Breaking News

ಮುನಿ ಹತ್ಯೆ ಕುರಿತು ಕೋಡಿ ಶ್ರೀ ನುಡಿ ಏನು ?

ಮುನಿ ಹತ್ಯೆ ಕುರಿತು ಕೋಡಿ ಶ್ರೀ ನುಡಿ ಏನು ? ಕೋಲಾರ : ಕೋಲಾರದ ಲಕ್ಷ್ಮೀಸಾಗರ ಗ್ರಾಮದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಇನ್ನೂ ಹಲವೆಡೆ ಪ್ರಾಕೃತಿಕ ವಿಕೋಪ ಸಂಭವಿಸುವ ಲಕ್ಷಣ ಇದೆ. ಜೊತೆಗೆ ಮನುಷ್ಯರು ಮೃಗದಂತೆ ವರ್ತಿಸಿ ವಿಕೋಪ ಸಂಭವಿಸಬಹುದು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.   ಜೈನ ಮುನಿಗಳ …

Read More »

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಅನಿಲ್ ಬೆನಕೆ ಭೇಟಿಯಾಗಿದ್ದೇಕೆ ?

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಅನಿಲ್ ಬೆನಕೆ ಭೇಟಿಯಾಗಿದ್ದೇಕೆ ? ಬೆಳಗಾವಿ : ಭಾರತ ಸರ್ಕಾರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿಗೆ ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆರವರು ಭೇಟಿ ನೀಡಿದರು. ಪ್ರಹ್ಲಾದ ಜೋಶಿ ಅವರು ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯ ರಾಜ್ಯದ ಪ್ರಭಾರಿಯಾಗಿ ನೇಮಕಗೊಂಡಿದ್ದಕ್ಕಾಗಿ ಅವರನ್ನು ಈ ವೇಳೆ ಅಭಿನಂದಿಸಿದರು. ಪ್ರಧಾನಿ ನರೇಂದ್ರ ಮೋದಿಜಿರವರ ಕನಸಿನ …

Read More »

ಜೈನ ಮುನಿ ಹತ್ಯೆ ಪ್ರಕರಣ : ಸಿಬಿಐಗೆ ಒಪ್ಪಿಸಲು ಎಂ.ಬಿ.ಝಿರಲಿ ಮನವಿ

ಜೈನ ಮುನಿ ಹತ್ಯೆ ಪ್ರಕರಣ : ಸಿಬಿಐಗೆ ಒಪ್ಪಿಸಲು ಎಂ.ಬಿ.ಝಿರಲಿ ಮನವಿ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದ್ದು ಈ ಪ್ರಕರಣ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒಪ್ಪಿಸಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಎಮ್.ಬಿ.ಝಿರಲಿ ರಾಜ್ಯ ಸರ್ಕಾರಕ್ಕೆ ಅಗ್ರಹಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು, ಆಪ್ತರಿಂದಲೇ …

Read More »

ಶಾಲಾ ಮಕ್ಕಳ ಅಹಾರದಲ್ಲಿ ಸಿರಿಧಾನ್ಯ ಬಳಸಲು ಸೂಚನೆ

ಶಾಲಾ ಮಕ್ಕಳ ಅಹಾರದಲ್ಲಿ ಸಿರಿಧಾನ್ಯ ಬಳಸಲು ಸೂಚನೆ ದೆಹಲಿ: ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಬಗ್ಗೆ ಅರಿವು ಹಾಗೂ ಅದರ ಮಹತ್ವ ತಿಳಿಯಲು ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಊಟದಲ್ಲಿ ಸಿರಿಧಾನ್ಯ ಬಳಸುವಂತೆ ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ. ವಿಶ್ವಸಂಸ್ಥೆಯು 2023 ಅನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿರುವ ಹಿನ್ನೆಲೆ ಮಕ್ಕಳಿಗೆ ಪೌಷ್ಠಿಕ ಆಹಾರದ ಕುರಿತು ಜಾಗೃತಿ ಮೂಡಿಸಲು ಸರ್ಕಾರವು ಈ ಉಪಕ್ರಮವನ್ನು …

Read More »

ಶ್ರೀಕ್ಷೇತ್ರ ಸೊಗಲಕ್ಕೆ ತೆರಳುವ ಹದಗೆಟ್ಟ ಮುಖ್ಯ ರಸ್ತೆ

ಶ್ರೀಕ್ಷೇತ್ರ ಸೊಗಲಕ್ಕೆ ತೆರಳುವ ಹದಗೆಟ್ಟ ಮುಖ್ಯ ರಸ್ತೆ ಮುರಗೋಡ: ಮುರಗೋಡ ಹೊಸ ಬಸ್ ನಿಲ್ದಾಣ ಕ್ರಾಸ್‌ನಿಂದ ಸಮೀಪದ ಶ್ರೀ ಕ್ಷೇತ್ರ ಸೊಗಲಕ್ಕೆ ತೆರಳುವ ಎಂಟು ಕಿ. ಮೀ. ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆಗಾಗ ಸುರಿದ ಮಳೆ ಹೊಡೆತಕ್ಕೆ ಕಿತ್ತು ಕಿನಾರಿಯಾಗಿ ತೆಗ್ಗು ಗುಂಡಿಗಳೇ ಗೋಚರಿಸುತ್ತಿದ್ದು, ಸಂಪೂರ್ಣ ಹಾಳಾಗಿ ಸಂಚಾರಕ್ಕೆ ತೀವ್ರ ತರದ ತೊಂದರೆಯಾಗಿದೆ. ಈ ರಸ್ತೆಯನ್ನು ಮರು ನಿರ್ಮಾಣ ಕಾಮಗಾರಿಗೆಂದೇ ಸಾಕಷ್ಟು ಹಣ ಮಂಜೂರಾಗಿತ್ತು. ಆದರೆ ಗುತ್ತಿಗೆದಾರರು ರಸ್ತೆ …

