Breaking News

ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸತೀಶ ಜಾರಕಿಹೊಳಿಗೆ ಕರವೇ ತಾಲೂಕು ಪದಾಧಿಕಾರಿಗಳ ಮನವಿ

Spread the love

ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ
ಸತೀಶ ಜಾರಕಿಹೊಳಿಗೆ ಕರವೇ ತಾಲೂಕು ಪದಾಧಿಕಾರಿಗಳ ಮನವಿ

ಮುರಗೋಡ:
ಮುರಗೋಡದಲ್ಲಿರುವ ಚಿಕ್ಕ ಪ್ರವಾಸಿ ಮಂದಿರವನ್ನು ಹೆಚ್ಚಿನ ಕೊಠಡಿಗಳನ್ನೊಳಗೊಂಡ ಸುಸಜ್ಜಿತ ನೂತನ ಪ್ರವಾಸಿ ಮಂದಿರವನ್ನಾಗಿ ನಿರ್ಮಾಣ ಮಾಡಬೇಕು, ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಹೆಚ್ಚಿನ ಪೊಲೀಸ್ ಸಿಬ್ಬಂದಿ, ಕೊಠಡಿ ನಿರ್ಮಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸವದತ್ತಿ ತಾಲೂಕು ಘಟಕದ ಪದಾಧಿಕಾರಿಗಳ ವತಿಯಿಂದನೂತನ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರಿಗೆ ಬೆಂಗಳೂರಿನ ಡಾಲರ್ಸ್ ಕಾಲನಿಯ ಅವರ ನಿವಾಸದಲ್ಲಿ ಶುಕ್ರವಾರ
ಮನವಿ ಸಲ್ಲಿಸಲಾಯಿತು. ನೇತೃತ್ವ ವಹಿಸಿದ್ದ ಸವದತ್ತಿ ತಾಲೂಕು ಕರವೇ ಅಧ್ಯಕ್ಷ ಉದಯಕುಮಾರ ಚಿಕ್ಕಣ್ಣವರ, ಸಾದಿಕ್ ಹಳಿಯಾಳ, ಸುಬಾನಿ
ಮುಗಟಖಾನ, ಶಶಿಧರ ಕುರಬೆಟ್, ಸಾಜನ್ ಲಮಾಣಿ, ಮಂಜುನಾಥ ಮೇಟಿ, ರೋಹಿತ ಚಿನ್ನಣ್ಣವರ ಮತ್ತಿತರರು ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

six − 3 =