Breaking News

ಡಿ.12ರಂದು ಬೆಂಗಳೂರಿನಲ್ಲಿ ಇಪ್ಪತ್ತೈದು ಲಕ್ಷ ಜನರನ್ನ ಸೇರಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಮಾಡುತ್ತೇವೆ-ಬಸವ ಜಯಮೃತ್ಯುಂಜಯ ಸ್ವಾಮೀಜಿ!!

Spread the love

ಡಿ.12ರಂದು ಬೆಂಗಳೂರಿನಲ್ಲಿ ಇಪ್ಪತ್ತೈದು ಲಕ್ಷ ಜನರನ್ನ ಸೇರಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಮಾಡುತ್ತೇವೆ-ಬಸವ ಜಯಮೃತ್ಯುಂಜಯ ಸ್ವಾಮೀಜಿ!!

ಯುವ ಭಾರತ ಸುದ್ದಿ ಗೋಕಾಕ: ಗೋಕಾಕ್ ಯಾವಾಗಲೂ ಮುಖ್ಯಮಂತ್ರಿಯವರಿಗೆ ರಾಜಕೀಯವಾಗಿ ಡಿಸ್ಟರ್ಬ್ ಮಾಡುತ್ತಿತ್ತು. ಈ ಬಾರಿ ಗೋಕಾಕ್ ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ವಿಚಾರ ಸರ್ಕಾರಕ್ಕೆ ಡಿಸ್ಟರ್ಬ್ ಮಾಡತಾಯಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ನ್ಯೂ ಇಂಗ್ಲೀಷ ಶಾಲೆ ಆವರಣದಲ್ಲಿ ನಡೆದ ಡಿ.12ರಂದು ವಿಧಾನಸೌಧಕ್ಕೆ ಮಹಾ ಮುತ್ತಿಗೆ ಅಂಗವಾಗಿ ಗೋಕಾಕ ಪಂಚಮಸಾಲಿ ೨ಎ ಮೀಸಲಾತಿ ಹಕ್ಕೋತ್ತಾಯ ಸಮಾವೇಶದಲ್ಲಿ ಮಾತನಾಡಿ, ಹತ್ತು ಲಕ್ಷ ಜನರನ್ನ ಸೇರಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ರೂ ಸರ್ಕಾರದ ಕಿವಿ ಕೇಳಲಿಲ್ಲ. ಮುಖ್ಯಮಂತ್ರಿ ನಿವಾಸದ ಎದುರು ಹೋರಾಟ ಮಾಡಿದ್ರೂ ಮೀಸಲಾತಿ ಕೊಡಲಿಲ್ಲ. ಕೊನೆಯದಾಗಿ ಡಿ.೧೨ರಂದು ಬೆಂಗಳೂರಿನಲ್ಲಿ ಇಪ್ಪತ್ತೈದು ಲಕ್ಷ ಜನರನ್ನ ಸೇರಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಮಾಡುತ್ತೇವೆ ಎಂದರು.
ಬಸವಗೌಡ ಪಾಟೀಲ ಯತ್ನಾಳ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪಟ್ಟ ಕಷ್ಟ ಜಗತ್ತಿನ ಯಾವುದೇ ನಾಯಕ ಅನುಭವಿಸಿದ ಕಷ್ಟ ಅನುಭವಿಸಿದ್ದಾರೆ. ಭಾರತ ಸಂಸ್ಕೃತಿ ಹೇಗಿದೆ ಎಂದ್ರೆ ರಾಮಾಯಣ ಮಹರ್ಷಿ ವಾಲ್ಮೀಕಿ ಬರೆದರು. ವೇದವ್ಯಾಸರು ಮಹಾಭಾರತ ಬರೆದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಂತಹ ಪರಮಾತ್ಮ ಹಿಂದೂ ಬಗ್ಗೆ ಯಾವತ್ತೂ ಮಾತನಾಡಲಿಲ್ಲ ಎಂದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್‌ಗೆ ಮೇಲ್ವರ್ಗದವರು ಬಹಳ ಅನ್ಯಾಯ ಮಾಡಿದರು. