Breaking News

ಜೈನ ಮುನಿಗಳ ಸಲ್ಲೇಖನ ಸಮಾಧಿ ಮರಣ

Spread the love

ಜೈನ ಮುನಿಗಳ ಸಲ್ಲೇಖನ ಸಮಾಧಿ ಮರಣ


ಬೆಳಗಾವಿ ಜು.21: ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗನಲ್ಲಿ ಜೈನ ಮುನಿಗಳಾದ ಆಚಾರ್ಯ ಶ್ರೀ ವರ್ಧಮಾನ ಶ್ರೀಗಳ ಚಾರ್ತುಮಾಸ್ಯ ನಡೆಯುತ್ತಿದ್ದು ಈ ಚಾರ್ತುಮಾಸ್ಯ ಸಂದರ್ಭದಲ್ಲಿ ಓರ್ವ ಜೈನ ಮುನಿ ಮತ್ತು ಓರ್ವ ಆರ್ಯಿಕಾ ಮಾತಾಜಿಗಳು ಸಲ್ಲೇಖನ ವೃತ ತೆಗೆದುಕೊಳ್ಳುವ ಮೂಲಕ ಸಮಾಧಿ ಮರಣ ಹೊಂದಿದರು.
ಸೋಮವಾರ ದಿನಾಂಕ 20 ರಂದು ಮಧ್ಯಾಹ್ನ 3-30 ಗಂಟೆಗೆ ಮುನಿಶ್ರೀ ದೇವಕಾಂತ ಸಾಗರಜೀ ಮುನಿಗಳು ಯಮಸಲ್ಲೇಖನ ವೃತ ಧಾರಣೆ ಮಾಡುವ ಮೂಲಕ ಅವರು ಸಮಾಧಿ ಮರಣ ಹೊಂದಿದರು,. ಕಳೆದ 13 ದಿನಗಳಿಂದ ಅವರು ಸಲ್ಲೇಖನ ವೃತ ಧಾರಣೆ ಮಾಡಿದ್ದರು.
ಅದರಂತೆ ಸೋಮವಾರ ಬೆಳಿಗ್ಗೆ 10 -50 ಗಂಟೆಗೆ ಆರ್ಯಿಕಾ ಶ್ರೇಯಮತಿ ಮಾತಾಜಿ ಅವರು ಸಮಾಧಿ ಮರಣ ಹೊಂದಿದರು. ಈ ರೀತಿ ಓಂದೇ ದಿನ ಇಬ್ಬರು ತ್ಯಾಗಿಗಳು ಸಮಾಧಿ ಮರಣ ಹೊಂದಿರುವುದು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮವಾಗಿದೆ. ಅಂತಿಮ ಸಂಸ್ಕಾರದಲ್ಲಿ ಜೈನ ಸಮುದಾಯ ಶ್ರಾವಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

13 + 8 =