ಸಂಭಾಜಿ ಪಾಟೀಲ ಎಂಇಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ, 2018 ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ತೀವ್ರವಾಗಿ ಪರಾಭವಗೊಂಡಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four + 10 =