ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರ ಸಾವು

ಯುವ ಭಾರತ ಸುದ್ದಿ ಹುಕ್ಕೇರಿ :
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಇಂದು ಸಂಜೆ ಅಸುನೀಗಿದ್ದಾರೆ.
ಹುಕ್ಕೇರಿ ತಾಲೂಕು ಯಾದಗೂಡ ಗ್ರಾಮದ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಮುಳುಗಿದ್ದಾರೆ.
ಮೃತರನ್ನು ಯಮನಪ್ಪ ಪ್ರಕಾಶ ರೆಡ್ಡೇರಟ್ಟಿ(10), ಯೇಶು ಬಸಪ್ಪ(14) ಮೃತರು.
ಮುಳುಗುತ್ತಿದ್ದ ಯಮನಪ್ಪನನ್ನು ರಕ್ಷಿಸಲು ಹೋದ ಇನ್ನೊಬ್ಬ ಬಾಲಕ ಯೇಶು ಸಹ ಅಸುನೀಗಿದ್ದಾನೆ.
ಹುಕ್ಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
YuvaBharataha Latest Kannada News