ಯುವ ಭಾರತ ಸುದ್ದಿ, ಗೋಕಾಕ್: ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದಕ್ಕೆ ರಾಜ್ಯ ಸರಕಾರವನ್ನು ಶ್ಲಾಘಿಸಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಗುರುವಾರದಂದು ನಗರದಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಸವರಾಜ ಹಿರೇಮಠ, ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಚ್ಯಾಳಿ, ರೈತ ಮೋರ್ಚಾ ಅಧ್ಯಕ್ಷ ಸುರೇಶ್ ಪತ್ತಾರ, ಲಕ್ಷ್ಮೀಕಾಂತ ಎತ್ತಿನಮನಿ, ಹನುಮಂತ ಕಾಳಂಗುಡಿ, ರಮೇಶ ಚಿಕ್ಕನವರ, ಮಂಜು ಪ್ರಭುನಟ್ಟಿ, ಬಾಬು ಮುಳಗುಂದ, ಸತ್ಯಪ್ಪ ಕಲ್ಲೂರ, ಮಂಜುನಾಥ್ ಮಾವರಕರ, ರಾಘವೇಂದ್ರ ಗುಡಗುಡಿ ಸೇರಿದಂತೆ ಅನೇಕರು ಇದ್ದರು.
