Breaking News

ಸೇನೆಗೆ ಆಯ್ಕೆಯಾದ ಶ್ರೀಶೈಲ ಮುತ್ತಪ್ಪ ನಂದಗೊಂಡ ಅವರಿಗೆ ಸತ್ಕಾರ

Spread the love

ಸೇನೆಗೆ ಆಯ್ಕೆಯಾದ
ಶ್ರೀಶೈಲ ಮುತ್ತಪ್ಪ ನಂದಗೊಂಡ ಅವರಿಗೆ ಸತ್ಕಾರ

ಯುವ ಭಾರತ ಸುದ್ದಿ ಇಂಡಿ:
ಸಾತಲಗಾಂವ ಗ್ರಾಮದ ಶ್ರೀಶೈಲ ಮುತ್ತಪ್ಪ ನಂದಗೊಂಡ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಪ್ರಯುಕ್ತ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಶಾಲು ಹೊದಿಸಿ ಸನ್ಮಾನಿಸಿದರು.
ಜೈ ಜವಾನ ಜೈ ಕಿಸಾನ ರೈತ ಹಾಗೂ ಸೈನಿಕ ದೇಶದ ದೊಡ್ಡ ಶಕ್ತಿ ರೈತ ದೇಶಕ್ಕೆ ಅನ್ನ ನೀಡುವ ಧನಿಯಾದರೆ ಸೈನಿಕ ದೇಶದ ಗಡಿಯಲ್ಲಿ ಮಳೆ ಚಳಿ ಎನ್ನದೆ ನಮ್ಮನ್ನು ಕಾಪಾಡುವ ಬ್ರಹ್ಮ ಆದ್ದರಿಂದ ಇವು ಎರಡು ದೇಶದ ಅಮೂಲ್ಯ ರತ್ನಗಳು. ಶ್ರೀಶೈಲ ಮುತ್ತಪ್ಪ ನಂದಗೊಂಡ ಬಡತನದಲ್ಲಿ ಹುಟ್ಟಿದರೂ ಛಲಬಿಡದೆ ಆತ್ಮಸ್ಥೆರ್ಯೇದೊಂದಿಗೆ ದೇಶ ಸೇವೆ ಮಾಡಲು ಸೈನಿಕ ವೃತ್ತಿ ಆಯ್ಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ಇಂದು ಈ ಭಾಗದಲ್ಲಿ ಸಾಕಷ್ಟು ಯುವಕರು ದೇಶ ಸೇವೆ ಈಶ ಸೇವೆ ಎಂಬ ಉಕ್ತಿಯಂತೆ ಸೇವಾ ಭಾವ ಹೊಂದಿ ದೇಶಪ್ರೇಮದಿಂದ ದೇಶ ಕಾಯಲು ಹೊರಟಿರುವುದು ಸಂತಸ ತಂದಿದೆ. ತಾಯಿ ಭಾರತ ಮಾತೆಯ ರಕ್ಷಣೆ ಮಾಡಲು ಒಳ್ಳೇಯ ಸುಧೀರ್ಘ ಆರೋಗ್ಯ ಭಾಗ್ಯ ಕೊಟ್ಟು ನೂರ್ಮಡಿ ಶಕ್ತಿ ವೃದ್ದಿಸಲಿ ಎಂದು ಹಾರೈಸಿದರು.

ಸಿದ್ದು ಡಂಗಾ,ಪರವತಯ್ಯಾ ಮಠ, ಸಿದ್ದಪ್ಪ ನಂದಗೊಂಡ, ಬಾಳು ರಾಠೋಡ, ಬಂದು ತಾಂಬೋಳಿ, ನಾರಾಯಣ ವಾಲೀಕಾರ, ಪ್ರಶಾಂತ ನಂದಗೊಂಡ, ದತ್ತು ನಂದಗೊಂಡ, ಸಿದ್ದು ನಂದಗೊಂಡ ಸೇರಿದಂತೆ ಅನೇಕರಿದ್ದರು.


Spread the love

About Yuva Bharatha

Check Also

ಕಾಂಗ್ರೆಸ್ ನ ದುರಹಂಕಾರ, ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ: ಮಾಜಿ ಸಿಎಂ ಬೊಮ್ಮಾಯಿ

Spread the loveಕಾಂಗ್ರೆಸ್ ನ ದುರಹಂಕಾರ, ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ: ಮಾಜಿ ಸಿಎಂ ಬೊಮ್ಮಾಯಿ ಬೆಂಗಳೂರು …

Leave a Reply

Your email address will not be published. Required fields are marked *

4 × three =