Breaking News

ದಿ.ಉಮೇಶ ಕತ್ತಿ ಅವರ ಬೆಲ್ಲದ ಬಾಗೇವಾಡಿ ನಿವಾಸಕ್ಕೆ ಶಾಸಕ ರಮೇಶ ಜಾರಕಿಹೊಳಿ ಭೇಟಿ.!

Spread the love

ದಿ.ಉಮೇಶ ಕತ್ತಿ ಅವರ ಬೆಲ್ಲದ ಬಾಗೇವಾಡಿ ನಿವಾಸಕ್ಕೆ ಶಾಸಕ ರಮೇಶ ಜಾರಕಿಹೊಳಿ ಭೇಟಿ.!


ಗೋಕಾಕ: ಅರಣ್ಯ ಹಾಗೂ ಆಹಾರ ಸಚಿವರಾಗಿದ್ದ ದಿ.ಉಮೇಶ ಕತ್ತಿ ಉತ್ತರ ಕರ್ನಾಟಕದ ಪ್ರಭಲ ಧ್ವನಿಯಾಗಿದ್ದವರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದ ಉಮೇಶ ಕತ್ತಿಯವರನ್ನು ಕಳೆದುಕೊಂಡ ಈ ನಾಡು ಬಡವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ದಿ.ಉಮೇಶ ಕತ್ತಿ ಅವರ ಬೆಲ್ಲದ ಬಾಗೇವಾಡಿ ನಿವಾಸಕ್ಕೆ ಭೇಟಿ ನೀಡಿ ಉಮೇಶ ಕತ್ತಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೃತ ಉಮೇಶ ಕತ್ತಿ ಸಹೋದರ ರಮೇಶ ಕತ್ತಿ, ಪುತ್ರ ನಿಖಿಲ ಕತ್ತಿ ಸೇರಿದಂತೆ ಕುಟುಂಬದವರಿಗೆ ಸಾಂತ್ವನ ಹೇಳಿ, ಮಾತನಾಡಿದರು.


ನಾಲ್ಕು ದಶಕಗಳ ಕಾಲ ಪ್ರಬುದ್ಧ ರಾಜಕಾರಣಿಯಾಗಿದ್ದ ಉಮೇಶ ಕತ್ತಿ ಅವರು ನಮ್ಮನ್ನಗಲಿದ್ದರು. ಜನಮಾನಸದಲ್ಲಿ ಸದಾ ನೆಲಸಿದ್ದಾರೆ. ಆರೋಗ್ಯ ಬಗ್ಗೆ ಕಾಳಜಿ ವಹಿಸುವಂತೆ ನಾನು ಸಹ ಉಮೇಶ ಕತ್ತಿಯವರಿಗೆ ತಿಳಿಸಿದ್ದೆ ಆದರೆ ಐವತ್ತು ವರ್ಷ ಪೂರೈಸಿದ ಮೇಲೆ ಇನ್ನುಳಿದ ಆಯಸ್ಸು ಬೋನಸ್ ಇದ್ದಂತೆ ಎಂದು ಉಮೇಶ ಕತ್ತಿ ಹೇಳುತ್ತಿದ್ದರು. ಉಮೇಶ ತನ್ನ ಮನಸ್ಸಿನಲ್ಲಿ ಇದ್ದದನ್ನು ನೇರವಾಗಿ ಹೇಳುತ್ತಿದ್ದರು ಎಂದು ಉಮೇಶ ಕತ್ತಿವರನ್ನು ಸ್ಮರಿಸಿದರು.
ಉಮೇಶ ಕತ್ತಿಯವರು ಹಿರಿಯ ರಾಜಕೀಯ ಜೀವಿಯಾಗಿದ್ದರು. ಜಾರಕಿಹೊಳಿ ಮತ್ತು ಕತ್ತಿ ಕುಟುಂಬ ಮುಂದೆಯೂ ಸಹೋದರರಾಗಿ ಕೂಡಿ ಸಾಗೋಣ. ಉಮೇಶ ಕತ್ತಿಯವರ ಕನಸನ್ನು ನನಸು ಮಾಡಲು ಶ್ರಮಿಸೋಣ. ದೇವರು ಉಮೇಶ ಕತ್ತಿಯವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.


Spread the love

About Yuva Bharatha

Check Also

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ.!

Spread the loveಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ.! ಗೋಕಾಕ: ತಾಲೂಕಿನ ಮರಡಿ …

Leave a Reply

Your email address will not be published. Required fields are marked *

11 − one =