Breaking News

ಬಂಗಾರದ ಪದಕ ವಿಜೇತ ಕುಸ್ತಿಪಟುಗಳಿಗೆ ಶಾಸಕರಿಂದ ಸನ್ಮಾನ.!

Spread the love

ಬಂಗಾರದ ಪದಕ ವಿಜೇತ ಕುಸ್ತಿಪಟುಗಳಿಗೆ ಶಾಸಕರಿಂದ ಸನ್ಮಾನ.!


ಯುವ ಭಾರತ ಸುದ್ದಿ  ಗೋಕಾಕ: ಬಂಗಾರದ ಪದಕ ವಿಜೇತ ಇಬ್ಬರು ಕುಸ್ತಿ ಕ್ರೀಡಾಪಟುಗಳನ್ನು ಶಾಸಕ ರಮೇಶ ಜಾರಕಿಹೊಳಿ ತಮ್ಮ ಗೃಹ ಕಚೇರಿಯಲ್ಲಿ ಸತ್ಕರಿಸಿದರು.
ತಾಲೂಕಿನ ಕೈತನಾಳ ಹೊಸೂರು ಗ್ರಾಮದ ಕುಸ್ತಿಪಟುಗಳು ಗೋವಾ ರಾಜ್ಯದ ವಡಗಾಂವದಲ್ಲಿ ನಡೆದ ರಾಷ್ಟ ಮಟ್ಟದ ಯೂಥ್ ಒಲಂಪಿಕ್ ರೂರಲ್ ಗೇಮ್ಸ್ ಚಾಂಪಿಯನ ಶಿಪ್ ೨೦೨೧-೨೨ ರಲ್ಲಿ ೬೧ ಕೆ.ಜಿ ಕುಸ್ತಿ ವಿಭಾಗದಲ್ಲಿ ಪ್ರವೀಣ ಬಡಕುರಿ ಮತ್ತು ೪೧ ಕೆ.ಜಿ ಕುಸ್ತಿ ವಿಭಾಗದಲ್ಲಿ ಶ್ರೀಧರ ಬಡಕುರಿ ಬಂಗಾರದ ಪದಕ ಪಡೆದು ವಿಜಯಶಾಲಿಗಳಾಗಿದ್ದು, ಶಾಸಕರಾದ ರಮೇಶ ಜಾರಕಿಹೊಳಿ ಅವರು ವಿಜೇತ ಗ್ರಾಮೀಣ ಕ್ರೀಡಾಪಟುಗಳಿಗೆ ಸನ್ಮಾನಿಸಿ, ಹಾರೈಸಿದರು.


Spread the love

About Yuva Bharatha

Check Also

ಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು-ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು!

Spread the loveಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು-ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು! ಗೋಕಾಕ: ಬ್ಯಾನರ್‌ಗಳ …

Leave a Reply

Your email address will not be published. Required fields are marked *

nineteen − 3 =