ಜೈನ ಮುನಿಗಳ ಸಲ್ಲೇಖನ ಸಮಾಧಿ ಮರಣ
ಬೆಳಗಾವಿ ಜು.21: ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗನಲ್ಲಿ ಜೈನ ಮುನಿಗಳಾದ ಆಚಾರ್ಯ ಶ್ರೀ ವರ್ಧಮಾನ ಶ್ರೀಗಳ ಚಾರ್ತುಮಾಸ್ಯ ನಡೆಯುತ್ತಿದ್ದು ಈ ಚಾರ್ತುಮಾಸ್ಯ ಸಂದರ್ಭದಲ್ಲಿ ಓರ್ವ ಜೈನ ಮುನಿ ಮತ್ತು ಓರ್ವ ಆರ್ಯಿಕಾ ಮಾತಾಜಿಗಳು ಸಲ್ಲೇಖನ ವೃತ ತೆಗೆದುಕೊಳ್ಳುವ ಮೂಲಕ ಸಮಾಧಿ ಮರಣ ಹೊಂದಿದರು.
ಸೋಮವಾರ ದಿನಾಂಕ 20 ರಂದು ಮಧ್ಯಾಹ್ನ 3-30 ಗಂಟೆಗೆ ಮುನಿಶ್ರೀ ದೇವಕಾಂತ ಸಾಗರಜೀ ಮುನಿಗಳು ಯಮಸಲ್ಲೇಖನ ವೃತ ಧಾರಣೆ ಮಾಡುವ ಮೂಲಕ ಅವರು ಸಮಾಧಿ ಮರಣ ಹೊಂದಿದರು,. ಕಳೆದ 13 ದಿನಗಳಿಂದ ಅವರು ಸಲ್ಲೇಖನ ವೃತ ಧಾರಣೆ ಮಾಡಿದ್ದರು.
ಅದರಂತೆ ಸೋಮವಾರ ಬೆಳಿಗ್ಗೆ 10 -50 ಗಂಟೆಗೆ ಆರ್ಯಿಕಾ ಶ್ರೇಯಮತಿ ಮಾತಾಜಿ ಅವರು ಸಮಾಧಿ ಮರಣ ಹೊಂದಿದರು. ಈ ರೀತಿ ಓಂದೇ ದಿನ ಇಬ್ಬರು ತ್ಯಾಗಿಗಳು ಸಮಾಧಿ ಮರಣ ಹೊಂದಿರುವುದು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮವಾಗಿದೆ. ಅಂತಿಮ ಸಂಸ್ಕಾರದಲ್ಲಿ ಜೈನ ಸಮುದಾಯ ಶ್ರಾವಕರು ಉಪಸ್ಥಿತರಿದ್ದರು.