Breaking News

೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವದು ಕುಂದರನಾಡು ಭಾಗದ ಸಾಹಿತ್ಯಾಸಕ್ತರ ಸಂತಸ ಇಮ್ಮಡಿ.!

Spread the love

೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವದು ಕುಂದರನಾಡು ಭಾಗದ ಸಾಹಿತ್ಯಾಸಕ್ತರ ಸಂತಸ ಇಮ್ಮಡಿ.!


ಗೋಕಾಕ: ಅಡವಿಸಿದ್ಧೇಶ್ವರ ತಪೋ ಭೂಮಿ ಅಂಕಲಗಿಯಲ್ಲಿ ೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವದು ಕುಂದರನಾಡು ಭಾಗದ ಸಾಹಿತ್ಯಾಸಕ್ತರ ಸಂತಸ ಇಮ್ಮಡಿಯಾಗಿದೆ. ಕುಂದರನಾಡಿನ ಕುವರ, ಹಿರಿಯ ಸಾಹಿತಿ ಪ್ರೊ. ಶಿವಲಿಂಗಪ್ಪಾ ಭಾಂವಿಕಟ್ಟಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಕುಂದರನಾಡಿನ ಹೆಮ್ಮೆ.

ಸ್ವಾತಂತ್ರö್ಯ ಹೋರಾಟದ ಕ್ಷಾತ್ರ ಭೂಮಿಯಲ್ಲಿ ಸ್ವಾತಂತ್ರö್ಯ ಯೋಧರ ಮನೆತನದಲ್ಲಿ ಗೋಕಾವಿಯ ಕುಂದರನಾಡಿನ ಗ್ರಾಮೀಣ ಪರಿಸರದಲ್ಲಿ ಪ್ರೊ.ಭಾಂವಿಕಟ್ಟಿ ಹುಟ್ಟಿದ್ದು, ದೇಸಿಯ ಸಂಸ್ಕೃತಿಕ ಅಪ್ಪಟ ಜವಾರಿ ವ್ಯಕ್ತಿತ್ವದ ಶಿಕ್ಷಕ ಸಾಹಿತಿ, ತಮ್ಮ ಅಧ್ಯಯನ ಕ್ಷೇತ್ರಕಾರ್ಯ ಅನುಭವಗಳ ಇತಿಮಿತಿಯಲ್ಲಿ ಸಾಹಿತ್ಯವನ್ನು ಕೃಷಿಯಂತೆ ಶ್ರದ್ಧಾ ಭಕ್ತಿಯೊಂದಿಗೆ ಮಾಡಿಕೊಂಡು ಬಂದಿದ್ದಾರೆ. ಬಾಂವಿಕಟ್ಟಿ ಅವರನ್ನು ತುಂಬಾ ಪ್ರಭಾವಿಸಿದ್ದು ಈ ಮಣ್ಣಿನ ಜನಪದ ಸ್ವತಂತ್ರ ಚಳುವಳಿಗಳು ಅದೇ ರೀತಿ ಕೆಲ ಘನ ವ್ಯಕ್ತಿ ವಿಶೇಷಗಳು ಸಾಧನೆಗೆ ಪ್ರೇರೆಪಿಸಿದ್ದು ಇಲ್ಲಿ ಸುವ್ಯಕ್ತ ಸಾಹಿತ್ಯ ಬಾಂವಿಕಟ್ಟಿ ಅವರಿಗೆ ನಾಲ್ಕು ದಶಕಗಳ ನಂಟು.
ಪ್ರೊ.ಬಾಂವಿಕಟ್ಟಿ ಸ್ನೇಹಮಯಿ, ಸಹೃದಯಿ, ವಿನಯ ಸೌಜನ್ಯದ ಪ್ರತಿರೂಪ. ಪ್ರತಿಭಾಂತ ಲೇಖಕ ಕ್ರೀಯಾಶೀಲ ಶಿಕ್ಷಕ ಸಾಕಷ್ಟು ಕ್ಷೇತ್ರ ಕಾರ್ಯ ತಿರುಗಾಟ ಮಾಡಿ ಅಪಾರ ಪರಿಶ್ರಮದಿಂದ ಜಾನಪದ ಹೋರಾಟ ಚರಿತ್ರಿ ಪ್ರಕಟಿಸಿ ಗೋಕಾವಿಯ ಕುಂದರನಾಡಿನ ಋಣ ತಿರಿಸಿದ್ದಾರೆ. ಬಾಂವಿಕಟ್ಟಿ ಅವರ ಬರಹಕ್ಕಿಂತ ಬದುಕು ವ್ಯಕ್ತಿತ್ವ ದೊಡ್ಡದು. ತುಂಬಾ ಸರಳ, ನಿರಾಡಂಬರ ಮೃದು ಮಾತು ಮುಗ್ದ ಮನಸ್ಸು ಪ್ರಚಾರಕ್ಕೆ ಪುರಸ್ಕಾರ ಆಶಿಸದೆ ಬಸಂತವನದ ಕೋಗಿಲೆಯಂತೆ ಬಾಳಿ ಬದುಕಿದ ಅವರಿಗೆ ೭೫ರ ಹರೆಯ ಅಮೃತ ಮಹೋತ್ಸವದ ಸಂಭ್ರಮ.


