Breaking News

Uncategorized

ಗೋಕಾಕನಲ್ಲಿ ವಕೀಲರಿಂದ ಪ್ರತಿಭಟನೆ!

ಗೋಕಾಕನಲ್ಲಿ ವಕೀಲರಿಂದ ಪ್ರತಿಭಟನೆ! ಯುವ ಭಾರತ ಸುದ್ದಿ ಗೋಕಾಕ : ವಕೀಲರ ರಕ್ಷಣಾ ಕಾಯ್ದೆಯ ಅವಶ್ಯಕತೆ ಇಲ್ಲಾ ಎಂದು ಕಾನೂನು ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ಈ ಕಾಯ್ದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಶುಕ್ರವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಮಾಜದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ವಕೀಲರ ಮೇಲೆ ಸಾಕಷ್ಟು ಹಲ್ಲೆಯ ಪ್ರಕರಣಗಳು ನಡೆಯುತ್ತಿವೆ. …

Read More »

ಗೋಕಾಕ್ ದಿಂದ ಗುಡ್ಡಾಪುರಕ್ಕೆ ಪಾದಯಾತ್ರೆ!

ಗೋಕಾಕದಿಂದ ಗುಡ್ಡಾಪುರಕ್ಕೆ ಪಾದಯಾತ್ರೆ! ಗೋಕಾಕ : ದಿನಾಂಕ್ 21 ರಿಂದ 25 ರವರೆಗೆ   ದಿನಾಂಕ 21 ರಂದು ಬೆಳಿಗ್ಗೆ 5:00 ಗಂಟೆಗೆ ಗೋಕಾಕ್ ನಗರದ ಪೇಟೆಯಲ್ಲಿರುವ ಶ್ರೀ ದಾನಮ್ಮ ದೇವಿಯ ಗುಡಿಯಿಂದ ಮಂಗಳಾರತಿ ಮೂಲಕ ಪಾದಯಾತ್ರೆ ಹೊರಡುವುದು. ದಿ 22 ಹಿಡಕಲ್, ದಿ 23ರಂದು ಅಥಣಿ, ದಿ 24ರಂದು ಕೊಟ್ಟಲಗಿಯಿಂದ ಗುಡ್ಡಾಪೂರಕ್ಕೆ ಆಗಮನ ಸಾಯಂಕಾಲ 6ಗಂಟೆಗೆ ಶ್ರೀ ದಾನಮ್ಮಾದೇವಿಗೆ ಕಾರ್ತಿಕೋತ್ಸವ ಹಚ್ಚುವುದು. ದಿ25ರಂದು ಬೆಳಗ್ಗೆ 6:00ಗೆ ರುದ್ರಾಭಿಷೇಕ ಮಹಾ ಪೂಜೆ …

Read More »

15ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ

15ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಗೋಕಾಕ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ನಾಗದೇವರ ಯುವಕ ಮಂಡಳ, ಸೋಮವಾರ ಪೇಟ ಗೋಕಾಕ. ಇವರ ಆಶ್ರಯದಲ್ಲಿ ರವಿವಾರ ದಿ18 ರಂದು ಮುಂಜಾನೆ 7ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಜರುಗುವುದು. ಮುಂಜಾನೆ 9ಗಂಟೆಗೆ ಪ್ರಸಾದ ಇರುತ್ತದೆ. ಆದ ಕಾರಣ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು ಮನ ಧನ ಸಲ್ಲಿಸಿ, ಶ್ರೀ ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಿ ಬೇಕಾಗಿ ವಿನಂತಿ.

Read More »

ಜಾತ್ಯತೀತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೋಳ್ಳುವದರ ಜೊತೆಗೆ ಸೇವೆಯಲ್ಲಿ ಪಾರದರ್ಶಕತೆಯನ್ನು ಹೊಂದಬೇಕು.- ಸನತ ಜಾರಕಿಹೊಳಿ.!

