Breaking News

ಯಡಿಯೂರಪ್ಪ, ವಿಜಯೇಂದ್ರ, ಜೋಶಿ ಅವರನ್ನು ಭೇಟಿಯಾದ ಡಾ. ರಾಜು ಕಿರಣಗಿ !

Spread the love

ಯಡಿಯೂರಪ್ಪ, ವಿಜಯೇಂದ್ರ, ಜೋಶಿ ಅವರನ್ನು ಭೇಟಿಯಾದ ಡಾ. ರಾಜು ಕಿರಣಗಿ !

ಬೆಂಗಳೂರು : ರಾಯಬಾಗ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಯಿಂದ ಕಣಕ್ಕಿಳಿಯಲು ಬಯಸಿರುವ ಯುವ ನಾಯಕ ಡಾ. ರಾಜು ಕಿರಣಗಿ ಅವರು ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿಯ ಘಟಾನುಘಟಿ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಸುಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿರುವ ಡಾ. ರಾಜು ಕಿರಣಗಿ ಅವರು ಉಭಯಕುಶಲೋಪರಿ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿಯಿಂದ ಅವಕಾಶ ನೀಡಿದರೆ ಜನಸೇವೆ ಮಾಡುವ ಬಯಕೆ ಹೊಂದಿರುವುದಾಗಿ ತಿಳಿಸಿದರು. ರಾಯಬಾಗ ಮತಕ್ಷೇತ್ರದ ಜನ ಯುವಕನಾಗಿರುವ ನನಗೆ ಸ್ಪರ್ಧಿಸಲು ಒತ್ತಾಯಿಸಿದ್ದಾರೆ. ಪಕ್ಷ ಇಲ್ಲಿ ಬದಲಾವಣೆ ಬಯಸಿ ನನಗೆ ಟಿಕೆಟ್ ನೀಡಿದರೆ ಬಹುದೊಡ್ಡ ಅಂತರದಲ್ಲಿ ಗೆದ್ದು ಬಿಜೆಪಿಗೆ ಬಲ ತಂದು ಕೊಡುವುದಾಗಿ ಡಾ. ರಾಜು ಕಿರಣಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರು ತಾವು ಇದುವರೆಗೆ ರಾಯಬಾಗ ವಿಧಾನಸಭಾ ಮತಕ್ಷೇತ್ರದಲ್ಲಿ ಮಾಡಿರುವ ಸಮಾಜ ಸೇವಾ ಕೆಲಸಗಳನ್ನು ಉಭಯ ನಾಯಕರ ಗಮನಕ್ಕೆ ತಂದರು. ರಾಜು ಕಿರಣಗಿ ಅವರ ಅನೇಕ ಬೆಂಬಲಿಗರು ಉಪಸ್ಥಿತರಿದ್ದರು.

ಪ್ರಹ್ಲಾದ ಜೋಶಿ ಭೇಟಿ : ಡಾ. ರಾಜು ಕಿರಣಗಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸಹ ಭೇಟಿಯಾಗಿ ಕೆಲಹೊತ್ತು ಚರ್ಚಿಸಿದರು.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

5 − two =