Breaking News

ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮ ಕಂಡು ಕಾಂಗ್ರೇಸ್‌ಗೆ ನಡುಕ.!

Spread the love

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಗೋಕಾಕ ಮತಕ್ಷೇತ್ರದಲ್ಲಿ ಮತಯಾಚನೆ.!


ಗೋಕಾಕ: ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನತೆಯನ್ನು ಕಂಡು ಕಾಂಗ್ರೇಸ್ ಅಭ್ಯರ್ಥಿ ಹಾಗೂ ಕಾಂಗ್ರೇಸ್ ನಾಯಕರಿಗೆ ನಡುಕ ಶುರುವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.

ಅವರು, ಸೋಮವಾರದಂದು ಖನಗಾಂವ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಚಾರಾರ್ಥ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಕಂಡು ಕಂಗಾಲಾಗಿರುವ ಕಾಂಗ್ರೇಸ್ ಪಕ್ಷ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಮೋದಿಯವರಂತಹ ನಾಯಕತ್ವ ದೇಶಕ್ಕೆ ಬೇಕಿದೆ. ಕಳೆದ ಹತ್ತು ವರ್ಷಗಳಲ್ಲಿ ಅವರು ಮಾಡಿರುವ ಸಾಧನೆಗಳು ನಮ್ಮ ಕಣ್ಣ ಮುಂದಿದೆ. ಕಾಂಗ್ರೆಸ್ ಮೋದಿಯರನ್ನು ಟೀಕೆ ಮಾಡುವದು ಬಿಟ್ಟು ಬೇರೆ ಯಾವುದೇ ಕೆಲಸ ಇಲ್ಲ. ಮೋದಿಯವರು ಪ್ರಧಾನಿಯಾಗುವ ಮುಂಚೆ ಭಾರತ ದೇಶÀ ಆರ್ಥಿಕ ಪ್ರಗತಿಯಲ್ಲಿ ೧೪ನೇ ಸ್ಥಾನದಲ್ಲಿತ್ತು. ಸದ್ಯ ೫ನೇ ಸ್ಥಾನಕ್ಕೆ ಬಂದಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ೩ನೇ ಸ್ಥಾನ ತಲುಪಲಿದೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ೧ನೇ ಸ್ಥಾನಕ್ಕೆ ಬರಲಿದೆ ವಿಶ್ವಾಸ ವ್ಯಕ್ತಪಡಿಸಿದರು.
ಜಗತ್ತಿನ ಜನಪ್ರಿಯ ವ್ಯಕ್ತಿ ಮೋದಿ. ಮೋದಿಯವರನ್ನು ಅಲುಗಾಡಿಸಲು ಕಾಂಗ್ರೇಸ್‌ನಿAದ ಸಾಧ್ಯವಿಲ್ಲ. ಜನರ ದುಡಿದ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ದೇಶದ ಅಭಿವೃದ್ಧಿಗೆ ಬಿಜೆಪಿ ಸರಕಾರದ ಪಾತ್ರ ಮಹತ್ವದ್ದಾಗಿದೆ. ಸುರೇಶ ಅಂಗಡಿ ಬೆಳಗಾವಿ ಅಭಿವೃದ್ಧಿಗೆ ಸ್ಮಾರ್ಟ ಸಿಟಿ, ರೈಲುಗಳ ವ್ಯವಸ್ಥೆ, ಬ್ರೀಡ್ಜಗಳ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಉಳಿದ ಯೋಜನೆಗಳನ್ನು ಅನುಷ್ಠಾನಗೊಳಿಸುವದರೊಂದಿಗೆ ಅವರ ಕನಸನ್ನು ನನಸು ಮಾಡುವ ಮೂಲಕ ಬೆಳಗಾವಿ ಜಿಲ್ಲೆಯನ್ನು ದೇಶದಲ್ಲೇ ಮಾದರಿಯಾಗಿ ಮಾಡುತ್ತೇನೆ ಎಂದರು.