Read More »

ಜೈನ ಮುನಿ ಭೀಕರ ಹತ್ಯೆ ಖಂಡಿಸಿ ಬೃಹತ್ ಮೌನ ಮೆರವಣಿಗೆ

ಜೈನ ಮುನಿ ಭೀಕರ ಹತ್ಯೆ ಖಂಡಿಸಿ ಬೃಹತ್ ಮೌನ ಮೆರವಣಿಗೆ ಬೆಳಗಾವಿ : ಚಿಕ್ಕೋಡಿ ತಾಲೂಕು ಹಿರೇಕೋಡಿ ನಂದಿ ಪರ್ವತ ಜೈನಮುನಿ ಕಾಮ ಕುಮಾರ ನಂದಿ ಮಹಾರಾಜರನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದ ಘಟನೆ ಖಂಡಿಸಿ ಸೋಮವಾರ ಚಿಕ್ಕೋಡಿಯಲ್ಲಿ ಜೈನ ಬಾಂಧವರು ಬೃಹತ್ ಪ್ರಮಾಣದಲ್ಲಿ ಸೇರಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ನಿಪ್ಪಾಣಿ, ಅಥಣಿ, ಕಾಗವಾಡ, ಚಿಕ್ಕೋಡಿ, ಹುಕ್ಕೇರಿ, ಕುಡಚಿ, ರಾಯಬಾಗ ಹಾಗೂ ನೆರೆಯ ಮಹಾರಾಷ್ಟ್ರದ …

Read More »

ಕಾರಂತರನ್ನು ನೆನೆಯುವಂತೆ ಮಾಡುತ್ತದೆ ಪ.ರಾ. ಶಾಸ್ತ್ರಿ ಬರಹ : ಸಾಹಿತಿ ಪ.ರಾಮಕೃಷ್ಣಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಡಾ : ವೀರೇಂದ್ರ ಹೆಗ್ಗಡೆ

ಕಾರಂತರನ್ನು ನೆನೆಯುವಂತೆ ಮಾಡುತ್ತದೆ ಪ.ರಾ. ಶಾಸ್ತ್ರಿ ಬರಹ : ಸಾಹಿತಿ ಪ.ರಾಮಕೃಷ್ಣಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಡಾ : ವೀರೇಂದ್ರ ಹೆಗ್ಗಡೆ ಬೆಳ್ತಂಗಡಿ : ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ …

Read More »

ಮಾವನೂರಲ್ಲಿ ಜೋಡಿ ಕೊಲೆ

ಮಾವನೂರಲ್ಲಿ ಜೋಡಿ ಕೊಲೆ ಬೆಳಗಾವಿ : ಯಮಕನಮರಡಿ ಬಳಿಯ ಮಾವನೂರಿನಲ್ಲಿ ಜೋಡಿ ಕೊಲೆ ನಡೆದಿದೆ. ಗಜೇಂದ್ರ ಈರಪ್ಪ ಹುನ್ನೂರಿ (60 ವರ್ಷ) ಮತ್ತು ದ್ರಾಕ್ಷಾಯಿಣಿ ಗಜೇಂದ್ರ ಹುನ್ನೂರಿ (45 ವರ್ಷ) ಕೊಲೆಯಾದ ದುರ್ದೈವಿಗಳು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ತನಿಕೆ ನಡೆಸುತ್ತಿದ್ದಾರೆ.

Read More »

ಇತಿಹಾಸದಲ್ಲೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ಇತಿಹಾಸದಲ್ಲೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ : ಜೈನ ಮುನಿ ಕಾಮಕುಮಾರ ನಂದಿಮಹಾರಾಜರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಗೆ ದಿಗ್ಧಮೆ ವ್ಯಕ್ತಪಡಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆಯಾಗಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನೆಂದಿಗೂ ಇಂತಹ …

Read More »

ಕೊನೆಗೂ ರದ್ದಾಯ್ತು ನೇಮಕಾತಿ ಸಂದರ್ಶನ

ಕೊನೆಗೂ ರದ್ದಾಯ್ತು ನೇಮಕಾತಿ ಸಂದರ್ಶನ ಬೆಳಗಾವಿ : ಎನ್.ಪಿ.ಸಿ.ಡಿ.ಸಿ.ಸ್/ ಎನ್.ಪಿ.ಹೆಚ್.ಸಿ.ಇ ಮತ್ತು ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು, ವೈದ್ಯರು, ಶುಶ್ರೂಷಕ / ಕಿಯರು ಹಾಗೂ ಆಪ್ತ ಸಮಾಲೋಚಕರ ನೇಮಕಾತಿಗಾಗಿ ಜುಲೈ 11 ರಂದು ನಡೆಸಲು ಉದ್ದೇಶಿಸಿದ್ದ ನೇರ ಸಂದರ್ಶನವನ್ನು ರದ್ದುಗೊಳಿಸಲಾಗಿರುತ್ತದೆ. ನೇರ / ಗುತ್ತಿಗೆ ನೇಮಕಾತಿಯ ಸರ್ಕಾರದ ಮೀಸಲಾತಿಯನ್ನು ಪ್ರಶ್ನಿಸಿ ಘನ ಉಚ್ಛ ನ್ಯಾಯಾಲಯ ಮತ್ತು ಘನ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನೇರ …

Read More »