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದೀನಿ ಸಾಯುವಾಗ ಹಿಂದೂ ಧರ್ಮದಲ್ಲಿ ಇರಲ್ಲ ಅಂತಾ ಅಂಬೇಡ್ಕರ್ ಹೇಳಿದರು. ಅವರು ಅಪ್ಪಿತಪ್ಪಿಯು ಸಹ ಇಸ್ಲಾಂ, ಕ್ರೆöÊಸ್ತ ಧರ್ಮಕ್ಕೆ ಹೊಗಲಿಲ್ಲ. ೧೯೫೬ರಲ್ಲಿ ನಾಗ್ಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡ್ತಾರೆ. ಅದರ ಮೂಲ ಹಿಂದು ಎಂಬುದನ್ನು ಗಮನದಲ್ಲಿಡಿ ಎಂದು ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಅವರು ನಾನು ಅಂಬೇಡ್ಕರ್ ಪುಸ್ತಕ ಓದಿದೀನಿ, ವಿಧಾನಸಭೆಯಲ್ಲಿ ಮಾತನಾಡಿದೀನಿ. ನೀವು ಮಾತನಾಡಿ. ಲಿಂಗಾಯತರು ೧೧ ರೂಪಾಯಿ ಅಂದವರಿಗೆ ಎಲ್ಲರೂ ಉತ್ತರ ಕೊಡಿ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಪಾಕಿಸ್ತಾನ ಒಡೆದು ಕೊಡಬೇಡ್ರಿ ಅಂತಾ ನೆಹರು ಅವರಿಗೆ ಹೇಳಿದರು. ನೀವು ಹಿಂದೂ ಧರ್ಮದ ಬಗ್ಗೆ ಮಾತನಾಡ್ತಿರಾ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳಿಂದ ಮೊಘಲರು ಬಂದರೂ ಏನೂ ಆಗಿಲ್ಲ ಇನ್ನು ನಿವೇನು ಮಾಡೋದು. ಮುಗ್ದ ಜನರನ್ನು ಬಳಸುವ ಬದಲು ತಾಕತ್ ಇದ್ದರೆ ನೇರವಾಗಿ ನನ್ನ ಜೊತೆ ಯುದ್ಧಕ್ಕೆ ಬರುವಂತೆ ಸತೀಶ ಅವರಿಗೆ ಸವಾಲು ಹಾಕಿದರು. ಮುಂಬರುವ ದಿನಗಳಲ್ಲಿ ಉಪ್ಪಾರ ಹಾಗೂ ಕುರುಬ ಸಮಾಜದವರಿಗೆ ಜಿಲ್ಲೆಯಲ್ಲಿ ರಾಜಕೀಯ ಸ್ಥಾನ ಮಾನ ದೊರಕಿಸಲು ನಮ್ಮ ಸಮಾಜದ ಎಲ್ಲ ನಾಯಕರು ಶ್ರಮಿಸುತ್ತೆವೆ ಎಂದರು.
ವಾಲ್ಮೀಕಿ ಸಮುದಾಯ, ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ಬೇಕು ಅಂತಾ ವಿಧಾನಸಭೆಯಲ್ಲಿ ಕೇಳಿದ್ದೆ. ನಾನು ಕೇವಲ ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡಿಲ್ಲ. ಸಮಾಜದ ಎಲ್ಲ ಜನರ ವಿಚಾರ ಬಗ್ಗೆ ಮಾತನಾಡಿದೀನಿ. ನೀವೆಂದು ಮಾತನಾಡಿದ್ದಿರಿ. ಎಂದು ಪ್ರಶ್ನಿಸಿ ಯಮಕನಮರಡಿ ಮತಕ್ಷೇತ್ರದಲ್ಲಿ ಜನರಲ್ ಇತ್ತಂದ್ರೆ ನಾನೇ ಬಂದ್ ನಿಲ್ತೀನಿ ಅಲ್ಲೇ ಎಂದು ಟಾಂಗ್ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಗೋಕಾಕನಲ್ಲಿ ಸಮಾವೇಶ ಮಾಡುವಾಗ ಬಹಳಷ್ಟು ವಿಗ್ನ ಎದುರಾಯಿತು. ನಾವು ಸಂಘಟಿತರಾದ್ರೆ ಉಳಿದವರಿಗೆ ಹೊಟ್ಟೆ ಕಿಚ್ಚು ಏಕೆ. ನಾನು ರಾಜ್ಯಸಭಾ ಸದಸ್ಯ, ನನಗೇನು ಶಾಸಕನಾಗಬೇಕಿಲ್ಲ. ರಾಜಕಾರಣ ಯಾರ ಅಪ್ಪನ ಸ್ವತ್ತಲ್ಲ ಎಂದು ಜಾರಕಿಹೋಳಿ ಸಹೋದರರ ವಿರುದ್ಧ ಈರಣ್ಣ ಕಡಾಡಿ ಪರೋಕ್ಷ ವಾಗ್ದಾಳಿ ನಡೆಸಿದರು.
ನಮ್ಮ ನಮ್ಮಲ್ಲಿ ಒಳ ಜಗಳ ಸರಿಯೇ? ಎನ್ನುವುದನ್ನ ಪರಾಮರ್ಶೆ ಮಾಡಿಕೊಳ್ಳಬೇಕಿದೆ. ನಾವು ಯಾರ ಗುಲಾಮರಲ್ಲ. ನಾನು ರಾಜ್ಯಸಭಾ ಸದಸ್ಯನಾದ ನಂತರ ನನ್ನ ಹತ್ತಿರ ಜನ ಹೆದರಿ ಬರುತ್ತಿಲ್ಲ. ನಮ್ಮ ಜನರು ಮುಂದಿನ ದಿನದಲ್ಲಿ ರಾಜಕೀಯ ನಿರ್ಣಯ ಮಾಡಿ, ನೀವು ನನ್ನ ಜೊತೆಗೆ ನಿಲ್ಲಬೇಕು ಎಂದರು.
ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಮಾತನಾಡಿ, ಮೀಸಲಾತಿ ಸಿಗುವವರೆಗೂ ನಾವು ಶ್ರಮಿಸುವುದಿಲ್ಲ. ನಮ್ಮನ್ನ ಅಶಕ್ತರು, ದುರ್ಬಲರಾಗಿ, ನಮ್ಮ ಸಹನೆ ಪರೀಕ್ಷೆ ಮಾಡಬೇಡಿ. ಮೀಸಲಾತಿಗಾಗಿ ಎಷ್ಟಂತಾ ಹೋರಾಟ ಮಾಡಬೇಕು. ನಿಸ್ವಾರ್ಥತೆಯಿಂದ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಬೇರೆ ಯಾರಿಗಾದರೂ ನಾವು ತೊಂದರೆ ಕೊಟ್ಟಿದ್ದೇವಾ. ಬೇರೆ ಸಮಾಜದವರನ್ನೇ ನಾವು ನಮ್ಮವರು ಅಂತಾ ಹೇಳ್ತೆವಿ. ಮುಖ್ಯಮಂತ್ರಿಗಳೇ ಸರ್ ನೀವು ಕೂಡ ನಮ್ಮ ಸಮಾಜದವರು ನೀವೇ ಮೀಸಲಾತಿ ಕೊಡದಿದ್ರೇ ಇನ್ಯಾರು ಬಂದು ಕೊಡ್ತಾರೆ ಎಂದರು.
ಇದಕ್ಕೂ ಮುಂಚೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ನ್ಯೂ ಇಂಗ್ಲೀಷ ಶಾಲೆ ಆವರಣದಲ್ಲಿ ನಿರ್ಮಿಸಿದ ವೇದಿಕೆಯ ವರೆಗೆ ಪಂಚಮಸಾಲಿ ಸಮಾಜ ಭಾಂದವರಿAದ ಮೆರವಣಿಗೆ ಮಾಡಲಾಯಿತು.
ವೇದಿಕೆಯ ಮೇಲೆ ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಚ್ ಎಸ್ ಶಿವಶಂಕರ. ಶಶಿಕಾಂತ ನಾಯಿಕ, ಆರ್ ಕೆ ಪಾಟೀಲ, ನಿಂಗಪ್ಪ ಪಿರೋಜಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

five × 1 =