Breaking News

ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರನ್ನು ಒಗ್ಗೂಡಿಸಿಕೊಂಡು ಹೋಗುವ ಸಂಕಲ್ಪ ಮಾಡಿದ್ದೆನೆ-ಶಾಸಕ ರಮೇಶ ಜಾರಕಿಹೊಳಿ.!

Spread the love

ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರನ್ನು ಒಗ್ಗೂಡಿಸಿಕೊಂಡು ಹೋಗುವ ಸಂಕಲ್ಪ ಮಾಡಿದ್ದೆನೆ-ಶಾಸಕ ರಮೇಶ ಜಾರಕಿಹೊಳಿ.!


ಗೋಕಾಕ: ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರನ್ನು ಒಗ್ಗೂಡಿಸಿಕೊಂಡು ಹೋಗುವ ಸಂಕಲ್ಪ ಮಾಡಿದ್ದು, ಅದು ಗೋಕಾಕದಿಂದಲೇ ಪ್ರಾರಂಭ ಮಾಡಿ ಇತಿಹಾಸ ನಿರ್ಮಿಸುತ್ತೇನೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ರವಿವಾರದಂದು ಸಾಯಂಕಾಲ ನಗರದ ಲಕ್ಕಡಗಲ್ಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಗೋಕಾಕ ಮತಕ್ಷೇತ್ರದ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯದದವರನ್ನು ಕೂಡಿಸಿಕೊಂಡು ಮುನ್ನಡೆಯಿರಿ ಎಂದು ಹೇಳಿದ್ದಾರೆ. ಮೊನ್ನೆ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೈಟಕನಲ್ಲಿ ಮೋಹನ ಭಾಗವತ ಅವರು ಸಹ ಮುಸ್ಲಿಂ ಸಮುದಾಯದವರನ್ನು ಒಗ್ಗೂಡಿಸುವ ಮಾತು ಹೇಳಿದ್ದಾರೆ. ಜಾತಿ ಸಂಘರ್ಷ ಬಿಟ್ಟು ನಾವೆಲ್ಲರೂ ಒಂದಾಗಬೇಕು. ಪ್ರತಿ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಒಂದಾಗಿ ಪಕ್ಷವನ್ನು ಕಟ್ಟಬೇಕು. ಈ ಸಂಘಟನೆ ಚುನಾವಣೆಗೆ ಮಾತ್ರ ಸಿಮಿತವಾಗದೆ. ಬರುವ ದಿನಗಳಲ್ಲಿ ಒಂದಾಗಿ ಕಾರ್ಯ ಮಾಡಬೇಕು ಎಂದರು.


ಸತತವಾಗಿ ಮುಸ್ಲಿಂ ಸಮುದಾಯದ ಬೆಂಬಲದೊ0ದಿಗೆ ಶಾಸಕನಾಗುತ್ತಾ ಬಂದಿದ್ದೇನೆ. ಜಾರಕಿಹೊಳಿ ಕುಟುಂಬ ಮುಸ್ಲಿಂ ಸಮುದಾಯದ ಜನರ ಜೊತೆಗೆ ತುಂಬಾ ಅನ್ಯೋನ್ಯತೆಯ ಸಂಬ0ಧ ಹೊಂದಿದೆ. ಮುಸ್ಲಿಂ ಸಮುದಾಯದದವನ್ನು ಬಿಟ್ಟು ಕಳೆದ ಉಪ ಚುನಾವಣೆಯಲ್ಲಿ ಎಂಎಲ್‌ಎ ಆಗಿದ್ದೇನೆ ಎಂಬ ಕೋರಗು ನನಗಿತ್ತು ಅದು ಇಂದು ಸಾವಿರಾರೂ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಕೂಡುವಿಕೆಯಿಂದ ದೂರವಾಗಿದೆ. ಎಲ್ಲಾ ಸಮುದಾಯವನ್ನು ಒಂದುಗೂಡಿಸಿ ನಾನು ರಾಜಕೀಯ ಮಾಡುತ್ತಿದ್ದೇನೆ. ಈ ದೇಶ ನಮ್ಮದು ನಮ್ಮನ್ನು ಯಾರು ಹೋರಹಾಕಲು ಸಾಧ್ಯವಿಲ್ಲ. ಪಕ್ಕದ ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳು ಇಂದು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದರು.
ಈ ಚುನಾವಣೆ ನನ್ನ ಕೊನೆಯ ಚುನಾವಣೆ ಇದ್ದ ಕಾರಣ ಎಲ್ಲಾ ಸಮುದಾಯದ ಜನರು ನನಗೆ ಬೆಂಬಲ ವ್ಯಕ್ತಪಡಿಸಬೇಕು. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೋಕಾಕ ನಗರವನ್ನು ಬೆಳೆಸೋಣ ಎಂದು ಹೇಳಿದರು. ಮಳೆಗಾಲದಲ್ಲಿ ನಗರಕ್ಕೆ ನುಗ್ಗಿತ್ತಿರುವ ನೀರನ್ನು ತಡೆಯಲು ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಅತಿ ಶೀಘ್ರದಲ್ಲೇ ಚಾಲನೆ ನೀಡಲಾಗುವದು. ನಗರಸಭೆ, ತಾಪಂ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಇತರ ಸಂಘ, ಸಂಸ್ಥೆಗಳಲ್ಲಿ ಎಲ್ಲ ಸಮಾಜದವರನ್ನು ನ್ಯಾಯ ಸಿಗುವಂತೆ ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ. ಈ ಬಾರಿ ನಿಮ್ಮೆಲ್ಲರ ಆಶಿರ್ವಾದದಿಂದ ನನ್ನ ಗೆಲುವು ಶತಸಿದ್ದವಾಗಿದೆ ಎಂದ ಅವರು ಮುಂದೆ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ವಿನಂತಿಸಿದರು.


ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಮಾತನಾಡಿ ಈಗಾಲೇ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಮುಂದೆ ಆಮ ಆದ್ಮಿ ಪಕ್ಷ ಹೀಗೆ ಎಲ್ಲಾ ಪಕ್ಷಗಳನ್ನು ಸುತ್ತಾಡಿ ಬರೀ ಗೋಳ್ಳು ಮಾತಗಳನ್ನು ಆಡುವ ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಹೋದರ ಶಾಸಕ ರಮೇಶ ಜಾರಕಿಹೊಳಿ ಜೊತೆಗೆ ನಾವು ಇರಬೇಕು. ರಮೇಶ ಜಾರಕಿಹೊಳಿ ಅವರು ಹಿಂದೂ ಮುಸ್ಲಿಂ ಸಮಾಜದವರು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಗೋಕಾಕ ಮತಕ್ಷೇತ್ರದಲ್ಲಿ ಎಲ್ಲಾ ಸಮಾಜದವರು ಅಣ್ಣ-ತವ್ಮ್ಮಂದಿರAತೆ ಇದ್ದೆವೆ. ಮುಸ್ಲಿಂ ಸಮುದಾಯದ ಮತಗಳು ವಿಭಜನೆಯಾಗದೆ ಒಂದೇ ಕಡೆ ಮತ ಚಲಾಯಿಸಿ ರಮೇಶ ಜಾರಕಿಹೊಳಿ ಅವರಿಗೆ ಬೆಂಬಲವನ್ನು ನೀಡಬೇಕು. ಈ ಬಾರಿ ಒಂದು ಲಕ್ಷ ಮತಗಳಿಂದ ಗೆಲ್ಲಿಸಿ ತಂದು ಜಿಲ್ಲೆ, ರಾಜ್ಯದಲ್ಲಿ ಶಕ್ತಿ ತುಂಬಬೇಕು. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ದಸ್ತಗಿರ ಮುಲ್ಲಾ ಅವರು ತಮ್ಮ ಬೆಂಬಲಿಗರೊ0ದಿಗೆ ಕಾಂಗ್ರೆಸ್ ಪಕ್ಷ ತೋರೆದು ಬಿಜೆಪಿ ಪಕ್ಷ ಸೇರಿದರು.
ಸಮಾಜದ ಮುಖಂಡರುಗಳಾದ ಮೋಶಿನ ಖೋಜಾ, ಶರಪೋದ್ದೀನ ನರೋ, ಮುನ್ನಾ ಮಾಂಜರಿ, ಸಾದಿಕ ಹಲ್ಯಾಳ ಮಾತನಾಡಿ ಕಳೆದ ೩೦ ವರ್ಷಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರು ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಈ ಬಾರಿಯು ಸಹ ಸಮಾಜದ ಜನರು ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಮತ್ತೊಮ್ಮೆ ರಮೇಶ ಜಾರಕಿಹೊಳಿ ಅವರನ್ನು ಶಾಸಕ, ಸಚಿವರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುಫ್ತಿ ಖಾಜಾಸಾಬ ಸುಳೇಭಾವಿ ಮತ್ತು ಕಾರಿ ಜಬೀವುಲ್ಲಾ ವಹಿಸಿ ಆರ್ಶಿವರ್ಚನ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ಸಹಶ್ರ, ಸಹಶ್ರ ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದ ಯುವಕರು ಸೇರಿಕೊಂಡು ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಅಮರನಾಥ ಜಾರಕಿಹೊಳಿ ಅವರನ್ನು ಶಾಸಕರ ಕಛೇರಿಯಿಂದ ಲಕ್ಕಡಗಲ್ಲಿ ಮೈದಾನದವರೆಗೆ ಬೈಕ್ ಮೆರವಣಿಗೆ ಮುಖಾಂತರ ಕರೆದುಕೊಂಡು ಬಂದರು.
ವೇದಿಕೆಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ, ಮೌಲಾನಾ ಆಸೀಫ್ ಶಾಬಾಶಖಾನ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಕೆ.ಎಂ.ಗೋಕಾಕ, ಯೂಸುಫ್ ಅಂಕಲಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರುಗಳಾದ ಎಚ್.ಡಿ.ಮುಲ್ಲಾ, ಎಂ.ಜಿ.ಮುಜಾವರ, ಮಲ್ಲಿಕ ಪೈಲವಾನ, ಇಲಾಹಿ ಖೈರದಿ,ಕಾಶಿಮ ಖಲೀಫ, ಅಬ್ದುಲವಹಾಬ ಜಮಾದಾರ, ಹಸೇನ ಫನಿಬಂದ್, ಅಬ್ದುಲಸತ್ತಾರ ಶಾಬಾಶಖಾನ, ದಾದಾಪೀರ ಶಾಬಾಶಖಾನ ಸೇರಿದಂತೆ ನಗರದ ೪೩ ಮಸೀದಿಗಳ ಮಕಶೋರಗಳು, ಮುಖ್ಯಸ್ಥರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

ten − 8 =