Breaking News

ಗೋಕಾಕ ಫಾಲ್ಸ್ ಯರಗಲ ಶ್ರೀಗಳು ಇನ್ನಿಲ್ಲ..!!

Spread the love

ಗೋಕಾಕ ಫಾಲ್ಸ್ ಯರಗಲ ಶ್ರೀಗಳು ಇನ್ನಿಲ್ಲ..!!
 ಯುವ ಭಾರತ ಸುದ್ದಿ  ಗೋಕಾಕ: ಗೋಕಾಕ ಜಲಪಾತದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶಂಕರಧಾಮ(ಯರಗಲ ಮಠ)ದ ಪರಮ ಪೂಜ್ಯ ಶ್ರೀ ಶಂಕರಾನಾAದ ಮಹಾಸ್ವಾಮಿಗಳು ೫೫ ಇವರು ಅನಾರೋಗ್ಯದ ಹಿನ್ನಲೆ ಗುರುವಾರದಂದು ಬೆಳಗ್ಗೆ ನಿಧನರಾಗಿದ್ದಾರೆ.
  ಸಂಸಾರಿಕ ಮಠದ ಸ್ವಾಮಿಜಿಗಳಾದ ಇವರು ಪತ್ನಿ, ಮಗ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಸಾಯಂಕಾಲ ತಡವಾಗಿ ಮಠದಲ್ಲಿ ಕಾಕಡಾರತಿ ಪೂಜೆ ಸಲ್ಲಿಸಿ, ವಿಶ್ರಾಂತಿ ಜಾರುವ ಮುಂಚೆ ಕುಸಿದು ಬಿದ್ದಿದ್ದು, ಭಕ್ತರು ಸೇರಿ ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ವಿಜಾಪೂರ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯೂಸಿರೆಳೆದಿದ್ದಾರೆ.
   ಗುರುವಾರದಂದು ಯಾದಗಿರಿ ಜಿಲ್ಲೆಯ ಯರಗಲ್ ಗ್ರಾಮದ ಶ್ರೀಗಳ ಅಂತ್ಯಕ್ರೀಯೆ ಜರುಗಿದೆ. ೧೯೮೦ರಲ್ಲಿ ಶ್ರೀ ರಘುನಾಥ ಸ್ವಾಮಿಜಿ ಸ್ವರ್ಗಸ್ಥರಾದ ನಂತರ ೧೯೮೧ರಲ್ಲಿ ಗೋಕಾಕ ಫಾಲ್ಸ್ ಯರಗಲ ಮಠದ ಭಕ್ತರು ಇವರು ಕರೆ ತಂದು ಪಟ್ಟಾಭಿಷೇಕ ಮಾಡಿದ್ದು, ಅಂದಿನಿAದ ಇಂದಿನ ವರೆಗೆ ಶ್ರೀಮಠದ ಜವಾಬ್ದಾರಿ ಹೊಂದಿದ್ದರು. ಪ್ರತಿ ವರ್ಷದ ಶ್ರಾವಣ ಮಾಸದ ಸಪ್ತಾಹದ ಜೊತೆಗೆ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದರು, ಬೆಳಗಾವಿ, ವಿಜಯಪೂರ, ಯಾದಗಿರಿ, ಬಾಗಲಕೋಟ, ಗುಲ್ಬರ್ಗಾ ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟçದ ಪೂನೆ, ಮುಂಬೈ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು.

Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

sixteen − five =