Breaking News

ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯದ ಮುಂದೆ ಗ್ಯಾರೆಂಟಿ ಕಾರ್ಡ್ ನೆಲಕಚ್ಚಲಿದೆ : ಅರುಣ ಸಿಂಗ್

Spread the love

ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯದ ಮುಂದೆ ಗ್ಯಾರೆಂಟಿ ಕಾರ್ಡ್ ನೆಲಕಚ್ಚಲಿದೆ : ಅರುಣ ಸಿಂಗ್

ಯುವ ಭಾರತ ಸುದ್ದಿ ಬೆಳಗಾವಿ:
ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮುಂದೆ ಗ್ಯಾರೆಂಟಿ ಕಾರ್ಡ್ ಹಂಚುತ್ತಿರುವ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭವಿಷ್ಯ ನುಡಿದರು.

ಗುರುವಾರ ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಾಗೂ ಜಿಲ್ಲೆಯಾದ್ಯಂತ ನಡೆದಿರುವ ರೈಲ್ವೆ ನಿಲ್ದಾಣದ ಆಧುನಿಕರಣ, ಹೆದ್ದಾರಿಗಳ ಕಾಮಗಾರಿ, ಹೆಲಿಕಾಪ್ಟರ್ ತಯಾರಿಕಾ ಘಟಕ, ಐಐಟಿ ಉದ್ಘಾಟನೆಯಾಗಿದ್ದು ರೈತ ವಿದ್ಯಾನಿಧಿ, ಕಿತ್ತೂರು ಕರ್ನಾಟಕ ನಿಗಮ, ಲಿಂಗಾಯತ ಮತ್ತು ಮರಾಠ ನಿಗಮಗಳ ಸ್ಥಾಪನೆ ಹಿಂದುಳಿದ ಅನೇಕ‌ ಸಮಾಜಗಳ ಅಭಿವೃದ್ಧಿ ನಿಗಮ ಸ್ಥಾಪನೆ, ಬಸವಣ್ಣನವರ ಅನುಭವ ಮಂಟಪದ ನಿರ್ಮಾಣ, ರಾಣಿ ಚನ್ನಮ್ಮಾಜಿಯ ಕೋಟೆ ನಿರ್ಮಾಣ ನಡೆದಿರುವುದು ಹಾಗೂ ಎಸ್ಸಿ.ಎಸ್ಟಿ ಮಿಸಲಾತಿ ಹೆಚ್ಚಳ, ಲಿಂಗಾಯತ ಮತ್ತು ಒಕ್ಕಲಿಗ ಸಮಾಜಕ್ಕೆ 2ಡಿ, 2ಸಿ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದ ಬಿಜೆಪಿ ಸರ್ಕಾರದ ಸಾಧನೆಗಳನ್ನ ಮುಂದಿಟ್ಟುಕೊಂಡು ಜನತೆಯ ಮುಂದೆ ಮತಯಾಚನೆ ಮಾಡುತ್ತೆವೆ.
ಹತ್ತು ಜನ ಸ್ಟಾರ್ ಪ್ರಚಾರಕರು ಸಿಗದೆ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು ಸಮಾಜದಲ್ಲಿ ಗಲಬೆ ನಡಸಿ ಹತ್ತು ಹಲವಾರು ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಚುನಾವಣೆಯ ಪ್ರಚಾರಕರಾಗಿರುವುದು ಅದರ ಅಧಃಪತನದ ದಾರಿ ತೋರಿಸುತ್ತದೆ. ಇಂತಹ ಪಕ್ಷಕ್ಕೆ ಸೇರಿ ಬಿಜೆಪಿ ನಾಯಕರ ಬಗ್ಗೆ ಅಪವಾದ ಮಾಡುತ್ತಿರುವುದು ಮಹಾ ಪಾಪದ ಕೆಲಸ. ಕುಟುಂಬವನ್ನು ಬಿಟ್ಟು ದೇಶಕ್ಕಾಗಿ ಜೀವನವನ್ನೆ ದಾರಿ ಎರೆದು ಪಕ್ಷ ಕಟ್ಟುತ್ತಿರುವವವರು ಬಗ್ಗೆ ಟೀಕೆ ಮಾಡುವುದು ಸರಿಯಾದ ಮಾರ್ಗವಲ್ಲ ಎಂದು ಶೆಟ್ಟರ್ ಹಾಗೂ ಸವದಿಯವರಿಗೆ ಟಾಂಗ್ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾರಾಷ್ಟ ರಾಜ್ಯದ ಉನ್ನತ ಶಿಕ್ಷಣ ಹಾಗೂ ವೈಧ್ಯಕೀಯ ಸಚಿವ ಗಿರೀಶ್ ಮಹಾಜನ, ರಾಜ್ಯ ವಕ್ತಾರರಾದ ಎಮ್.ಬಿ.ಝೀರಲಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾನಗರ ಅಧ್ಯಕ್ಷ ಅನೀಲ ಬೆನಕೆ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಮಾಧ್ಯಮ ಸಂಚಾಲಕ ಎಪ್.ಎಸ್.ಸಿದ್ದನಗೌಡರ ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

16 + 17 =