ವಿಜೃಂಭಿಸಿದ ಮಹಾನ ತಪಸ್ವಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳ ಮಠದ ರಥೋತ್ಸವ.!
ಗೋಕಾಕ: ತಾಲೂಕಿನ ಅಂಕಲಗಿ ಗ್ರಾಮದ ಮಹಾನ ತಪಸ್ವಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳ ಮಠದ ರಥೋತ್ಸವ ರವಿವಾರ ಲಕ್ಷಾಂತರ ಭಕ್ತರ ಮಧ್ಯೆ ಜರುಗಿತು.
ರಥೋತ್ಸವದಲ್ಲಿ ಸೇರಿದ ಭಕ್ತರು ತಮ್ಮ ಇಷ್ಟಾರ್ಥಸಿದ್ಧಿಗಾಗಿ ರಥಕ್ಕೆ ಹಣ್ಣು, ಕಾಯಿ, ಎಸೆದು ಹರಕೆ ತೀರಿಸಿದರು. ಶ್ರೀಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಿದರು.
ಮಠದ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಸಂಜೆ ೪ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಥೋತ್ಸವವು ಶ್ರೀಮಠದಿಂದ ಸುಮಾರು ೧.ಕಿಮಿ ದೂರದ ಮುಖ್ಯ ರಸ್ತೆಯಲ್ಲಿರುವ ಅಡವಿಸಿದ್ಧೇಶ್ವರ ಪಾದಗಟ್ಟೆಯವರೆಗೆ ತೆರಳಿ ಶ್ರೀಮಠಕ್ಕೆ ಆಗಮಿಸಿತು. ಜಾತ್ರೆಯು ಅತ್ಯಂತ ವೈಭಯುತವಾಗಿ ಜರುಗಲು ಸೂಕ್ತ ಪೋಲಿಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಾತ್ರಾಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ದನಗಳ ಜಾತ್ರೆಯಲ್ಲಿ ದನಗಳ ಮಾರಾಟ ಭರ್ಜರಿಯಾಗಿತ್ತು.