Breaking News

ಇಂದು ರಾಜ್ಯದಲ್ಲಿ 1925 ಜನರಿಗೆ ಕೊರೊನಾ ಸೊಂಕು: ಒಟ್ಟು 23474 ಸೊಂಕಿತರು

Spread the love

ಇಂದು ರಾಜ್ಯದಲ್ಲಿ 1925 ಜನರಿಗೆ ಕೊರೊನಾ ಸೊಂಕು: ಒಟ್ಟು 23474 ಸೊಂಕಿತರು
ಬೆಳಗಾವಿ. ಜು.: 5: ರಾಜ್ಯದಲ್ಲಿ ಕೊರೊನಾ ಅರ್ಭಟ ಜೋರಾಗಿದ್ದು, ಇಂದು ರವಿವಾರ ರಾಜ್ಯದಲ್ಲಿ 1925 ಜನರಿಗೆ ಕೊರೊನಾ ಸೊಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು 38 ಜನರು ಸಾವನ್ಬಪ್ಪಿದ್ದಾರೆ. 603 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.‌
ಬೆಂಗಳೂರು ನಗರ ಜಿಲ್ಲೆಯಲ್ಲಿ 1235, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 147, ಬಳ್ಳಾರಿ ಜಿಲ್ಲೆಯಲ್ಲಿ 90, ,ವಿಜಯಪುರ ಜಿಲ್ಲೆಯಲ್ಲಿ 51, ಕಲಬುರಗಿ ಜಿಲ್ಲೆಯಲ್ಲಿ 49, ಧಾರವಾಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ 45, ಬೀದರ ಜಿಲ್ಲೆಯಲ್ಲಿ 29, ಮೈಸೂರು ಜಿಲ್ಲೆಯಲ್ಲಿ 25, ಕೊಪ್ಪಳ ಜಿಲ್ಲೆಯಲ್ಲಿ 22, ಉತ್ತರ ಕನ್ನಡ ಜಿಲ್ಲೆಯಲ್ಲಿ 21, ಚಾಮರಾಜನಗರ ಜಿಲ್ಲೆಯಲ್ಲಿ 19, ಹಾವೇರಿ ಜಿಲ್ಲೆಯಲ್ಲಿ 15, ಹಾಸನ ಜಿಲ್ಲೆಯಲ್ಲಿ 14, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಯಲ್ಲಿ 13, ಬೆಳಗಾವಿ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ತಲಾ 11, ರಾಯಚೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ 10, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 9, ಶಿವಮೊಗ್ಗ ಜಿಲ್ಲೆಯಲ್ಲಿ 8, ಗದಗ ಜಿಲ್ಲೆಯಲ್ಲಿ 7, ರಾಮನಗರ ಜಿಲ್ಲೆಯಲ್ಲಿ 6,ಬಾಗಲಕೋಟ ಜಿಲ್ಲೆಯಲ್ಲಿ 4, ಚಿತ್ರದುರ್ಗ ಜಿಲ್ಲೆಯಲ್ಲಿ 3 ಜನರಿಗೆ ಕೊರೊನಾ ಸೊಂಕು ತಗುಲಿದೆ
ಬೆಳಗಾವಿ ಜಿಲ್ಲೆಯಲ್ಲಿ 11 ಜನರಿಗೆ ಸೊಂಕು : ,ಕೊರೊನಾ ಸೊಂಕು ಅರ್ಭಟ ಜಿಲ್ಲೆಯಲ್ಲಿ ಮುಂದುವರೆದಿದ್ದು ಇಂದು ಜಿಲ್ಲೆಯಲ್ಲಿ 11 ಜನರಿಗೆ ಕೊರೊನಾ ಸೊಂಕು ತಗುಲಿದೆ. ಬೆಳಗಾವಿ ನಗರದ ವೀರಭದ್ರನಗರ, ಅನಗೋಳ, ಹನುಮಾನ ನಗರ,ಸುಭಾಷನಗರ ತಲಾ ಓರ್ವರಿಗೆ, ಅಥಣಿ ಪಟ್ಟಣದಲ್ಲಿ ಓರ್ವರು, ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಮೂವರಿಗೆ, ವಿಕ್ರಮಪುರ ಗ್ರಾಮದಲ್ಲಿ ಓರ್ವರು, ರಾಯಬಾಗ ತಾಲೂಕಿನ ಕುಡಚಿ ಮತ್ತು ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ತಲಾ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.
ಖಡಕ ಲಾಕಡೌನ: ರಾಜ್ಯದಲ್ಲಿ ಇಂದು ಖಡಕ ಲಾಕಡೌನ ಮಾಡಲಾಗಿತ್ತು. ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ಪೋಲಿಸರು ಲಾಕಡೌನ ಸಂದರ್ಭದಲ್ಲಿ ಬಿಗಿಯಾದ ಕ್ರಮ ಕೈಗೊಂಡು ಸೂಕ್ತ ಬಂದೊಬಸ್ತ ಮಾಡಿದ್ದರು.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

two × three =