Breaking News

Yuva Bharatha

ಗೋಕಾಕ ಗ್ರಾಮದೇವತೆ ಜಾತ್ರೆ ಎಪ್ರೀಲ್ 2ರಂದು ದಿನಾಂಕ ಘೋಷಣೆ-ಶಾಸಕ ರಮೇಶ ಜಾರಕಿಹೊಳಿ.!

ಗೋಕಾಕ ಗ್ರಾಮದೇವತೆ ಜಾತ್ರೆ ಎಪ್ರೀಲ್ 2ರಂದು ದಿನಾಂಕ ಘೋಷಣೆ-ಶಾಸಕ ರಮೇಶ ಜಾರಕಿಹೊಳಿ.! ಯುವ ಭಾರತ ಸುದ್ದಿ  ಗೋಕಾಕ: ನಗರದಲ್ಲಿ ಪ್ರವಾಹ ಹಾಗೂ ಕೋವಿಡ್‌ನಿಂದಾಗಿ ಸಾಕಷ್ಟು ಸಾವು ನೋವುಗಳಾಗಿವೆ. ಇಲ್ಲಿಯ ಜನರು ಇನ್ನು ಆರ್ಥಿಕವಾಗಿ ಸದೃಢರಾಗಿಲ್ಲ ಹೀಗಗಾಗಿ ಗ್ರಾಮದೇವತೆ ಜಾತ್ರಾಮಹೋತ್ಸವವನ್ನು ಕಮೀಟಿ ಸದಸ್ಯರಷ್ಟೆಯಲ್ಲದೇ ನಗರದ ಎಲ್ಲ ಹಿರಿಯರ ಅಭಿಪ್ರಾಯ ಪಡೆದು ಯುಗಾಧಿ ದಿನದಂದು ದಿನಾಂಕ ನಿಗಧಿ ಮಾಡುವದಾಗಿ ಶಾಸಕ ಹಾಗೂ ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ …

Read More »

ಗೋಕಾಕ್ ನಗರದಲ್ಲಿ ಪೊಲೀಸರ ಜೊತೆ ಗೋಕಾಕ್ ಪತ್ರಕರ್ತರು ಹೋಳಿ ಹಬ್ಬ ಆಚರಿಸಿದರು!!

  ಗೋಕಾಕ್ ನಗರದಲ್ಲಿ ಪೊಲೀಸರ ಜೊತೆ ಗೋಕಾಕ್ ಪತ್ರಕರ್ತರು ಹೋಳಿ ಹಬ್ಬ ಆಚರಿಸಿದರು. ಪತ್ರಕರ್ತರ ಸಂಘದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪರಸ್ಪರ ಬಣ್ಣ ಎರಚುವ ಮೂಲಕ ಆಚರಿಸಿದರು!! ಯುವ ಭಾರತ ಸುದ್ದಿ  ಗೋಕಾಕ: ನಗರದಲ್ಲಿ ರವಿವಾರದಂದು ಹೊಳಿ ಹಬ್ಬವನ್ನು ಇಲ್ಲಿಯ ತಾಲೂಕ‌ ಪತ್ರಕರ್ತರ ಸಂಘದ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪರಸ್ಪರ ಬಣ್ಣ ಎರಚುವ ಮೂಲಕ …

Read More »

ಬರುವ ಎಪ್ರಿಲ್ ತಿಂಗಳಲ್ಲಿ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ- ಶಾಸಕ ಬಾಲಚಂದ್ರ ಜಾರಕಿಹೊಳಿ!!

ಬರುವ ಎಪ್ರಿಲ್ ತಿಂಗಳಲ್ಲಿ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ- ಶಾಸಕ ಬಾಲಚಂದ್ರ ಜಾರಕಿಹೊಳಿ!! ೧೬೧.೨೦ ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಕಲ್ಮಡ್ಡಿ ಕಾಮಗಾರಿಯನ್ನು ಪರಿಶೀಲನೆ ಮಾಡಿದ ಬಾಲಚಂದ್ರ ಜಾರಕಿಹೊಳಿ. ಯುವ ಭಾರತ ಸುದ್ದಿ ಗೋಕಾಕ್- ಗೋಸಬಾಳ- ಕೌಜಲಗಿ ಭಾಗದ ಸುತ್ತಮುತ್ತಲಿನ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ಎಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ …

Read More »

100 ಕೋಟಿ ರೂ. ವೆಚ್ಚದಲ್ಲಿ ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ – ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ!!

