ಬಿಇ ಮತ್ತು ಎಮ್ಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ವಿತರಿಸಿದರು.!
ಗೋಕಾಕ: ಕೊಣ್ಣೂರು ಪುರಸಭೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಬಿಇ ಮತ್ತು ಎಮ್ಬಿಬಿಎಸ್ ವಿದ್ಯಾರ್ಥಿಗಳಿಗೆ ನೀಡಲಾದ ಲ್ಯಾಪ್ಟಾಪಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರದಂದು ವಿತರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ಅಶೋಕ ಕುಮಾರನಾಯ್ಕ, ರಾಮಲಿಂಗ ಮಗದುಮ, ಕುಮಾರ ಕೊಣ್ಣೂರ, ಗುಳಪ್ಪ ಅಸೂದೆ, ಮುಖ್ಯಾಧಿಕಾರಿ ಅಶೋಕ ಚನ್ನಕೋಟೆ, ಅಭಿಯಂತ ಎಮ್ ಎಸ್ ತೇಲಿ ಹಾಗೂ ಎಮ್ಎ ಪೆಡನ್ನವರ ಇದ್ದರು.