Breaking News

ಧರ್ಮ

ಜೈನ ಮುನಿಗಳ ಸಲ್ಲೇಖನ ಸಮಾಧಿ ಮರಣ

ಜೈನ ಮುನಿಗಳ ಸಲ್ಲೇಖನ ಸಮಾಧಿ ಮರಣ ಬೆಳಗಾವಿ ಜು.21: ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗನಲ್ಲಿ ಜೈನ ಮುನಿಗಳಾದ ಆಚಾರ್ಯ ಶ್ರೀ ವರ್ಧಮಾನ ಶ್ರೀಗಳ ಚಾರ್ತುಮಾಸ್ಯ ನಡೆಯುತ್ತಿದ್ದು ಈ ಚಾರ್ತುಮಾಸ್ಯ ಸಂದರ್ಭದಲ್ಲಿ ಓರ್ವ ಜೈನ ಮುನಿ ಮತ್ತು ಓರ್ವ ಆರ್ಯಿಕಾ ಮಾತಾಜಿಗಳು ಸಲ್ಲೇಖನ ವೃತ ತೆಗೆದುಕೊಳ್ಳುವ ಮೂಲಕ ಸಮಾಧಿ ಮರಣ ಹೊಂದಿದರು. ಸೋಮವಾರ ದಿನಾಂಕ 20 ರಂದು ಮಧ್ಯಾಹ್ನ 3-30 ಗಂಟೆಗೆ ಮುನಿಶ್ರೀ ದೇವಕಾಂತ ಸಾಗರಜೀ ಮುನಿಗಳು ಯಮಸಲ್ಲೇಖನ ವೃತ …

Read More »

ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ -ಹೆಬ್ಬಾಳಕರ್ ಚಿಂತನೆ

ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ -ಹೆಬ್ಬಾಳಕರ್ ಚಿಂತನೆ ಸಚಿವರು ಮದ, ಗರ್ವ, ಜಂಬ, ಅಹಂಕಾರಗಳನ್ನು ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಲಿ -ಲಕ್ಷ್ಮಿ ಹೆಬ್ಬಾಳಕರ ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಮಂಗಳವಾರ ಬೆಳಗ್ಗೆ …

Read More »

ಹುಪರಿಯಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ ಪತ್ತೆ 

ಹುಪರಿಯಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ ಪತ್ತೆ  ಬೆಳಗಾವಿ. ಜು.: 6: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹುಪರಿ ಪಟ್ಟಣದಲ್ಲಿಂದು 12 ಶತಮಾನದಲ್ಲಿ ನಿರ್ಮಿತವಾದ ಎನ್ನಲಾದ ಭಗವಾನ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಎರಡು ಪ್ರತಿಮೆಗಳು ದೊರಕಿವೆ. ‌ ಬೆಳ್ಳಿ ನಗರ ಎಂದು ಗುರುತಿಸಿಕೊಂಡಿರುವ ಹುಪರಿ ಪಟ್ಟಣದಲ್ಲಿನ ಶ್ರೀ ಚಂದ್ರಪ್ರಭ ಜೈನ ಮಂದಿರದ ಜೀರ್ಣೋದ್ಧಾರದ ಕೆಲಸ ನಡೆಯುತ್ತಿದೆ. ಮಂದಿರದ ಗರ್ಭ ಗುಡಿಯ ಎದುರಿಗಿನ ಭಾಗದಲ್ಲಿ ಭೂಮಿ ಅಗೆಯುವ ಕೆಲಸ ನಡೆದಿತ್ತು. ಸುಮಾರು …

Read More »

ಸೌಲಭ್ಯದಿಂದ ವಂಚಿತ ಜೈನ ಸಮಾಜ : ಆಕ್ರೋಶಭರಿತ ಪ್ರತಿಭಟನೆ

ಸೌಲಭ್ಯದಿಂದ ವಂಚಿತ ಜೈನ ಸಮಾಜ : ಆಕ್ರೋಶಭರಿತ ಪ್ರತಿಭಟನೆ ಗುಲ್ಬರ್ಗಾ : ಜು.1: ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಗುಲ್ಬರ್ಗಾ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಿಗೆ ಮಿಸಲಿಟ್ಟ ಅನುದಾನದಲ್ಲಿ ಜೈನ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಇಲ್ಲಿನ ಅಧಿಕಾರಿಗಳ ನಡವಳಿಕೆ ಬಗ್ಗೆ ಜೈನ ಸಮಾಜದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಆಕ್ರೋಶದ ಫಲವಾಗಿಯೇ ಮಂಗಳವಾರ ಸಮಾಜ ಬಾಂಧವರು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರದಿಂದ ಅಲ್ಪ …

Read More »

ಕೊರೊನಾ ಸೋಂಕಿನಿಂದ ಬೆಳಗಾವಿಯಲ್ಲಿ ಓರ್ವ ಮೃತ

ಕೊರೊನಾ ಸೋಂಕಿನಿಂದ ಬೆಳಗಾವಿಯಲ್ಲಿ ಓರ್ವ ಮೃತ ಬೆಳಗಾವಿ. ಜು.1: ಕೊರೊನಾ ಸೊಂಕು ರಾಜ್ಯದಲ್ಲಿ ತೀವ್ರವಾಗಿ ಹಬ್ಬುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಇಂದು 74 ವರ್ಷದ ವ್ಯಕ್ತಿ ಯೋರ್ವ ಮೃತಪಟ್ಟಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಮೂವರು ಮೃತ ಪಟ್ಟಂತಾಗಿದೆ. ಈ ಮೊದಲು ಹೀರೆಬಾಗೆವಾಡಿ ಗ್ರಾಮದ 84 ವರ್ಷದ ವೃದ್ದೆ ,ಅಥಣಿ ತಾಲೂಕಿನ 32 ವರ್ಷದ ಯುವಕ ಮೃತಪಟ್ಟವರಾಗಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು 7 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು …

Read More »