100 ಕೋಟಿ ರೂ. ವೆಚ್ಚದಲ್ಲಿ ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ – ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ!! ಶುಕ್ರವಾರದಂದು ಗೋಸಬಾಳದಲ್ಲಿ 15 ಕೋಟಿ ರೂ. ವೆಚ್ಚದ 110/11 ಕೆವ್ಹಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.   ಯುವ ಭಾರತ ಸುದ್ದಿ  ಗೋಕಾಕ : ರೈತರಿಗೆ ದಿನನಿತ್ಯ ಕನಿಷ್ಠ 10 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ …

Read More »

ಪುನೀತ್ ರಾಜಕುಮಾರ ಜನ್ಮದಿನ ನಿಮಿತ್ಯವಾಗಿ ಶ್ರೀರಾಮಸೇನೆ ದಿಂದ ರಕ್ತದಾನ ಶಿಬಿರ!!

ಪುನೀತ್ ರಾಜಕುಮಾರ ಜನ್ಮದಿನ ನಿಮಿತ್ಯವಾಗಿ ಶ್ರೀರಾಮಸೇನೆ ದಿಂದ ರಕ್ತದಾನ ಶಿಬಿರ!! ಯುವ ಭಾರತ ಸುದ್ದಿ ಗೋಕಾಕ : ಕರ್ನಾಟಕದ ಯುವ ರತ್ನ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಹಾಗೂ ಅಪ್ಪು ಅಭಿನಯದ ಚಿತ್ರ ‘ಜೇಮ್ಸ್’ ತೆರೆ ಕಂಡಿದ್ದು, ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಗೋಕಾಕ ನಗರದಲ್ಲಿ ಶ್ರೀ ರಾಮ ಸೇನೆ ಗೋಕಾಕ್ ತಾಲೂಕು ಕಾರ್ಯಕರ್ತರು ಹಾಗೂ ಅಪ್ಪು ಅಭಿಮಾನಿಗಳು ಇಂದು ನೇತ್ರದಾನ ನೋಂದಣಿ ಶಿಬಿರ …

Read More »

ದಿ.ಪುನೀತ್ ರಾಜಕುಮಾರ್ ಅನರ್ಘ್ಯ ರತ್ನ – ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.!

ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ನಿಮಿತ್ಯ ಕೆಎಂಎಫ್ ಕಛೇರಿಯಲ್ಲಿ ರಕ್ತದಾನ ಶಿಬಿರ!!  ಯುವ ಭಾರತ ಸುದ್ದಿ  ಬೆಂಗಳೂರು : ಕೆಎಂಎಫ್ ನಂದಿನಿ ರಾಯಭಾರಿಯಾಗಿದ್ದ ಜನಪ್ರೀಯ ನಟ ದಿ. ಪುನೀತ್ ರಾಜಕುಮಾರ್ ಅವರು ಅಗಲಿ ಹೋಗಿದ್ದರೂ, ಇನ್ನೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಯ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ದಿ. ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಜರುಗಿದ …

Read More »

ಗ್ರಾಮಗಳಿಗೆ ಗಡಾದ ತೆರಳಿ ರಸ್ತೆ ಕಾಮಗಾರಿಗೆ ಅನುದಾನವನ್ನು ನಾನೇ ತಂದಿದ್ದು ಎಂದು ನಾಟಕ ಮಾಡುತ್ತಿದ್ದಾರೆ-ಉಪಾಧ್ಯಕ್ಷ ಸುಭಾಸ ಢವಳೇಶ್ವರ!!

ಗ್ರಾಮಗಳಿಗೆ ಗಡಾದ ತೆರಳಿ ರಸ್ತೆ ಕಾಮಗಾರಿಗೆ ಅನುದಾನವನ್ನು ನಾನೇ ತಂದಿದ್ದು ಎಂದು ನಾಟಕ ಮಾಡುತ್ತಿದ್ದಾರೆ-ಉಪಾಧ್ಯಕ್ಷ ಸುಭಾಸ ಢವಳೇಶ್ವರ!! ಯುವ ಭಾರತ ಸುದ್ದಿ  ಮೂಡಲಗಿ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರು ಅಭಿವೃದ್ಧಿ ಕಾರ್ಯಗಳಲ್ಲಿ ಉದ್ಧೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದ್ದಾರೆ. ರೈತರು ಮತ್ತು ಜನರ ದಾರಿ ತಪ್ಪಿಸುತ್ತಿರುವ ಇಂತಹ ಅಭಿವೃದ್ಧಿ ವಿರೋಧಿಗಳಿಗೆ ಶಾಸಕರು ಮಾಡಿರುವ ಪ್ರಗತಿಪರ ಕಾಮಗಾರಿಗಳು ಕಣ್ಣಿಗೆ ಕಾಣುವುದಿಲ್ಲವೇ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಮತ್ತು ಜಿಪಂ ಸದಸ್ಯ …

