Breaking News

ಅಕ್ರಮ ಮಧ್ಯಮಾರಾಟ ರೈತ ಸಂಘಟನೆಯ ಕಾರ್ಯಕರ್ತರ ಪ್ರತಿಭಟನೆ.!

Spread the love

ಅಕ್ರಮ ಮಧ್ಯಮಾರಾಟ ರೈತ ಸಂಘಟನೆಯ ಕಾರ್ಯಕರ್ತರ ಪ್ರತಿಭಟನೆ.!

 

ಯುವ ಭಾರತ ಸುದ್ದಿ  ಗೋಕಾಕ್: ತಾಲೂಕನ ಸಾವಳಗಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಧ್ಯ ಮಾರಾಟವನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರದಂದು ಅಬಕಾರಿ ನಿರೀಕ್ಷರ ಕಾರ್ಯಾಲಯದ ಎದುರು ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ತಾಲೂಕಿನ ಸಾವಳಗಿ ಖಾನಾಪುರ್ ಗ್ರಾಮಸ್ಥರು ಈ ಹಿಂದೆ ಸಾಕಷ್ಟು ಬಾರಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವ ಕುರಿತು ಮನವಿ ಮಾಡಿಕೊಂಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ ತೋರಿದ ಕಾರಣ ಅವರ ಕರ್ತವ್ಯದ ಬಗ್ಗೆ ಸಾರ್ವಜನಿಕರು ಅಸಮಾಧಾನ ಮತ್ತು ಸಂಶಯ ವ್ಯಕ್ತಪಡಿಸಬೇಕಾಗಿದೆ. ಹೀಗಾಗಿ ಅಕ್ರಮ ಸಾರಾಯಿ ಸಂಪೂರ್ಣ ತಡೆಗಟ್ಟುವ ಹೋರಾಟದಿಂದ ನಾವು ಹಿಂದೆ ಸರಿಯುವುಯೀ ಕೂಡಲೇ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಠೀಣ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮಂಜುನಾಥ ಪೂಜೇರಿ, ತಾಲೂಕ ಅಧ್ಯಕ್ಷ ಮಾರುತಿ ನಾಯಿಕ, ಲಗಮಣ್ಣ ಕರಿಗಾರ, ಅಮರ ಮಡಿವಾಳರ, ಬಸವಣ್ಣಿ ಕುಂಬಾರ, ಸಾತಪ್ಪ ಮಗದುಮ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

twenty − 10 =