Breaking News

ಟಿಳಕವಾಡಿ ಪೊಲೀಸರಿಂದ ಮನೆಗಳ್ಳರ ಬಂಧನ : 1,35,000 ರೂ.ಮೌಲ್ಯದ ಬಂಗಾರದ ಆಭರಣ ವಶ !

Spread the love

ಟಿಳಕವಾಡಿ ಪೊಲೀಸರಿಂದ ಮನೆಗಳ್ಳರ ಬಂಧನ : 1,35,000 ರೂ.ಮೌಲ್ಯದ ಬಂಗಾರದ ಆಭರಣ ವಶ !

ಯುವ ಭಾರತ ಸುದ್ದಿ ಬೆಳಗಾವಿ :
ದಿನಾಂಕ : 20/03/2023 ರಂದು ತಿಲಕವಾಡಿ ಠಾಣೆ ಹದ್ದಿಯ ಆದರ್ಶ ನಗರದಲ್ಲಿರುವ ಪಿರ್ಯಾದಿ ರಮೇಶ ಮಗದುಮ್ ರವರ ಮನೆಯಲ್ಲಿಟ್ಟ ಸುಮಾರು 1,35,000 / – ಮೌಲ್ಯದ 30 ಗ್ರಾಂ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದಯಾನಂದ ಶೇಗುಣಶಿ ಪಿಐ ತಿಲಕವಾಡಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಆರೋಪಿತರಾದ , ವಿಶಾಲ ಆನಂದ ಮಾನೆ (33) ಸಂತ ಮೀರಾ ಕಾಲೋನಿ ಅನಗೋಳ, ಈರಣ್ಣಾ ಬಸಪ್ಪ ನಾವಿ ( 24 ) ಒಂದನೇ ಕ್ರಾಸ್ ಭಾಗ್ಯನಗರ , ಬೆಳಗಾವಿ ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿತರಿಂದ ರೂ .1,35,000 / – ಮೌಲ್ಯದ 30 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು , ತನಿಖೆ ಮುಂದುವರೆಸಲಾಗಿದೆ ..


Spread the love

About Yuva Bharatha

Check Also

ಜೋಡಿ ಕೊಲೆ : ಶಿಕ್ಷೆ ಪ್ರಕಟ

Spread the loveಜೋಡಿ ಕೊಲೆ : ಶಿಕ್ಷೆ ಪ್ರಕಟ ಯುವ ಭಾರತ ಸುದ್ದಿ ಬೆಳಗಾವಿ : ಜಮೀನು ವಿವಾದದಿಂದ ದಾಯಾದಿಗಳನ್ನೇ …

Leave a Reply

Your email address will not be published. Required fields are marked *

4 × 5 =