ಗಡಿಯ ಕಾಯುವ ಸೈನಿಕರು ಈ ಮೊದಲು ಶತ್ರು ರಾಷ್ಟçಗಳ ಸೈನಿಕರಿಂದ ಗುಂಡುಗಳು ಬಂದಲ್ಲಿ ಸರಕಾರ ಅಪ್ಪಣೆ ಪಡೆಯಬೇಕಿತ್ತು ಈಗ ಒಂದು ಗುಂಡು ಶತ್ರು ರಾಷ್ಟçದಿಂದ ಬಂದಲ್ಲಿ ಹತ್ತು ಗುಂಡು ನಮ್ಮ ಸೈನಿಕರಿಂದ ಶತ್ರು ರಾಷ್ಟçದ ಸೈನಿಕರ ವಿರುದ್ಧ ಹೋಗುತ್ತಿವೆ. ಅಂತಹ ಮೇರು ನಾಯಕತ್ವವನ್ನು ಹೊಂದಿರುವ ಮೋದಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಆರ್ಟಿಕಲ್ ೩೭೦ ತೆಗೆದುಹಾಕಿ ಅಲ್ಲಿರುವ ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾಧನೆಯ ಸದ್ದಡಗಿ ಇಂದು ಪ್ರವಾಸಿತಾಣವಾಗಿ ಮಾರ್ಪಟ್ಟಿದೆ. ನಮ್ಮೆಲ್ಲರ ಕನಸಾಗಿದ್ದ ಅಯೋಧ್ಯೆಯ ರಾಮಮಂದಿರ ಕನಸು ನನಸು ಮಾಡಿದ್ದಾರೆ. ಚೈನಾ ಅರುಣಾಚಲ ಪ್ರದೇಶದಲ್ಲಿ ಆಕ್ರಮಿಸಲು ಪ್ರಯತ್ನಿಸಿದ ಚೈನಾಗೆ ತಕ್ಕ ಪಾಠ ನೀಡಿದ ಮೋದಿಯವರನ್ನು ೩ನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಅವರ ಪ್ರತಿನಿಧಿಯಾಗಿರುವ ನನಗೆ ಕ್ರಮ ಸಂಖ್ಯೆ ೨ಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಶಾಸಕ ರಮೇಶ ಜಾರಕಿಹೊಳಿ ಅವರು ಮಾತನಾಡಿ, ಈ ಮೊದಲು ಭಾರತ ದೇಶದ ಪ್ರಧಾನ ಮಂತ್ರಿಯವರನ್ನು ಬೇರೆ ದೇಶಗಳ ನೋಡುವ ದೃಷ್ಟಿಕೋನ ಬೇರೆಯಾಗಿತ್ತು. ಇಂದು ದೇಶಕ್ಕೆ ಜಾಗತಿಕ ಮನ್ನಣೆ ಸೀಗುವದರೊಂದಿಗೆ ಮೋದಿಯವರು ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಮುಂದೆ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದಾಗಿAದ ಬಾಂಬ್ ಸಂಸ್ಕೃತಿ, ಕೋಮುವಾದ ಪ್ರಾರಂಭವಾಗಿದೆ. ಕಾಂಗ್ರೆಸ್ ಸುಳ್ಳು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕಳೆದ ಐದಾರು ತಿಂಗಳಿನಿAದ ಗೃಹಲಕ್ಷಿö್ಮÃ ೨ಸಾವಿರ ರೂ ಜಮಾ ಆಗಿರಲಿಲ್ಲ. ಈಗ ಚುನಾವಣೆ ಹಿನ್ನಲೆಯಲ್ಲಿ ಜಮಾ ಮಾಡಿದ್ದಾರೆ. ಚುನಾವಣೆ ನಂತರ ಅದನ್ನು ಬಂದ್ ಮಾಡ್ತಾರೆ. ಇಂತಹ ಕ್ಷಣಿಕ ಗ್ಯಾರಂಟಿಗಳಿಗೆ ಮರುಳಾಗದೇ ಮಹಿಳೆಯರು ಮೋದಿಯವರ ಶಾಶ್ವತ ಗ್ಯಾರಂಟಿಗಳನ್ನು ನೋಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಮೋದಿಯವರನ್ನು ಮತ್ತೋಮ್ಮೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಮಾತ್ರ ಕೆಟ್ಟ ಶಬ್ದಗಳು ಬರುತ್ತವೆ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಡಿಮೆ ಸಂಖ್ಯೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಿದ್ದಾರೆ ಅವರು ಹೇಗೆ ಪ್ರಧಾನಿಯಾಗಲು ಸಾಧ್ಯ. ಇಂದಿರಾ ಗಾಂಧಿ ಕಾಂಗ್ರೆಸ್ ಬೇರೆ ಈಗಿನ ಕಾಂಗ್ರೆಸ್ ಬೇರೆ. ಸ್ವಾರ್ಥ, ಬಾಗಿಲು ಕಾಯುವವರಿಗೆ ಮತ್ತು ಬ್ಯಾಗ್ ಹಿಡಿಯುವವರಿಗೆ ಮಾತ್ರ ನಾಯಕತ್ವ ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಈ ಮೊದಲು ಅಡುಗೆಗೆ ಉರುವಲು ಕಟ್ಟಿಗೆ ಬಳಸುವ ಜನ ಸದ್ಯ ಪ್ರಧಾನಿ ಮೋದಿಯವರ ಉಜ್ವಲ ಯೋಜನೆ ಮೂಲಕ ಎಲ್ಲರ ಮನೆಗಳಿಗೆ ಗ್ಯಾಸ ನೀಡಿದ್ದಾರೆ. ಎಲ್ಲರ ಆರೋಗ್ಯ ಚಿಕಿತ್ಸೆಗೆ ಐದು ಲಕ್ಷದ ವರೆಗೆ ಕೇಂದ್ರ ಸರಕಾರ ನೀಡುತ್ತಿದೆ. ಪ್ರಧಾನಿ ಮೋದಿಯವರು ನನ್ನ ಹಳೆಯ ಮಿತ್ರ ಜಗದೀಶ ಶೆಟ್ಟರ ಅವರನ್ನು ಗೆಲ್ಲಿಸಲು ವಿನಂತಿಸಿಕೊAಡಿದ್ದಾರೆ. ಜಗದೀಶ ಶೆಟ್ಟರ ಅವರಿಗೆ ಮತ ನೀಡುವ ಮೂಲಕ ಕೇಂದ್ರ ಸಚಿವರನ್ನಾಗಿಸಿ ಜಿಲ್ಲೆಯನ್ನು ಅಭಿವೃದ್ಧಿಪಡಿಸೋಣ ಎಂದರು.


ತಾಲೂಕಿನ ಅಂಕಲಗಿ, ಮಮದಾಪೂರ, ಖನಗಾಂವ ಹಾಗೂ ಕೊಣ್ಣುರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬೃಹತ್ ಪ್ರಚಾರಾರ್ಥ ಸಮಾರಂಭವನ್ನು ಆಯೋಜಿಸುವ ಮೂಲಕ ಮತಯಾಚನೆ ಮಾಡಿದರು. ಈ ಸಮಾರಂಭಗಳಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.

ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

2 × 5 =