Breaking News

ಕರುನಾಡಿಗೆ ಮೋದಿ, ಯೋಗಿ, ಅಮಿತ್ ಶಾ !

Spread the love

ಕರುನಾಡಿಗೆ ಮೋದಿ, ಯೋಗಿ, ಅಮಿತ್ ಶಾ !

ಯುವ ಭಾರತ ಸುದ್ದಿ ದೆಹಲಿ :
ವಿಧಾನಸಭಾ ಚುನಾವಣೆಗೆ ರಣತಂತ್ರ ನಡೆಯುತ್ತಿರುವ ಬಿಜೆಪಿ ಇದೀಗ ಕರ್ನಾಟಕ ಪ್ರವಾಸಕ್ಕೆ ತನ್ನ ಘಟಾನುಘಟಿ ನಾಯಕರನ್ನು ಕರೆಸಿಕೊಳ್ಳುತ್ತಿದೆ. ಮೇಲಿಂದ ಮೇಲೆ ಈ ಪ್ರಭಾವಿ ನಾಯಕರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಮೂಲಕ ಬಿರುಸಿನ ಪ್ರಚಾರಕ್ಕೆ ಮುಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜನವರಿ 12 ಕ್ಕೆ ಹುಬ್ಬಳ್ಳಿ ಹಾಗೂ 19 ಕ್ಕೆ ಕಲಬುರ್ಗಿಗೆ ಭೇಟಿ ನೀಡಲಿದ್ದಾರೆ. ಈ ತಿಂಗಳ ಮೂರನೇ ವಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದು , ರಾಜ್ಯ ನಾಯಕರ ಜೊತೆ ವಿಶೇಷ ಸಭೆ ನಡೆಸುವ ಬಗ್ಗೆ ವರದಿಯಾಗಿದೆ. ಕೊನೆಯ ವಾರ ಜ. 29 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಬೆಂಕಿ ಚೆಂಡು ಎಂದೇ ಖ್ಯಾತರಾಗಿರುವ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸಿ ಹಲವು ಉದ್ಘಾಟನಾ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.

ಒಟ್ಟಾರೆ ಈ ಮೂವರು ನಾಯಕರಲ್ಲದೆ ಬಿಜೆಪಿಯ ಪ್ರಭಾವಿ ಕೇಂದ್ರ ನಾಯಕರು ಕರ್ನಾಟಕದ ಪ್ರವಾಸ ಕಾಲಕಾಲಕ್ಕೆ ಕೈಗೊಳ್ಳಲಿದ್ದಾರೆ.


Spread the love

About Yuva Bharatha

Check Also

ಬಿಜೆಪಿ ಸೇರ್ತಾರಾ ಸಂಸದೆ

Spread the loveಬಿಜೆಪಿ ಸೇರ್ತಾರಾ ಸಂಸದೆ ಯುವ ಭಾರತ ಸುದ್ದಿ ಬೆಂಗಳೂರು : ಮಂಡ್ಯ ಸಂಸದೆ ಸುಮಲತಾ ಹಾಗೂ ಅವರ …

Leave a Reply

Your email address will not be published. Required fields are marked *

2 × 4 =