Breaking News

ಮಲಪ್ರಭಾ ನದಿಯಲ್ಲಿ ಹೆಚ್ಚಿದ ಒಳಹರಿವು.. ಬಾದಾಮಿ-ಹೊಳೆ ಆಲೂರ ರಸ್ತೆ ಸಂಪರ್ಕ ಸೇತುವೆ ಮುಳುಗಡೆ.!

Spread the love

ಮಲಪ್ರಭಾ ನದಿಯಲ್ಲಿ ಹೆಚ್ಚಿದ ಒಳಹರಿವು..
ಬಾದಾಮಿ-ಹೊಳೆ ಆಲೂರ ರಸ್ತೆ ಸಂಪರ್ಕ ಸೇತುವೆ ಮುಳುಗಡೆ.!

 

 

 

ಬಾಗಲಕೋಟೆ: ಮಹಾರಾಷ್ಟ್ರ, ಬೆಳಗಾವಿ ಹಾಗೂ ಧಾರವಾಡದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಬೆಣ್ಣಿ ಹಳ್ಳದ ನೀರು ಮಲಪ್ರಭಾ ನದಿಗೆ ಸೇರಿ ಒಳಹರಿವು ಹೆಚ್ಚಳವಾಗಿದ್ದು, ಬಾಗಲಕೋಟೆಯ ಬಾದಾಮಿ-ಹೊಳೆಆಲೂರ ಸಂಪರ್ಕ ಸೇತುವೆಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಮಲಪ್ರಭಾ ನದಿಯಲ್ಲಿ ಹೆಚ್ಚಿದ ಒಳಹರಿವಿನಿಂದ ಬಾದಾಮಿ ಮತ್ತು ಹೊಳೆ ಆಲೂರಿನ ಜನ ರೈಲ್ವೆ ಸೇತುವೆ ಮೂಲಕ ಸಂಚಾರ ಮಾಡಬೇಕಾಗಿದೆ. ಇದರಿಂದ ಬಾದಾಮಿ ತಾಲೂಕಿನ ನೀರಲಗಿ, ಜಕನೂರ, ತಮ್ಮನಾಳ ಗ್ರಾಮದ ಜನ ಹೈರಾಣಾಗಿದ್ದಾರೆ. ನದಿಯ ತೀರದಲ್ಲಿದ್ದ ಬಸವೇಶ್ವರ ದೇಗುಲ ಜಲಾವೃತವಾಗಿದೆ. ಮಲಪ್ರಭಾ ನದಿಯ ಪ್ರವಾಹದಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

14 + 18 =