Breaking News

ಛೇ..ಕೈ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ !?

Spread the love

ಛೇ..ಕೈ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ !?

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎನ್ನುತ್ತಾರೆ ಕ್ಷೇತ್ರದ ಮತದಾರರು.
ಇದೀಗ ಎಲ್ಲೆಡೆ ಚುನಾವಣಾ ಪ್ರಚಾರ ಜೋರಾಗಿ ನಡೆದಿದೆ.
ಆದರೆ ಗ್ರಾಮೀಣ ಅಭ್ಯರ್ಥಿಗೆ ಈಗ ಮತದಾರರ ಒಲವು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಹಾರ-ತುರಾಯಿಗಳಿಗೆ ತಾವೇ ಹಣ ಕೊಟ್ಟು ಸಣ್ಣ ಸತ್ಕಾರ ಮಾಡಿಸಿಕೊಳ್ಳುವ ದುಸ್ಥಿತಿ ಎದುರಾಗಿದೆ.

ಸಣ್ಣ ಊರುಗಳಾದರೆ
₹ 30,000, ದೊಡ್ಡ ಊರುಗಳಾದರೆ
₹ 50,000 ಕೊಟ್ಟು ಹಾರ-ತುರಾಯಿಗಳಿಗೆ
ಮುಂಗಡ ಹಣ ಕೊಟ್ಟು
ಸತ್ಕಾರ ಮಾಡಿಸಿಕೊಳ್ಳುತ್ತಿದ್ದಾರೆ.

ತಮ್ಮ ಬೆಂಬಲಿಗರಿಗೆ ಅಗತ್ಯ ಪ್ರಮಾಣದ ಹಣಕಾಸು ನೆರವನ್ನು ನೀಡಿ ತಮ್ಮ ಹಣದಲ್ಲಿಯೇ ಸತ್ಕಾರ ಸ್ವೀಕರಿಸುವ
ಸ್ವಯಂಘೋಷಿತ ನಾಯಕಿಯ
ಮಾಸ್ಟರ್ ಪ್ಲಾನ್ ಈಗ ನಗೆಪಾಟಲಿಗೆ ಗುರಿಯಾಗಿದೆ.
ಎಲ್ಲಾ ಗ್ರಾಮಗಳ ಜನತೆಗೆ ನಾಯಕಿಯ ಈ ಕಪಟನಾಟಕ ಗೊತ್ತಾಗಿದೆ.

ತಾವೊಬ್ಬರೆ ರಾಜ್ಯ ನಾಯಕರು, ಕ್ಷೇತ್ರದ ಮನೆ ಮಗಳು, ಅಭಿವೃದ್ಧಿಯ ಹರಿಕಾರರು ಎನ್ನುವ ಈ ನಾಯಕಿ ತಮ್ಮ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೆ ಈಗ ತಮ್ಮ ಕೈಯಾರೆ ಹಣ ತೆತ್ತು ಸತ್ಕಾರ ಪಡೆಯುವ ಸ್ಥಿತಿ ಬರುತ್ತಿರಲಿಲ್ಲ. ಇಂತಹ ಪರಿಸ್ಥಿತಿ ಬಂದಿರುವುದಕ್ಕೆ
ಕ್ಷೇತ್ರದ ಜನತೆ ಈಗ ನಿಜಕ್ಕೂ ಮರುಕಪಡುವಂತಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

11 − ten =