ಬಾರೋ ಬಾರು!
———————
ಎಲ್ಲೇ ನಿಂತ್ ಒಗದ್ರೂ
ಕವಿ ತೆಲಿಗೇ
ಬಡೀತಿದ್ದ
ಧಾರ್ವಾಡದ ಕಲ್ಲು,
ಈಗ ಬಡ್ಯಾಕ್ಹತ್ತೇತಿ
ಬಾರೋ ಬಾರಿಗೆ;
ಕಥೀ ಹಿಂಗಿರೂವಾಗ
ಬೇಂದ್ರೆಯಜ್ಜಾ,
ಬಾರೋ ಬಾರೋ
ಸಾಧನಕೇರಿಗಂತ
ಹೆಂಗ್ ಕರೀಲೋ
ನಿನ್ನ ನಮ್ಮೂರಿಗೆ?

ಡಾ. ಬಸವರಾಜ ಸಾದರ.
— + —
Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …