Breaking News

Yuva Bharatha

ರಾಣಿ ಚನ್ನಮ್ಮ ಬ್ಯಾಂಕಿನಿಂದ ಗ್ರಾಹಕರ ಸಮಾವೇಶ ಮತ್ತು ಕಾಯಕ ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದ ಆಶಾ ಕೋರೆ

ರಾಣಿ ಚನ್ನಮ್ಮ ಬ್ಯಾಂಕಿನಿಂದ ಗ್ರಾಹಕರ ಸಮಾವೇಶ ಮತ್ತು ಕಾಯಕ ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದ ಆಶಾ ಕೋರೆ ಯುವ ಭಾರತ ಸುದ್ದಿ ಬೆಳಗಾವಿ : ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ ವತಿಯಿಂದ ಗ್ರಾಹಕರ ಸಮಾವೇಶ ಮತ್ತು ಕಾಯಕ ಕಟ್ಟೆಯ ಮಹಿಳಾ ಉದ್ದಿಮೆದಾರರ ಬಳಗದವರಿಂದ ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ಗೃಹ ಕೈಗಾರಿಕೆಯಲ್ಲಿ ತಯಾರಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸೋಮವಾರ ಕನ್ನಡ ಸಾಹಿತ್ಯ ಭವನದಲ್ಲಿ ರಾಣಿ ಚನ್ನಮ್ಮಾ ಮಹಿಳಾ …

Read More »

ಕರುನಾಡಿಗೆ ಮತ್ತೊಂದು ವಿಮಾನ ನಿಲ್ದಾಣ : ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಭಾಗ್ಯ !

ಕರುನಾಡಿಗೆ ಮತ್ತೊಂದು ವಿಮಾನ ನಿಲ್ದಾಣ : ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಭಾಗ್ಯ ! ಯುವ ಭಾರತ ಸುದ್ದಿ ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ 12ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸೋಮವಾರ ತಿಳಿಸಿದ್ದಾರೆ. ನಗರದ ನವಲೆ, ಕೃಷಿ ಕಾಲೇಜು ಎದುರು ಚನ್ನಮುಂಬಾಪುರದಲ್ಲಿ ಜಿಲ್ಲಾ ಜಂಗಮ ಸಮಾಜದಿಂದ ನಿರ್ಮಿಸಲಾಗುತ್ತಿರುವ ಜಂಗಮ ಸಮಾಜದ ಸಾಂಸ್ಕೃತಿಕ ಭವನ ಶಿಲಾನ್ಯಾಸ …

Read More »

ಲಿಂಗರಾಜ ಕಾಲೇಜು : ಅರ್ಥಶಾಸ್ತ್ರ ಸಂಘ ಉದ್ಘಾಟನೆ

ಲಿಂಗರಾಜ ಕಾಲೇಜು : ಅರ್ಥಶಾಸ್ತ್ರ ಸಂಘ ಉದ್ಘಾಟನೆ ಯುವ ಭಾರತ ಸುದ್ದಿ ಬೆಳಗಾವಿ : ಅರ್ಥಶಾಸ್ತ್ರ ಸಂಘಗಳು ವಿದ್ಯಾರ್ಥಿಗಳಲ್ಲಿ ಸ್ವ ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮತ್ತು ನಿರ್ವಹಣೆ ಮೂಡಿಸುತ್ತದೆ ಎಂದು ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮಾಜಿ ಮುಖ್ಯಸ್ಥ ಡಾ.ಜಯಪ್ರಕಾಶ ರಾವ್ ಹೇಳಿದರು. ಸ್ಥಳಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಅರ್ಥಶಾಸ್ತ್ರ ಸಂಘ ಉದ್ಘಾಟಿಸಿ ಮಾತನಾಡಿದರು. ಅರ್ಥಶಾಸ್ತ್ರ ಸಂಘ ವಿದ್ಯಾರ್ಥಿಗಳಲ್ಲಿ ಸಂಶೋಧನಾ …

Read More »

ಬೆಳಗಾವಿ ಪೊಲೀಸರ ಕಾರ್ಯಾಚರಣೆ ; ಕೊನೆಗೂ ಆರೋಪಿಗಳು ಬಂಧನ

ಬೆಳಗಾವಿ ಪೊಲೀಸರ ಕಾರ್ಯಾಚರಣೆ ; ಕೊನೆಗೂ ಆರೋಪಿಗಳು ಬಂಧನ ಬೆಳಗಾವಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 8,50,000 ರೂ. ಕಿಮ್ಮತ್ತಿನ ಬಂಗಾರದ ಆಭರಣ, ಒಂದು ಕಾರ್, ಮತ್ತು 2 ಮೋಟರ್ ಸೈಕಲ್‌ ಜಪ್ತಿ ಮಾಡಿಕೊಂಡಿದ್ದಾರೆ. ಯುವ ಭಾರತ ಸುದ್ದಿ ಬೆಳಗಾವಿ : ಕಳೆದ ಸೋಮವಾರ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಹದ್ದಿಯ ಮಚ್ಛೆ ಗ್ರಾಮದ ಲಕ್ಷ್ಮೀ ನಗರದಲ್ಲಿ ಮನೆ ಮತ್ತು ಕಾರು ಕಳ್ಳತನವಾದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ …

Read More »

ಗೋಳಸಾರ : ಸದ್ಗುರು ಪುಂಡಲಿಂಗೇಶ್ವರ ಗರ್ಭಗುಡಿ ಉಪಪೀಠದ ಪೂಜಾ ಕೈಂಕರ್ಯ, ಆನೆಕಲ್ಲು ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮ, ದೀಪೋತ್ಸವ ಉದ್ಘಾಟನೆ

ಗೋಳಸಾರ : ಸದ್ಗುರು ಪುಂಡಲಿಂಗೇಶ್ವರ ಗರ್ಭಗುಡಿ ಉಪಪೀಠದ ಪೂಜಾ ಕೈಂಕರ್ಯ, ಆನೆಕಲ್ಲು ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮ, ದೀಪೋತ್ಸವ ಉದ್ಘಾಟನೆ ಯುವ ಭಾರತ ಸುದ್ದಿ ಇಂಡಿ : ಸರ್ಕಾರಕ್ಕೆ ಮಾಡಲಾಗದ ಸಮಾಜಿಮುಖಿ ಕಾರ್ಯಗಳನ್ನು ನಾಡಿನ ಮಠ,ಮಾನ್ಯಗಳು ಮಾಡುತ್ತಿವೆ.ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳು ಲಿಂಗೈಕ್ಯರಾಗಿ ೨೯ ವರ್ಷ ಕಳೆದರೂ ಅವರು ಇಂದು ಎಲ್ಲ ಭಕ್ತರ ಮನೆ,ಮನದಲ್ಲಿ ಬೆಳಕಾಗಿದ್ದಾರೆ.ಎಲ್ಲರನ್ನು ಪ್ರೀತಿಸಿ,ಜೊತೆಯಾಗಿ ಕರೆದುಕೊಂಡು ಹೋಗುವ ಮಠ ಗೋಳಸಾರ ಮಠವಾಗಿದೆ.ಮೌನ ಕ್ರಾಂತಿಯ ಮೂಲಕ ಧಾರ್ಮಿಕ ಇತಿಹಾಸ ಮೂಡಿಸುತ್ತಿರುವ ಅಭಿನವ …

Read More »

ಗುಣಮಟ್ಟದ ಶಿಕ್ಷಣಕ್ಕೆ ಕಲಿಕಾ ಹಬ್ಬ ಸಹಕಾರಿ

ಗುಣಮಟ್ಟದ ಶಿಕ್ಷಣಕ್ಕೆ ಕಲಿಕಾ ಹಬ್ಬ ಸಹಕಾರಿ ಯುವ ಭಾರತ ಸುದ್ದಿ ಬಸವನ ಬಾಗೇವಾಡಿ : ಕೋವಿಡ್-19 ಸಾಂಕ್ರಾಮಿಕ ರೋಗ ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಹಿನ್ನಡೆಗೆ ಕಾರಣವಾಗಿದೆ ಹಾಗೂ ಅದರಿಂದ ದುಷ್ಪರಿಣಾಮಗಳನ್ನು ಬೀರಿದ್ದು ಕಲಿಕಾ ಚೇತರಿಕೆ ಕಾರ್ಯಕ್ರಮದ ಯೋಜನೆಯನ್ನು ಈ ಸಮಸ್ಯೆಯ ನಿವಾರಣೆಗಾಗಿಯೇ ಇಲಾಖೆಯು ಹಮ್ಮಿಕೊಳ್ಳಲಾಗಿದೆ. ಇದೇ ಕಾರ್ಯಕ್ರಮದ ಮಹತ್ವದ ಭಾಗವಾಗಿ ಕಲಿಕಾ ಹಬ್ಬ ಇದೀಗ ಪ್ರಸ್ತುತಗೊಂಡಿದೆ. ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ …

Read More »

ಸಾಹಿತ್ಯ ಸಮ್ಮೇಳನದಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಆತ್ಮೀಯ ಸನ್ಮಾನ

ಸಾಹಿತ್ಯ ಸಮ್ಮೇಳನದಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಆತ್ಮೀಯ ಸನ್ಮಾನ ಯುವ ಭಾರತ ಸುದ್ದಿ ಹಾವೇರಿ : ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರನಾಡಿನಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಭಾರತೀಯ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಮೂಲತಃ ಕುಂದಾಪುರ ತಾಲೂಕಿನ ಬೈಂದೂರಿನವರು. ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೆ ಕರ್ನಾಟಕದಲ್ಲಿ ಪೂರ್ಣಗೊಳಿಸಿ ವೃತ್ತಿಯನ್ನು ಅರಸಿ ಕತಾರ್ ಗೆ 2007 ನೇ ಇಸವಿಯಲ್ಲಿ ಪಯಣ …

Read More »

ಬೀದರ ಉತ್ಸವದಲ್ಲಿ ಕರಬಲ್ಲ ಕುಣಿತ

ಬೀದರ ಉತ್ಸವದಲ್ಲಿ ಕರಬಲ್ಲ ಕುಣಿತ ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ತಾಲ್ಲೂಕಿನ ಫಾಲ್ಸ್ ಶ್ರೀ ಲಷ್ಮಿದೇವಿ ಕರಬಲ್ಲ ಮೇಳವ ಬೀದರ್ ಉತ್ಸವದ ಮೆರವಣಿಗೆಯಲ್ಲಿ ಪ್ರದರ್ಶನ ನೀಡಿ ಅಪಾರ ಜನ ಮೆಚ್ಚುಗೆ ಪಡೆಯಿತು. ಈ ತಂಡಕ್ಕೆ ಗೋಕಾಕ್ ಶ್ರೀ ವಾಲ್ಮೀಕಿ ಜಾನಪದ ಸಂಸ್ಥೆಯ ಅಧ್ಯಕ್ಷರು, ಕರ್ನಾಟಕ ಭೂಷಣ, ಜಾನಪದ ರತ್ನ, ಕರ್ನಾಟಕ ಕಲಾ ಕೇಶರಿ ರಾಜ್ಯ ಪ್ರಶಸ್ತಿ ಪುರಸ್ಕೃತ, ವಕೀಲ ಉದ್ದಣ್ಣಾ ಗೋಡೇರ (ಗೌಡರ) ಉತ್ತಮ ನಿರ್ದೇಶನ ನೀಡಿ …

Read More »

ಬಾದಾಮಿಗೆ ಗುಡ್ ಬೈ ಹೇಳಿ ಹೊಸ ಕ್ಷೇತ್ರ ಘೋಷಣೆ ಮಾಡಿದ ಸಿದ್ದು

ಬಾದಾಮಿಗೆ ಗುಡ್ ಬೈ ಹೇಳಿ ಹೊಸ ಕ್ಷೇತ್ರ ಘೋಷಣೆ ಮಾಡಿದ ಸಿದ್ದು ಯುವ ಭಾರತ ಸುದ್ದಿ ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಹೊಸ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಕೋಲಾರದಿಂದಲೇ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಇಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಇದುವರೆಗಿನ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ಕೋಲಾರದಲ್ಲಿಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ನಿಮ್ಮ ಪ್ರೀತಿಯ ಅಭಿಮಾನ …

Read More »

ಸಾಧಕರಿಗೆ ಸಾಧನೆ ಅಸಾಧ್ಯವಲ್ಲ-ಎಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟಿçÃಯ ಈಜು ಪಟು ರಾಘವೇಂದ್ರ ಅನ್ವೇಕರ.!

ಸಾಧಕರಿಗೆ ಸಾಧನೆ ಅಸಾಧ್ಯವಲ್ಲ-ಎಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟಿçÃಯ ಈಜು ಪಟು ರಾಘವೇಂದ್ರ ಅನ್ವೇಕರ.! ಗೋಕಾಕ: ಸಾಧಕರಿಗೆ ಸಾಧನೆ ಅಸಾಧ್ಯವಲ್ಲ, ಆತ್ಮ ವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಶ್ಚಿತವೆಚಿದು ಬೆಳಗಾವಿಯ ಎಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟಿçÃಯ ಈಜು ಪಟು ರಾಘವೇಂದ್ರ ಅನ್ವೇಕರ ಹೇಳಿದರು. ಅವರು, ಸೋಮವಾರದಂದು ನಗರದ ಮಯೂರ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತ ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸದೃಢ ಆರೋಗ್ಯವಂತರಾಗಿ ಸಾಧನೆಗೆ ಸಹಕಾರಿಯಾಗುತ್ತದೆ. ಈಜು ಒಳ್ಳೆಯ ವ್ಯಾಯಾಮವಾಗಿದ್ದು ಇದರಿಂದ ಆರೋಗ್ಯವೃದ್ದಿಯಾಗುತ್ತದೆ. …

Read More »