Breaking News

ಹೊಸ ಶಕೆ ಆರಂಭ : ಖಾನಾಪುರದಲ್ಲಿ ವಿಠಲ ಹಲಗೇಕರ ಪರ ಗೋವಾ ಮುಖ್ಯಮಂತ್ರಿ ಪತ್ನಿ ಬಿರುಸಿನ ಪ್ರಚಾರ

Spread the love

ಹೊಸ ಶಕೆ ಆರಂಭ : ಖಾನಾಪುರದಲ್ಲಿ ವಿಠಲ ಹಲಗೇಕರ ಪರ ಗೋವಾ ಮುಖ್ಯಮಂತ್ರಿ ಪತ್ನಿ ಬಿರುಸಿನ ಪ್ರಚಾರ

ಯುವ ಭಾರತ ಸುದ್ದಿ ಖಾನಾಪುರ :
ಖಾನಾಪುರ ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ ಅವರ ಪರ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಧರ್ಮಪತ್ನಿ ಸುಲಕ್ಷಣಾ ಸಾವಂತ್ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಖಾನಾಪುರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ನಂತರ ಮಾತನಾಡಿದ ಅವರು, ಖಾನಾಪುರ ಕ್ಷೇತ್ರದ ಜವಾಬ್ದಾರಿ ನನ್ನ ಹೆಗಲ ಮೇಲಿರುವುದಕ್ಕೆ ನನಗೆ ಹೆಮ್ಮೆ ಇದೆ. ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ ಈ ಬಾರಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾನಾಪುರದಲ್ಲಿ ಈ ಬಾರಿ ಕಮಲ ಅರಳುವುದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ ಬಾರಿ ವಿಠಲ
ಹಲಗೇಕರ ಅವರು ಅತ್ಯಂತ ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದರು. ಖಾನಾಪುರ ಮತಕ್ಷೇತ್ರಾದ್ಯಂತ ಚಿರಪರಿಚಿತರಾಗಿರುವ ವಿಠಲ
ಹಲಗೇಕರ ಅವರು ಅತ್ಯಂತ ಸರಳ ನಡೆನುಡಿಯಿಂದ ಚಿರಪರಿಚಿತರು. ಅವರು ಖಾನಾಪುರ ತಾಲೂಕಿನ ನವ ಹರಿಕಾರರಾಗಿ ಇತಿಹಾಸ ಸೃಷ್ಟಿಸಲಿದ್ದು ಬಿಜೆಪಿ ಮತ್ತೆ ಇಲ್ಲಿ ಹೊಸ ಶಕೆ ಆರಂಭಿಸಲಿದೆ ಎಂದು ಹೇಳಿದರು.

ಹಿರಿಯ ಕಾರ್ಯಕರ್ತರ ಸಮ್ಮುಖದಲ್ಲಿ ಮಂಡಲ ಕಾರ್ಯಕರ್ತರು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲೂ ಸಹ ಸುಲಕ್ಷಣಾ ಸಾವಂತ್ ಭಾಗವಹಿಸಿ ಮಾತನಾಡಿದರು.

ಖಾನಾಪುರ ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಂಜಯ ಕುಬಲ್ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

17 − 13 =