Breaking News

ಹುಮ್ಮಸ್ಸಿನಿಂದ ಬ್ಯಾಟ್ ಬಿಸಿ ನೆರೆದವರ ಗಮನ ಸೆಳೆದ ಸಚಿವ ರಮೇಶ ಜಾರಕಿಹೊಳಿ.!

Spread the love


ಗೋಕಾಕ: ಬೆಳಗಾವಿ ಜಿಲ್ಲಾ ಪೊಲೀಸ, ಗೋಕಾಕ ಪೊಲೀಸ ಉಪ ವಿಭಾಗ ಹಮ್ಮಿಕೊಂಡ ಇ.ಆರ್ ಎಸ್.ಎಸ್. ೧೧೨ ತುರ್ತು ಸೇವಾ ಸಹಾಯವಾಣಿ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಪ್ರಯುಕ್ತ ನಡೆದ ಸ್ನೇಹ ಪೂರ್ವ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ರವಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬ್ಯಾಟ ಬಿಸೂವ ಮೂಲಕ ಉದ್ಘಾಟಿಸಿದರು.
ತನ್ನ ಕಾಲೇಜು ದಿನಗಳ ಕ್ರಿಕೆಟ್ ಆಟದ ಕ್ಷಣಗಳನ್ನು ನೆನೆದು ಹುಮ್ಮಸ್ಸಿನಿಂದ ಬ್ಯಾಟ್ ಬಿಸಿ ನೆರೆದವರ ಗಮನ ಸೆಳೆದರು. ಗ್ರಾಮೀಣ ಭಾಗದಲ್ಲಿಕ್ರಿಕೆಟ ಆಟದ ಕುರಿತು ಆಸಕ್ತಿ ಮೂಡಿಸುವ ಮೂಲಕ ಆಟಗಾರರನ್ನು ಸಿದ್ಧಗೊಳಿಸಬೇಕಾಗಿದೆ ಎಂದರು.
ಸ್ನೇಹಾ ಪೂರ್ವ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಪ್ರತಕರ್ತರ ತಂಡ, ವಕೀಲರ ತಂಡ, ಆರೋಗ್ಯ ಇಲಾಖೆ ತಂಡ, ಶಿಕ್ಷಣ ಇಲಾಖೆ ತಂಡ, ಪೊಲೀಸ ಹಾಗೂ ಕಂದಾಯ ಇಲಾಖೆಯ ಆಟಗಾರರು ಭಾಗವಹಿಸಿ ತಮ್ಮ ಆಟವನ್ನು ಪ್ರದರ್ಶಿಸಿದರು.
ಕೊನೆಯಲ್ಲಿ ಆರೋಗ್ಯ ಇಲಾಖೆ ಹಾಗೂ ವಕೀಲರ ತಂಡದ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಆರೋಗ್ಯ ಇಲಾಖೆಯ ಆಟಗಾರರು ಗೆಲುವನ್ನು ಸಾಧಿಸುವ ಮುಖೇನ ೧೧೨ ಟ್ರೋಫಿಯನ್ನು ತನ್ನದಾಗಿಸಿಕೊಂಡರು.
ನಂತರ ನಡೆದ ಬಹುಮಾನ ವಿತರಣಾ ಸಭಾಂಗಣದಲ್ಲಿ ಗೋಕಾಕ ಡಿ.ವಾಯ್.ಎಸ್.ಪಿ ಜಾವೇದ ಇನಾಂದಾರ ಅವರು ಎಲ್ಲ ಆಟಗಾರರಿಗೆ ಪ್ರಶಸ್ತಿ ವಿತರಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಟಿ.ಆರ್.ಕಾಗಲ, ಮಡೆಪ್ಪಾ ತೋಳಿನವರ, ಬಿಇಒಗಳಾದ ಅಜೀತ ಮನ್ನಿಕೇರಿ, ಜಿ.ಬಿ.ಬಳಗಾರ, ಸಿಪಿಐಗಳಾದ ಶ್ರೀಶೈಲ ಬ್ಯಾಕೂಡ, ಗೋಪಾಲ ರಾಠೋಡ, ವೆಂಕಟೇಶ್ ಮುರನಾಳ, ಪಿಎಸ್‌ಐಗಳಾದ ಹನುಮಂತ ನೆರಳೆ, ನಾಗರಾಜ ಖೀಲಾರಿ, ಕೆ.ಬಿ.ವಾಲಿಕರ, ಹಾಲಪ್ಪ ಬಾಲದಂಡಿ, ರವೀಂದ ಕುವಳ್ಳಿ, ಪ್ರಕಾಶ ರಾಠೋಡ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ಗೋಕಾಕ ಮತಕ್ಷೇತ್ರದಲ್ಲಿ ಝಣಝಣ ಕಾಂಚಾಣ ಸದ್ದು, ಕಾಂಗ್ರೇಸ್ ಅಭ್ಯರ್ಥಿಯಿಂದ ಮತದಾರರಿಗೆ ಹಣದ ಆಮಿಷ.!

Spread the loveಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.! ಗೋಕಾಕ: ಲೋಕಸಭಾ ಚುನಾವಣೆ ಇನ್ನು …

Leave a Reply

Your email address will not be published. Required fields are marked *

one × five =