Breaking News

ತಮ್ಮೆಲ್ಲರ ಆಶೀರ್ವಾಧದಿಂದ ಶಾಸಕ, ಸಚಿವರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದು ಮತ್ತೊಮ್ಮೆ ಆಶೀರ್ವಧಿಸಿ-ಅಮರನಾಥ ಜಾರಕಿಹೊಳಿ.!

Spread the love

ತಮ್ಮೆಲ್ಲರ ಆಶೀರ್ವಾಧದಿಂದ ಶಾಸಕ, ಸಚಿವರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದು ಮತ್ತೊಮ್ಮೆ ಆಶೀರ್ವಧಿಸಿ-ಅಮರನಾಥ ಜಾರಕಿಹೊಳಿ.!


ಗೋಕಾಕ: ನನ್ನ ತಂದೆ ತಮ್ಮೆಲ್ಲರ ಆಶೀರ್ವಾಧದಿಂದ ಕಳೆದ ೬ಬಾರಿ ಶಾಸಕ, ಸಚಿವರಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು ತಮ್ಮ ಅತ್ಯಮೂಲ್ಯವಾದ ಮತವನ್ನು ಅವರಿಗೆ ನೀಡಿ ಮತ್ತೊಮ್ಮೆ ಅವರನ್ನು ಅತ್ಯಧಿಕ ಮತಗಳ ಅಂತರದಿAದ ಆರಿಸಿ ತರುವಂತೆ ಯುವಧುರೀಣ ಅಮರನಾಥ ಜಾರಕಿಹೊಳಿ ಮನವಿ ಮಾಡಿದರು.
ಅವರು, ನಗರದ ಮಾರುಕಟ್ಟೆ ಪ್ರದೇಶದಲ್ಲಿ ಕಿರಾಣಿ ವರ್ತಕರ ಸಂಘದೊAದಿಗೆ ಅವರ ತಂದೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಮತಯಾಚಣೆ ನಡೆಸಿ ಮಾತನಾಡಿ, ಗೋಕಾಕ ನಗರದಲ್ಲಿ ೨೪/೭ ಕುಡಿಯುವ ನೀರು, ಸುಸಜ್ಜಿತ ರಸ್ತೆಗಳು, ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದಾರೆ. ಬರುವ ಮೇ೧೦ರಂದು ನಡೆಯಲಿರುವ ಚುನಾವಣೆಯಲ್ಲಿ ಶೇಜ್ ನಂ-೩ರ ಕಮಲದ ಗುರುತಿಗೆ ತಮ್ಮ ಮತವನ್ನು ನೀಡಿ ಆಶೀರ್ವಧಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ ಅಂಗಡಿ, ಎ ಕೆ ಕಲ್ಯಾಣಶೆಟ್ಟಿ, ತುಷಾರ ಶಾಂತಿಲಾಲ, ಗಂಗಪ್ಪಾ ಪಾಶ್ಚಾಪೂರ, ವೀರುಪಾಕ್ಷ ಮುನ್ನವಳ್ಳಿಮಠ, ಮನೋಹರ ಝಂವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕಿರಣ ಡಮಾಮಗರ, ಆಸೀಫ ಮುಲ್ಲಾ, ರಮೇಶ ಬಡೆಪ್ಪಗೋಳ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

seventeen − 9 =