ಜಾತ್ಯತೀತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೋಳ್ಳುವದರ ಜೊತೆಗೆ ಸೇವೆಯಲ್ಲಿ ಪಾರದರ್ಶಕತೆಯನ್ನು ಹೊಂದಬೇಕು.- ಸನತ ಜಾರಕಿಹೊಳಿ.! ಗೋಕಾಕ: ನಿಸ್ವಾರ್ಥ ಸಮಾಜಸೇವೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊAಡು ಸಮಾಜ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗವುದು ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು. ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಎಲ್.ಡಿ.ಎಸ್.ಪೌಂಡೇಶನ್ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾತ್ಯತೀತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೋಳ್ಳುವದರ ಜೊತೆಗೆ ಸೇವೆಯಲ್ಲಿ …

Read More »

8.ಮೇಕೆಗಳ ಕಳ್ಳತನ, ಕಳ್ಳರ ಕೈಚಳಕ ಸಿಸಿ ಟಿವಿಲಿ ಸೆರೆ.!

8.ಮೇಕೆಗಳ ಕಳ್ಳತನ, ಕಳ್ಳರ ಕೈಚಳಕ ಸಿಸಿ ಟಿವಿಲಿ ಸೆರೆ.! ಗೋಕಾಕ: ತಾಲೂಕಿನ ಎರಡು ಹಳ್ಳಿಗಳಲ್ಲಿ ಒಂದೇ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಸುಮಾರು 8 ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದ್ದು ಕಳ್ಳರ ಕೈಚಳಕ ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿವೆ. ತಾಲೂಕಿನ ಹುಲಿಕಟ್ಟಿ, ಹನಮಾಪೂರ ಗ್ರಾಮಗಳಲ್ಲಿ ಈ ಘಟನೆ ನಡೆಸಿದ್ದು, ಹುಲಿಕಟ್ಟಿ ಗ್ರಾಮದ ರಾಮಸಿದ್ಧ ಫಕೀರಪ್ಪ ನಾಗನೂರ ಎಂಬವರಿಗೆ ಸೇರಿದ 2 ಮೇಕೆಗಳು, ಮತ್ತೋರ್ವರ  ಮೇಕೆ ಸೇರಿ …

Read More »

ಉಪ್ಪಾರ ಔದ್ಯೋಗಿಕ ಸಹಕಾರ ಸಂಘ ನಿ, ಗೋಕಾಕ ಅಧ್ಯಕ್ಷರಾಗಿ ಮಾಯಪ್ಪ ತಹಶೀಲದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ.!

ಉಪ್ಪಾರ ಔದ್ಯೋಗಿಕ ಸಹಕಾರ ಸಂಘ ನಿ, ಗೋಕಾಕ ಅಧ್ಯಕ್ಷರಾಗಿ ಮಾಯಪ್ಪ ತಹಶೀಲದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ.! ಗೋಕಾಕ: ದಿ.ಗೋಕಾಕ ಉಪ್ಪಾರ ಔದ್ಯೋಗಿಕ ಸಹಕಾರ ಸಂಘ ನಿ, ಗೋಕಾಕ ಇದರ ಉಳಿದ ಅವಧಿಗೆ ಸಂಘದ ಅಧ್ಯಕ್ಷರಾಗಿ ಮಾಯಪ್ಪ ಅಡಿವೆಪ್ಪ ರಹಶೀಲದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಚುನಾವಣೆಯಲ್ಲಿ ರಿಟರ್ನಿಂಗ ಅಧಿಕಾರಿಯಾಗಿ ಬಿ ಕೆ ಗೋಖಲೆ ಕಾರ್ಯನಿರ್ವಹಿಸಿದರು.

Read More »

358 ಸ್ಕೌಟ್ಸ್ ವಿದ್ಯಾರ್ಥಿಗಳಿಗೆ ಜಾಂಬೂರಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಶಾಸಕ ರಮೇಶ ಜಾರಕಿಹೊಳಿ ಅವರಿಂದ ಬಸ್ಸು ಸೌಕರ್ಯ.!

