ಖನಗಾಂವ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ.!
ಗೋಕಾಕ: ತಾಲೂಕಿನ ಖನಗಾಂವ ಗ್ರಾಮದಲ್ಲಿ 2023-24ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಮಿನಿ ಮಟೇರಿಯಲ್ ರಿಕವರಿ ಘಟಕ ನಿರ್ಮಾಣ 2.30ಕೋಟಿ ರೂ ಮತ್ತು ಸ್ಲಡ್ಜ ಮ್ಯಾನೆಜಮೆಂಟ ಘಟಕ ನಿರ್ಮಾಣ ಕಾಮಗಾರಿ (ಚರಂಡಿಯ ತ್ಯಾಜ್ಯ ಹಾಗೂ ನಿಂತ ನೀರು ಸಂಗ್ರಹಿಸಿ ಗೊಬ್ಬರ ತಯಾರಿಕೆ) 0.92 ಕೋಟಿ ಕಾಮಗಾರಿಗೆ ಯುವನಾಯಕ ಅಮರನಾಥ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ, ಜಿಪಂ ಕಿರಿಯ ಅಭಿಯಂತ ಶಿವಲಿಂಗ, ಸಿದ್ಧಗೌಡ ಪಾಟೀಲ, ಸಿದ್ದಪ್ಪ ದೇಸಾಯಿ, ಶಿವಾನಂದ ಪಾಟೀಲ, ರಾಮಣ್ಣ ಪೂಜೇರಿ, ನಿಂಗಪ್ಪ ಅಂಗಲಿ, ಬಸಪ್ಪ ಹಮ್ಮಿಣಿ, ರಾಮಪ್ಪ ಡಬ್ಬನವರ, ಶಿದ್ಲಿಂಗಪ್ಪ ಮುತವಾಡ ಸೇರಿ ದಂತೆ ಖನಗಾಂವ ಗ್ರಾಮ ಪಂಚಾಯತ ಸದಸ್ಯರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.