Breaking News

Yuva Bharatha

ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ : ಆದರೆ, ವೋಟ್ ಶೇರಿಂಗ್ ನಲ್ಲಿ ಮುಂಚೂಣಿಯಲ್ಲಿ ಕಾಂಗ್ರೆಸ್

ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ : ಆದರೆ, ವೋಟ್ ಶೇರಿಂಗ್ ನಲ್ಲಿ ಮುಂಚೂಣಿಯಲ್ಲಿ ಕಾಂಗ್ರೆಸ್ ಯುವ ಭಾರತ ಸುದ್ದಿ ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜನ್‌ ಕಿ ಬಾತ್‌ ಸುವರ್ಣನ್ಯೂಸ್‌ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್‌ 89 ರಿಂದ 97 ಸ್ಥಾನಗಳನ್ನು …

Read More »

ಅಥಣಿಯಲ್ಲಿ ಸಂಚಲನ ಮೂಡಿಸಿದ ರಮೇಶ ಜಾರಕಿಹೊಳಿ

ಅಥಣಿಯಲ್ಲಿ ಸಂಚಲನ ಮೂಡಿಸಿದ ರಮೇಶ ಜಾರಕಿಹೊಳಿ ಯುವ ಭಾರತ ಸುದ್ದಿ ಅಥಣಿ : ಪಕ್ಷದ ಗೆಲುವನ್ನು ತಮ್ಮ ಗೆಲುವೆಂದುಕೊಂಡು ಪ್ರಚಾರಗಿಟ್ಟಿಸಿಕೊಂಡರು. ಇಂತಹ ಮನಸ್ಥಿತಿ ವ್ಯಕ್ತಿ ಕಾಂಗ್ರೆಸ್‌ ಪಕ್ಷ ಸೇರಿರುವುದರಿಂದ ಪೀಡೆ ತೊಲಗಿ, ನಮ್ಮ ದಾರಿ ಸುಗಮವಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಲೇವಡಿ ಮಾಡಿದರು. ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಬಿಜೆಪಿ ಅಥಣಿ ಮಂಡಲ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ …

Read More »

ಯಡಿಯೂರಪ್ಪ ಅವರನ್ನು ಭೇಟಿಯಾದ ವಿಠ್ಠಲ ಹಲಗೇಕರ

ಯಡಿಯೂರಪ್ಪ ಅವರನ್ನು ಭೇಟಿಯಾದ ವಿಠ್ಠಲ ಹಲಗೇಕರ ಯುವ ಭಾರತ ಸುದ್ದಿ ಬೆಂಗಳೂರು : ಖಾನಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಈ ಸಲ ಟಿಕೆಟ್ ಪಡೆದಿರುವ ವಿಠ್ಠಲ ಹಲಗೇಕರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಶಿಕಾರಿಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಟಿಕೆಟ್ ಪಡೆದುಕೊಂಡಿರುವ ವಿಜಯೇಂದ್ರ ಅವರನ್ನು ಅಭಿನಂದಿಸಿದರು. ಖಾನಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಖಾನಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಯಾಗಿದೆ …

Read More »

ನಾನೆಂದು ಬಿಜೆಪಿ ತೊರೆಯಲಾರೆ : ಕಿರಣ ಜಾಧವ ಸ್ಪಷ್ಟ ನುಡಿ

ನಾನೆಂದು ಬಿಜೆಪಿ ತೊರೆಯಲಾರೆ : ಕಿರಣ ಜಾಧವ ಸ್ಪಷ್ಟ ನುಡಿ ಯುವ ಭಾರತ ಸುದ್ದಿ ಬೆಳಗಾವಿ : ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ಈಗಾಗಲೇ ತನ್ನ ಪಟ್ಟಿ ಬಿಡುಗಡೆ ಮಾಡಿದೆ. ಆ ಬಗ್ಗೆ ಯಾವುದೇ ತಕರಾರು ಇಲ್ಲ. ಪಕ್ಷ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಸರ್ವೆ ನಡೆಸಿಯೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನನಗೆ ಈ ಸಲ ಟಿಕೆಟ್ ತಪ್ಪಿದರೂ ಬಿಜೆಪಿ ತೊರೆಯುವ ಪ್ರಶ್ನೆ ಇಲ್ಲ ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದಿಂದ …

Read More »

ರಾಯಬಾಗನಲ್ಲಿ ಬಿಜೆಪಿ ಟಿಕೆಟ್ ವಂಚಿತ ರಾಜು ಕಿರಣಗಿ ಅವರನ್ನು ಸಂಪರ್ಕಿಸಿದ ಕಾಂಗ್ರೆಸ್ ನಾಯಕರು !

ರಾಯಬಾಗನಲ್ಲಿ ಬಿಜೆಪಿ ಟಿಕೆಟ್ ವಂಚಿತ ರಾಜು ಕಿರಣಗಿ ಅವರನ್ನು ಸಂಪರ್ಕಿಸಿದ ಕಾಂಗ್ರೆಸ್ ನಾಯಕರು ! ಯುವ ಭಾರತ ಸುದ್ದಿ ರಾಯಬಾಗ : ರಾಯಬಾಗ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದ ರಾಜು ಕಿರಣಗಿ ಅವರನ್ನು ಇದೀಗ ಕಾಂಗ್ರೆಸ್ ನಾಯಕರು ತಮ್ಮ ಪಕ್ಷಕ್ಕೆ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ರಾಜು ಕಿರಣಗಿ ಅವರು ರಾಯಬಾಗ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ, ಬಿಜೆಪಿ ಹಾಲಿ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಮತ್ತೆ …

Read More »

ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸವದತ್ತಿಯಿಂದ ಚೋಪ್ರಾ, ಅಥಣಿಯಿಂದ ಪಡಸಲಗಿ ಹೆಸರು !

ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸವದತ್ತಿಯಿಂದ ಚೋಪ್ರಾ, ಅಥಣಿಯಿಂದ ಪಡಸಲಗಿ ಹೆಸರು ! ಯುವ ಭಾರತ ಸುದ್ದಿ ಬೆಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಹೀಗಿದೆ. ಕುಡಚಿ-ಆನಂದ ಮಾಳಗಿ , ರಾಯಬಾಗ – ಪ್ರದೀಪ ಮಾಳಗಿ , ಸವದತ್ತಿ – ಸೌರಭ್ ಆನಂದ್ ಚೋಪ್ರಾ , ಅಥಣಿ – ಶಶಿಕಾಂತ್ ಪಡಸಲಗಿ …

Read More »

ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು

ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಾಂಬೆ ನೀನೇ ವಿಶ್ವ ಮಾನ್ಯಳು ಅಪಮಾನವ ಸಹಿಸಿದ ಅಜ್ಞಾನವ ದಹಿಸಿದ ದೇಶಕೆ ಬೆಳಕು ತೋರಿದ ಅನ್ಯಾಯವ ಮೀರಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತೀಯ ನೀನೇ ಮಾನ್ಯಳು ಮೇಲು-ಕೀಳು ದಳ್ಳುರಿಯನು ಶಿಕ್ಷಣದಲ್ಲಿ ಕರಗಿಸಿ ಶತಮಾನದ ಶತ್ರುಗಳನ್ನು ಸಂಕೋಲೆಯಲಿ ಬಂಧಿಸಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಿ ನೀನೆ ವಿಶ್ವ …

Read More »

ಧೂಪದಾಳ ಜಲಾಶಯದಲ್ಲಿ ನಾಲ್ವರು ತರುಣರು ಸಾವು

ಧೂಪದಾಳ ಜಲಾಶಯದಲ್ಲಿ ನಾಲ್ವರು ತರುಣರು ಸಾವು ಯುವ ಭಾರತ ಸುದ್ದಿ ಘಟಪ್ರಭಾ: ಅಂಬೇಡ್ಕರ ಜಯಂತಿ ರಜೆ ಹಿನ್ನಲೆಯಲ್ಲಿ ಧೂಪದಾಳ ಡ್ಯಾಂ ಗೆ ಈಜಲೂ ಹೋಗಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಒರ್ವ ಪಾರಾಗಿದ್ದಾನೆ. ಒರ್ವನ ಸ್ಥಿತಿ ಚಿಂತಾಜನಕವಾಗಿದ್ದು ಇತರ ನಾಲ್ವರ ಮೃತ್ಯು ವಶವಾಗಿದ್ದಾರೆ. ಪ್ರಾಣಾಪಾಯದಿಂದ ಪಾರು. 1) ವಿಠಲ ಜಾನು ಕೋಕರೆ ವಯಾ 18 ಸಾವು ಬದುಕಿನ ನಡುವೆ ಹೋರಾಟ 2) ರಾಮಚಂದ್ರ ವಿಷ್ಣು ಕೋಕರೆ …

Read More »

ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ.- ಗುರುರಾಜ ಲೂತಿ

ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ.- ಗುರುರಾಜ ಲೂತಿ ಗೋಕಾಕ: ಡಾ. ಬಿ ಆರ್ ಅಂಬೇಡ್ಕರ ಅವರು ನೀಡಿದ ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ ಎಂದು ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ ಬಿಳಗಿ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು. ಅವರು, ಶುಕ್ರವಾರದಂದು ನಗರದ ಸಮುದಾಯ ಭವನದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ, ನಗರಸಭೆ ಹಾಗೂ ತಾಲೂಕಿನ ಸ್ಥಳೀಯ …

Read More »

ಬಸ್-ಕಾರು ಭೀಕರ ಅಪಘಾತ ಆರು ಜನ ಸಾವು

ಬಸ್-ಕಾರು ಭೀಕರ ಅಪಘಾತ ಆರು ಜನ ಸಾವು ಯುವ ಭಾರತ ಸುದ್ದಿ ಮಂಗಳೂರು : ಸುಳ್ಯ ತಾಲೂಕು ಸಂಪಾಜೆ ಬಳಿ ಸರಕಾರಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಆರು ಜನರ ಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಮೂರು ಮಕ್ಕಳು, ಇಬ್ಬರು ಮಹಿಳೆಯರು, ಪುರುಷ ಮೃತ ಪಟ್ಟಿದ್ದಾನೆ. ಮಗು ಹಾಗೂ ಪುರುಷನಿಗೆ ಗಂಭೀರ ಗಾಯಗೊಂಡಿದ್ದು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಗಾಯಗಳಾಗಿವೆ. ಮಂಡ್ಯ ಮೂಲದ …

Read More »