358 ಸ್ಕೌಟ್ಸ್ ವಿದ್ಯಾರ್ಥಿಗಳಿಗೆ ಜಾಂಬೂರಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಶಾಸಕ ರಮೇಶ ಜಾರಕಿಹೊಳಿ ಅವರಿಂದ ಬಸ್ಸು ಸೌಕರ್ಯ.! ಗೋಕಾಕ: ಕ್ಷೇತ್ರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಬಿಇಒ ಜಿ.ಬಿ.ಬಳಗಾರ ಹೇಳಿದರು. ಗುರುವಾರದಂದು ನಗರದ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇವರುಗಳು ಹಮ್ಮಿಕೊಂಡ ಮೂಡಬಿದಿರಿಯಲ್ಲಿ ನಡೆಯುತ್ತಿರುವ …

Read More »

ಸತತ ಪ್ರಯತ್ನದಿಂದ ಏನೇಲ್ಲಾ ಸಾಧನೆ ಸಾಧ್ಯ- ಬಿ.ಎ.ಕೋಟಿ!

ಸತತ ಪ್ರಯತ್ನದಿಂದ ಏನೇಲ್ಲಾ ಸಾಧನೆ ಸಾಧ್ಯ-ಬಿ.ಎ.ಕೋಟಿ! ಯುವ ಭಾರತ ಸುದ್ದಿ ಬೆಟಗೇರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಕಡಿಮೆ. ಸತತ ಪ್ರಯತ್ನದಿಂದ ಏನೇಲ್ಲಾ ಸಾಧನೆ ಸಾಧ್ಯ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೆಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯ ಶಿಕ್ಷಕ ಬಿ.ಎ.ಕೋಟಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೆಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಡಿ.೧೪ರಂದು ನಡೆದ ಕಳೆದ …

Read More »

ಸಮಾಜಶಾಸ್ತ್ರ ಉಪನ್ಯಾಸಕರಿಗಾಗಿ ಡಿ,16 ಹಾಗೂ 17ರಂದು ಎರಡು ದಿನಗಳ ತರಬೇತಿ ಕಾರ್ಯಾಗಾರ!

ಸಮಾಜಶಾಸ್ತ್ರ ಉಪನ್ಯಾಸಕರಿಗಾಗಿ ಡಿ,16 ಹಾಗೂ 17ರಂದು ಎರಡು ದಿನಗಳ ತರಬೇತಿ ಕಾರ್ಯಾಗಾರ! ಯುವ ಭಾರತ ಸುದ್ದಿ ಕೊಲ್ಹಾರ: ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ,ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ವಿಜಯಪುರ ಹಾಗೂ ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಕೊಲ್ಹಾರ ಇವರ ಸಹಯೋಗದಲ್ಲಿ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಸಮಾಜಶಾಸ್ತ್ರ ಉಪನ್ಯಾಸಕರಿಗಾಗಿ ಡಿ,16 ಹಾಗೂ 17ರಂದು ಎರಡು ದಿನಗಳ ಕಾಲ ತರಬೇತಿ ಕಾರ್ಯಾಗಾರವನ್ನು …

Read More »

ವಿದ್ಯಾರ್ಥಿಗಳು ಬೀದಿಗಿಳಿದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೀತಿಯನ್ನು ಖಂಡಿಸಿ ಪ್ರತಿಭಟನೆ!!

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೀತಿಯನ್ನು ಖಂಡಿಸಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಕಿತ್ತೂರು ಮತಕ್ಷೇತ್ರದ ಶಾಸಕರಾದ ಶ್ರೀ ಮಹಾಂತೇಶ ದೊಡಗೌಡರ ಇವರಿಗೆ ಮನವಿಯನ್ನು ಅರ್ಪಿಸಿದರು.   ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೀತಿಯನ್ನು ಖಂಡಿಸಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಕಿನಾವಿವ ಸಂಘದ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಜಿ.ಕೆ.ಭೂಮನಗೌಡರ ಇವರಿಗೆ ಮನವಿಯನ್ನು ಅರ್ಪಿಸಿದರು. ವಿದ್ಯಾರ್ಥಿಗಳು ಬೀದಿಗಿಳಿದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೀತಿಯನ್ನು ಖಂಡಿಸಿ ಪ್ರತಿಭಟನೆ!!  ಯುವ ಭಾರತ‌ ಸುದ್ದಿ   ಚನ್ನಮ್ಮನ ಕಿತ್ತೂರು: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜೀವನವನ್ನು …

Read More »