Breaking News

*ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಚಾಲನೆ.!*

Spread the love

ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಚಾಲನೆ.!


ಗೋಕಾಕ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ ಹಾಗೂ ವಿಶ್ವಹಿಂದು ಪರಿಷತ ಗೋಕಾಕ ಇವುಗಳ ಸಹಯೋದೊಂದಿಗೆ ಅಯೋಧ್ಯೆಯಲ್ಲಿ ಬರುವ ಜನೇವರಿ ೨೨ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.
ಬುಧವಾರದಂದು ನಗರದ ನಾಯಕ ಗಲ್ಲಿಯ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಮಂತ್ರಾಕ್ಷತೆಯ ಕಲಶಗಳಿಗೆ ವಿಶೇಷ ಪೂಜೆ ನೆರವೇರಿಸಿ ವಿವಿಧ ವಾದ್ಯಮೇಳ, ಸುಮಂಗಲಿಯರು ಆರತಿ ಮತ್ತು ಕುಂಭಗಳೊAದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯ ಮೂಲಕ ರವಿವಾರ ಪೇಠದ(ಕಡಲಗಿಕರ ಆಸ್ಪತ್ರೆ ಹತ್ತಿರ) ಶ್ರೀ ರಾಮ ಮಂದಿರಕ್ಕೆ ತರಲಾಯಿತು. ಶೋಭಾಯಾತ್ರೆಯೂದ್ದಕ್ಕೂ ಹನುಮ ಮಾಲಾಧಾರಿಗಳ ರಾಮನಾಮ ಪಠಣ, ರಾಮ ಭಜನೆ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಗುಬ್ಬಲಗುಡ್ಡದ ಶ್ರೀ ಮಲ್ಲಾಕಾರ್ಜುನ ಮಹಾಸ್ವಾಮಿಗಳು, ಕಪರಟ್ಟಿಯ ಶ್ರೀ ಬಸವರಾಜ ಸ್ವಾಮಿಜಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ವಿಶ್ವಹಿಂದು ಪರಿಷತ ವಿಭಾಗ ಪ್ರಮುಖ ನಾರಾಯಣ ಮಠಾಧಿಕಾರಿ, ಶ್ರೀರಾಮ ಪ್ರತಿಷ್ಠಾನ ಅಭಿಯಾನದ ಜಿಲ್ಲಾ ಸಂಯೋಜಕ ನಂಜುAಡ ಜುಗಳಿ, ವಿಶ್ವಹಿಂದು ಪರಿಷತ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾ ಕುರಬಗಟ್ಟಿ, ನಗರ ಅಧ್ಯಕ್ಷ ಆನಂದ ಪಾಟೀಲ, ಉಪಾಧ್ಯಕ್ಷ ಸಂಜು ಚಿಪ್ಪಲಕಟ್ಟಿ, ಆರ್‌ಎಸ್‌ಎಸ್ ಪ್ರಮುಖರಾದ ಎಮ್ ವಾಯ್ ಹಾರುಗೇರಿ, ಎಮ್ ಡಿ ಚುನಮರಿ, ವಿಕಾಸ ನಾಯಿಕ, ಸದಾಶಿವ ಗುದಗೋಳ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಬಸವರಾಜ ಹಿರೇಮಠ, ಲಕ್ಕಪ್ಪ ತಹಶೀಲದಾರ, ಸುರೇಶ ಪತ್ತಾರ, ಮಂಜು ಪ್ರಭುನಟ್ಟಿ, ರವಿ ಮಡ್ಡೆಪ್ಪಗೋಳ, ಮುಖಂಡರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ನಾಗಪ್ಪ ಶೇಖರಗೋಳ, ಸದಾನಂದ ಕಲಾಲ, ನಿಂಗಪ್ಪ ಕುರಬೇಟ, ಶಿವಪ್ಪ ಗುಡ್ಡಾಕಾಯು, ಬಸವರಾಜ ಆರೇನ್ನವರ, ದುರ್ಗಪ್ಪ ಶಾಸ್ತಿçಗೊಲ್ಲರ, ಜ್ಯೋತಿಭಾ ಸುಭಂಜಿ, ಬಾಬು ಮುಳಗುಂದ, ಜಯಾನಂದ ಹುಣಚ್ಯಾಳ, ಪ್ರಕಾಶ ವರ್ಜಿ, ರಘು ಸುಭಂಜಿ, ಅಂಕುಶ ರೇಣಕೆ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

fifteen + seven =