Read More »

ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ-ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಜಿ.!

ಇದೇ ದಿ.22 ರಿಂದ 26ರ ವರೆಗೆ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ-ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಜಿ.!  ಯುವ ಭಾರತ ಸುದ್ದಿ   ಗೋಕಾಕ: ಕುಂದರನಾಡಿನ ತಪೋಕ್ಷೇತ್ರ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವವು ಇದೇ ದಿ.22 ರಿಂದ 26ರ ವರೆಗೆ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಜಿ ಹೇಳಿದರು. ಅವರು, ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ಕಳೆದೆ ಮೂರು ವರ್ಷಗಳಲ್ಲಿ ಮಾರ್ಕಂಡೇಯ ನದಿ …

Read More »

ಮನುಷ್ಯನ ಜೀವನ ಅಮೂಲ್ಯವಾಗಿದೆ-ಸರ್ವೋತ್ತಮ ಜಾರಕಿಹೊಳಿ.!

ಮನುಷ್ಯನ ಜೀವನ ಅಮೂಲ್ಯವಾಗಿದೆ-ಸರ್ವೋತ್ತಮ ಜಾರಕಿಹೊಳಿ.! ಗೋಕಾಕ: ಮನುಷ್ಯನ ಜೀವನ ಅಮೂಲ್ಯವಾಗಿದ್ದು, ಜನನ ಮತ್ತು ಮರಣದ ನಡುವೆ ಒಳ್ಳೆಯ ಪರೋಪಕಾರ ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು, ನಗರದ ಸಬ್ ಜೈಲನಲ್ಲಿ ಕರವೇ ಗಜಸೇನೆ ಜಿಲ್ಲಾ ಘಟಕದಿಂದ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದ ಅಂಗವಾಗಿ ವಿಚಾರನಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಟಸಾರ್ವಭೌಮ ಡಾ.ಪುನೀತ ರಾಜಕುಮಾರ ತಮ್ಮ ದುಡಿಮೆಗೆ ಬಂದ …

Read More »

ಗೋಕಾಕ ನಗರಸಭೆಯ 2021-22ನೇ ಸಾಲಿನ ಪರಿಷ್ಕೃತ ಆಯವ್ಯಯ ಮಂಡಿಸಿದ ಪೌರಾಯುಕ್ತ.!

ಗೋಕಾಕ ನಗರಸಭೆಯ 2021-22ನೇ ಸಾಲಿನ ಪರಿಷ್ಕೃತ ಆಯವ್ಯಯ ಮಂಡಿಸಿದ ಪೌರಾಯುಕ್ತ.! ಗೋಕಾಕ: ನಗರಸಭೆಯ ೨೦೨೧-೨೨ನೇ ಸಾಲಿನ ಪರಿಷ್ಕೃತ ಆಯವ್ಯಯ ಮತ್ತು ೨೦೨೨-೨೩ನೇ ಸಾಲಿನ ರೂ ೫.೩೩ ಲಕ್ಷಗಳ ಉಳಿತಾಯದ ಆಯವ್ಯಯವನ್ನು ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಮಂಡಿಸಿದರು. ಬುಧವಾದಂದು ನಗರಸಭೆಯ ಸಭಾಂಗಣದಲ್ಲಿ ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಜೆಟ್ ಮಂಡಿಸಲಾಯಿತು. ಲೆಕ್ಕ ಅಧಿಕ್ಷಕರಾದ ಎಂ.ಎನ್.ಸಾಗರೇಕರ ಅವರು ಆಯವ್ಯಯವನ್ನು ವಿವರಿಸುತ್ತಾ ಒಟ್ಟು ರೂ ೩೨.೭೧ …

Read More »