ಕುಂದರನಾಡಿನ ಕ್ರಾಂತಿ ಚೇತನ ಬಸವರಾಜ ಕಟ್ಟಿಮನಿ ಕುರಿತು ಪ್ರೊ.ಬಾವಿಕಟ್ಟಿಯವರ ಐದು ಅವರೂಪದ ಲೇಖನಗಳಿವೆ. ಸ್ವತಂತ್ರö್ಯ ಮತ್ತು ಬದುಕಿನ ಹೋರಾಟ, ಪತ್ರಕರ್ತ, ಸಾಹಿತಿ ಜೀವನ ಕುರಿತಂತೆ ಬಸವರಾಜ ಕಟ್ಟಿಮನಿ ಒಡನಾಡಿಯಾಗಿ ಸಹೃದಯಿಯಾಗಿ ಚಿತ್ರಕಾವ್ಯ ಬಿಡಿಸುತ್ತಾರೆ. ಸಾಮಾಜಿಕ ಅನ್ಯಾಯ, ಅಸಮತೆ, ಶೋಷಣೆ ವಿರುದ್ಧ ಲೇಖನಿಯನ್ನು ಅಸ್ತçವಾಗಿ ಝಳಪಿಸಿದ್ದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ.
ಗೋಕಾವಿ ನಾಡಿನ ಮಣ್ಣಿನ ಭಾಷೆ ಗೋಕಾವಿ ಸಿದ್ದರ ಗದ್ದುಗೆ ಶರಣರ ಸಂತರ ನೆಲವಿಡು. ಜಾಗೃತಕ್ಷೇತ್ರ. ಔದ್ಯೋಗಿಕ, ವಾಣಿಜ್ಯ ಕ್ಷೇತ್ರ. ಆಲಪಾತ ಪ್ರಕೃತಿ ಸೌಂದರ್ಯದ ಪ್ರವಾಸಿ ತಾಣ. ಬಣ್ಣಗಾರಿಕೆ, ಹೈನುಗಾರಿಕೆ, ಸುಣ್ಣಗಾರಿಕೆ, ಕರದಂಟು, ಕಲೆ ಸಾಹಿತ್ಯ, ಜಾನಪದ ಕಲೆಗಳು, ಜಾನಪದ ರಂಗ ಭೂಮಿ, ಸಣ್ಣಾಟ, ಪಾರಿಜಾತ ತವರಾದ ಗೋಕಾವಿ ನಾಡನ್ನು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಚಿರಂತವಾಗಿಟ್ಟುಕೊಡುತ್ತಾರೆ. ಜಾನಪದದ ಏಂಟು ಬರಹಗಳ ಗೋಕಾವಿಯ ಹಿರಿಮೆ ಗರಿಮೆ ತುಂಬ ಮೌಲಿಕತ್ವವಾಗಿ ಬಾಂವಿಕಟ್ಟಿ ಅಧ್ಯಾಪನಕ್ಕೆ ಸಾಕ್ಷಿಯಾಗಿದೆ.


ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಯು ಶಿವಲಿಂಗಪ್ಪ ಭಾವಿಕಟ್ಟಿ ಅವರಿಗೆ ದೊರೆತ. ಗೋಕಾಕ ತಾಲೂಕ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನವು ಅವರ ಶ್ರಮಕ್ಕೆ ಸಂದ ಗೌರವ ಇದಾಗಿದ್ದು, ಕುಂದರನಾಡಿನ ಸಾಹಿತ್ಯ ಕ್ಷೇತ್ರದ ಎಲ್ಲೆಡೆ ಹರ್ಷ ವ್ಯಕ್ತವಾಗಿದೆ. ಭಾವಿಕಟ್ಟಿ ಅವರು ಕೆಜೆಎಸ್‌ನ ಎಸ್‌ಎ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೩ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
ಭಾವಿಕಟ್ಟಿ ಅವರು ಸಂಪಾದಿಸಿದ ಕವನ ಸಂಕಲನ, ಜಾನಪದದಲ್ಲಿ ಅಂಕಲಗಿ ಅಡವೇಶ, ಓದುಗರ ಮೈ ನವಿರೇಳಿಸುವಂಥಹ ಕೃತಿಗಳಲ್ಲೊಂದಾಗಿದೆ. ಅವರ ಇನ್ನೂಂದು ಅತ್ತ್ಯುತ್ತಮ ಕೃತಿಗಳಲ್ಲಿಯ ಹೊರೆ ಅಪಾರ ಸಾಹಿತ್ಯಭಿಮಾನಿಗಳ ಬೇಡಿಕೆಯ ಕೃತಿಯಾಗಿದ್ದು, ಅನೇಕ ಕವನ ಸಂಕಲನಗಳು, ಕಥೆಗಳು, ನಾಟಕಗಳು, ಕಾದಂಬರಿಗಳು ಅವರ ಕಸುವಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಮ್ಮೇಳನ ನಡೆಯುವ ಈ ಪುಣ್ಯ ಭೂಮಿಗೆ ಭವ್ಯ ಇತಿಹಾಸವಿದೆ. ಹಿಂದೆ ವಿದ್ಯಾ ಕೇಂದ್ರವಾಗಿರಬಹುದೆAಬ ಸಂಶೋಧನೆಗಳು ನಡೆದುವೆ. ಧಾರವಾಡ ಜಿಲ್ಲೆ ವಿಭಜನೆಯಾಗಿ ಬೆಳಗಾವಿ ಜಿಲ್ಲೆಯಾಗಿ ರಚನೆಯಾಗುವಾಗ ಘಟಪ್ರಭಾ, ಅಂಕಲಗಿ ಎಂಬುದು ಗಮನಾರ್ಹ ಸಂಗತಿ.
ಕುಂದರನಾಡು ಸಂಘಟನೆಯಲ್ಲಿ ಎತ್ತಿದ ಕೈ. ಹುದಲಿ ಮತ್ತು ಪಾಶ್ಚಾಪುರ ಬೇರೆ ಬೇರೆ ತಾಲೂಕಿನಲ್ಲಿ ಇದ್ದರೂ ಕುಂದರನಾಡಿನ ಅವಿಭಾಜ್ಯ ಅಂಗ. ಸ್ವಾತಂತ್ರ‍್ಯ ಸಂಗ್ರಾಮ ಕಿಡಿ ಹತ್ತಿದ್ದೆ ಹುದಲಿ ಮತ್ತು ಪಾಶ್ಚಾಪುರದಲ್ಲಿ. ಗಂಗಾಧರ ದೇಶಪಾಂಡೆ ಅವರ ಕುಮರಿ ಆಶ್ರಮ ಸ್ವಾತಂತ್ರ‍್ಯ ಸೇನಾನಿಗಳ ತರಬೇತಿ ಕೇಂದ್ರವಾಗಿತ್ತು. ಕುಮರಿ ಆಶ್ರಮದ ರಾಷ್ಟ್ರೀಯ ಶಾಲೆಗಳು ನಾಡಿನಲ್ಲಿ ಅಕ್ಷರ ಬೀಜ ಬಿತ್ತುವದರ ಜೊತೆಗೆ ರಾಷ್ಟ್ರೀಯ ಪ್ರಜ್ಞೆ ಮೂಢಿಸಿದವು. ಸಾಹಿತಿ ಬೆಟಗೇರಿ ಕೃಷ್ಣಶರ್ಮ ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬಸವರಾಜ ಕಟ್ಟೀಮನಿ ಮತ್ತು ರಾಮ ಜಾಧವ ಸಂಗಡಿಗರೊAದಿಗೆ ಕೆಜೆ ಎಸ್ ಸಂಘ ಸ್ಥಾಪಿಸಿದರು. ಇಂದು ಹೆಮ್ಮರವಾಗಿ ಬೆಳೆದಿದೆ. ವಿದ್ಯಾರಣ್ಯ ಸಂಸ್ಥೆ, ನಾಯಕ ಸ್ಟುಡೇಂಟ್ ಫೆಡರೇಶನ್ , ಮಹಾತ್ಮ ಗಾಂಧಿ ಪಬ್ಲಿಕ್ ಶಾಲೆ ಪ್ರಾರಂಭಗೊAಡು ಕುಂದರನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿವೆ.

