Breaking News

ಹರ್ಷ ಮನೆಗೆ ಶಾಸಕ ಯತ್ನಾಳ ಭೇಟಿ, ಕುಟುಂಬಕ್ಕೆ ₹5 ಲಕ್ಷ ರೂ. ಧನಸಹಾಯ!!

Spread the love

ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಮನೆಗೆ ಶಾಸಕ ಯತ್ನಾಳ ಭೇಟಿ, ಕುಟುಂಬಕ್ಕೆ ₹5 ಲಕ್ಷ ರೂ. ಧನಸಹಾಯ!!

ಯುವ ಭಾರತದ ಸುದ್ದಿ  ಶಿವಮೊಗ್ಗ : ಬಿಜೆಪಿ ಮುಖಂಡರು, ಶಾಸಕರಾದ  ಬಸನಗೌಡ ಪಾಟೀಲ ಯತ್ನಾಳರವರು, ದುಷ್ಕರ್ಮಿಗಳಿಂದ ಹತ್ಯಗೀಡಾದ ಹಿಂದೂ ಕಾರ್ಯಕರ್ತ “ಹರ್ಷ ಹಿಂದೂ” ಎಂದೇ ಖ್ಯಾತಿ ಹೊಂದಿದ್ದ, ಹಿಂದೂ ಸಂಘಟನೆಯ ಕ್ರಿಯಾಶೀಲ ಯುವಕ, ಶಿವಮೊಗ್ಗದ ಹರ್ಷ ರವರ ಮನೆಗೆ ಇಂದು ಭೇಟಿ ನೀಡಿ, ಹರ್ಷ ಅವರ ತಾಯಿ ಶ್ರೀಮತಿ ಪದ್ಮಾ ಹಾಗೂ ಅವರ ತಂದೆ ಶ್ರೀ ನಾಗರಾಜ ಹಾಗೂ ಸಹೋದರಿಯರು ಸೇರಿದಂತೆ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿ, ತಮ್ಮ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ₹5.00 ಲಕ್ಷ ರೂ. ಧನಸಹಾಯ ನೀಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

 

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಾಂಚಾಯತ್ ರಾಜ್ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ ಹಾಗೂ ಅಪಾರ ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜೊತೆಗಿದ್ದರು.


Spread the love

About Yuva Bharatha

Check Also

ಕಾಂಗ್ರೆಸ್ ಅಭ್ಯರ್ಥಿಪರ ಹಣ ಹಂಚಿಕೆ ಡಾ.ಮಹಾಂತೇಶ ಕಡಾಡಿ ಸೇರಿ ಆರು ಜನರನ್ನು ಪೋಲಿಸರಿಗೆ ಒಪ್ಪಿಸಿದ ಅಂಕಲಗಿ ಗ್ರಾಮಸ್ಥರು..!

Spread the loveಅಂಕಲಗಿ ಗ್ರಾಮದಲ್ಲಿ 25ಲಕ್ಷಕ್ಕೂ ಹೆಚ್ಚಿನ ಹಣವನ್ನು ಹಂಚುತ್ತಿದ್ದ ಕಾಂಗ್ರೇಸ್ ಅಭ್ಯರ್ಥಿಯ ಬೆಂಬಲಿಗರು. ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರದ …

Leave a Reply

Your email address will not be published. Required fields are marked *

five × 3 =