Breaking News

ರಾಷ್ಟ್ರೀಯ ವಿಚಾರ ಸಂಕಿರಣ : ಸಂಶೋಧನಾ ಪ್ರಬಂಧಗಳಿಗೆ ಆಹ್ವಾನ

Spread the love

ರಾಷ್ಟ್ರೀಯ ವಿಚಾರ ಸಂಕಿರಣ : ಸಂಶೋಧನಾ ಪ್ರಬಂಧಗಳಿಗೆ ಆಹ್ವಾನ

ಯುವ ಭಾರತ ಸುದ್ದಿ ಕಾಸರಗೋಡು :
ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ, ಪೆರಿಯ ಕಾಸರಗೋಡು ಇಲ್ಲಿಯ ಕನ್ನಡ ವಿಭಾಗವು ಅನುವಾದ-ಅನುಸಂಧಾನ: ತತ್ವ ಮತ್ತು ಪ್ರಯೋಗ ಎಂಬ ವಿಷಯದ ಕುರಿತು 8 ಮಾರ್ಚ್ 2023 ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲು ಉದ್ದೇಶಿಸಲಾಗಿದೆ. ಈ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅನುವಾದ ಸಾಹಿತ್ಯ ಸಾಧ್ಯತೆ ಮತ್ತು ಹೊಸ ಒಲವುಗಳ ಕುರಿತು ನಾಡಿನ ಖ್ಯಾತ ಅನುವಾದಕರು, ಹಿರಿಯ ಸಂಶೋಧಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.

ಸಂಶೋಧನಾ ಪ್ರಬಂಧಗಳಿಗೆ ಆಹ್ವಾನ : ವಿಚಾರ ಸಂಕಿರಣದ ಆಶಯಕ್ಕೆ ಸಂಬಂಧಿಸಿದಂತೆ ಆಸಕ್ತ ವಿಷಯ ತಜ್ಞರು, ಅಧ್ಯಾಪಕರು, ವಿದ್ಯಾರ್ಥಿಗಳಿಂದ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಪ್ರಬಂಧ ಮಂಡಿಸುವವರು ಪ್ರಬಂಧದ ಪೂರ್ಣಪಾಠವನ್ನು A4 ಅಳತೆಯ ಕಾಗದದಲ್ಲಿ ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ. praveenap@cukerala.ac.in ಪ್ರಬಂಧ ಕಳುಹಿಸಲು ಕಡೆಯ ದಿನಾಂಕ: 07.03.2023. ಸಂಪರ್ಕ ದೂರವಾಣಿ:
9449258183.

ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸುವವರು ಮತ್ತು ಭಾಗವಹಿಸುವವರು ಈ ಪತ್ರದ ಜೊತೆಗಿರುವ ಗೂಗಲ್ ಫಾರ್ಮ್ ಭರ್ತಿ ಮಾಡಲು ಕೋರಿಕೆ. ವಿಚಾರ ಸಂಕಿರಣಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fourteen + one =