ಬಸವರಾಜ ಕಟ್ಟಿಮನಿ ಅವರು ಉಳುವವನೆ ಭೂ ಒಡೆಯ ಹೋರಾಟ ಸಂಘಟಿಲು ಸುಲಧಾಳ ೧೯೫೬ ರಲ್ಲಿ ರೈತ ಸಭೆ ನಡೆಸಿದ್ದರು. ನಿಜಲಿಂಗಪ್ಪ, ದೇವರಾಜ ಅರಸು, ಪಾಟೀಲ ಪುಟ್ಟಪ್ಪ ಮೊದಲಾದವರು ಭಾಗವಹಿಸಿದ್ದರು. ೧೯೬೧ ರಲ್ಲಿ ಗುಜನಾಳದಲ್ಲಿ ಬೇಡರ ಪರಿಷತ ಸಂಘಟಿಸಲು ಶಿವನಗೌಡ ಮಲಗೌಡ ಪಾಟೀಲ ಬೃಹತ್ ಸಭೆ ನಡೆಸಿದ್ದರು.

ಕುಂದರನಾಡು ಸಹ್ಯಾದ್ರಿ ಶ್ರೇಣಿಯ ಪವಡಿಇರುವ ಬೆಟ್ಟ ಗುಡ್ಡಗಳು, ಮಾರ್ಕಂಡೇಯ ನದಿ, ಬಳ್ಳಾರಿ ಹಳ್ಳ, ಖನಿಜ ಪ್ರದೇಶಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಮರಳು ಮಿಶ್ರಿತ ಕಪ್ಪು ಮಣ್ಣಿನ ಸಿರಿನಾಡು. ಜಾನಪದರು ಹಂತಿಪದಗಳಲ್ಲಿ ‘ಕಣದಾಗ ಕಂಕಿಯಿರಲಿ, ಒಲಿಯಾದ ಬೆಂಕಿಯಿರಲಿ’ ಎಂದು ಹಾಡುತ್ತಾರೆ. ಎಲ್ಲ ಕಾಲಕ್ಕೂ ಸಮೃದ್ಧ ಬೆಳೆ ಬೆಳೆದು, ಸತತ ಅನ್ನದಾನವಾಗಲಿ ಎಂಬ ಭಾವ. ಇದಕ್ಕೆ ಅಡವಿಸಿದ್ದೇಶ್ವರರ ಆಶಿರ್ವಾದವು ಕಾರಣ. ಮಹಾತಪಸ್ವಿ ಶ್ರೀ ಅಡವಿಸಿದ್ದೇಶ್ವರರಿಗೆ ಐದು ಜನ ಶಿಷ್ಯಂದಿರು. ಕುಂದರನಾಡಿನಲ್ಲಿ ತವಗದ ಬಾಳಯ್ಯನವರು, ಕೈತನಾಳದ ನಿರುಪಾಧೀಶರು, ತುಮಕೂರಿನ ಚಿಕ್ಕತೊಟ್ಟಲಗೆರೆಯ ಅಟವಿಸ್ವಾಮಿಗಳು, ಬಿಳಗಿಯ ರುದ್ರಯ್ಯನವರು, ಮರೆಗುದ್ದಿಯ ನಿರುಪಾಧೀಶ್ವರರು ಶ್ರೀ ಅಡವಿದ್ದೇಶ್ವರರ ದಾಸೋಹ ಪರಂಪರೆಯನ್ನು ಕುಂದರನಾಡಿನ ತುಂಬ ಪಸರಿಸಿದರು.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

sixteen − 9 =