Breaking News

ಹಣ ಪಡೆದು ಭ್ರೂಣ ಪತ್ತೆ ಮಾಡುತ್ತಿದ್ದ ಇಕ್ರಾ ಆಸ್ಪತ್ರೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಆಸ್ಪತ್ರೆ ಸೀಜ್.!

Spread the love

ಹಣ ಪಡೆದು ಭ್ರೂಣ ಪತ್ತೆ ಮಾಡುತ್ತಿದ್ದ ಇಕ್ರಾ ಆಸ್ಪತ್ರೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಆಸ್ಪತ್ರೆ ಸೀಜ್.!

ಗೋಕಾಕ: ಅನಧಿಕೃತ ಭ್ರೂಣ ಪತ್ತೆ ಮಾಡುತ್ತಿದ್ದ ಆಸ್ಪತ್ರೆ ಮೇಲೆ ಅಧಿಕಾರಿಗಳ ದಾಳಿ ನಡೆಸಿ ನಗರದ ಇಕ್ರಾ ಆಸ್ಪತ್ರೆಯನ್ನು ಸೀಜ್ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಡೆಪ್ಯೂಟಿ ಡೈರೆಕ್ಟರ್ ಕೆಪಿಎಂಇ, ಪಿಸಿಪಿಎನ್‌ಡಿಟಿ ಬೆಂಗಳೂರಿನ ಡಾ.ವಿವೇಕ ದೊರೆ ಇವರ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆದಿದ್ದು, ಬೆಳಗಾವಿ ಡಿಎಚ್ ಓ ಹಾಗೂ ಗೋಕಾಕ್ ಟಿಎಚ್ ಓ ಸ್ಥಳಕ್ಕೆ ಧಾವಿಸಿದ್ದು, ಏಜೆಂಟ್ ತುಕಾರಾಂ ಖೋತ ಮೂಲಕ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕ ಬಿದ್ದ ವೈದ್ಯ ಕುತೀಜಾ ಸಿಕ್ಕಿಬಿದ್ದಿದ್ದಾರೆ.
ಬ್ರೂಣ ಪತ್ತೆಗೆ ವೈದ್ಯ ಖುಟೇಜಾ ದಂಡರಗಿ ೮೦ಸಾವಿರ ಪಡೆಯುತ್ತಿದ್ದಾಗ ಸಿಕ್ಕಿಬಿದ್ದು, ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ದಾಳಿಯಲ್ಲಿ ಡಿಎಚ್‌ಓ ಡಾ.ಮಹೇಶ ಕೋಣಿ, ಟಿಎಚ್‌ಓ ಡಾ.ಮುತ್ತಣ್ಣ ಕೊಪ್ಪದ, ಪಿಎಸ್‌ಐ ಕೆ ವಾಲಿಕಾರ ಇದ್ದರು.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

1 × four =