Breaking News

ಸತೀಶ ಜಾರಕಿಹೊಳಿ ಆಪ್ತ ಕಿರಣಸಿಂಗ್ ಮೇಲೆ ಫೈರಿಂಗ್ ಯತ್ನ!

Spread the love

ಸತೀಶ ಜಾರಕಿಹೊಳಿ ಆಪ್ತ ಕಿರಣಸಿಂಗ್ ರಜಪೂತ್ ಮೇಲೆ ಫೈರಿಂಗ್ ಯತ್ನ!

ಚಿಕ್ಕೋಡಿ(ಬೆಳಗಾವಿ): ಗ್ರಾಮ ಪಂಚಾಯಿತಿ ಚುನಾವಣೆ ವೈಷಮ್ಯ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಲ, ಶಾಸಕ ಸತೀಶ ಜಾರಕಿಹೊಳಿ ಆಪ್ತ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡನ ಮೇಲೆ ಫೈರಿಂಗ್ ನಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಶಾಸಕರ ಆಪ್ತ ಕಾರ್ಯದರ್ಶಿ ಕಿರಣಸಿಂಗ್ ರಜಪೂತ ಹಾಗೂ ಕಾಂಗ್ರೆಸ್ ಮುಖಂಡ ಭರಮಾ ಧುಪದಾಳೆ ಎಂಬವರ ಮೇಲೆ ಅಪರಿಚಿತ ವ್ಯಕ್ತಿ ಫೈರಿಂಗ್ ನಡೆಸಿದ್ದಾನೆ. ಸತೀಶ ಜಾರಕಿಹೊಳಿ ಆಪ್ತ ಕಿರಣಸಿಂಗ್ ರಜಪೂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೋರ್ವ ಕಾಂಗ್ರೆಸ್ ಮುಖಂಡ ಭರಮಾ ಧುಪದಾಳಗೆ ಗಾಯವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಯಾವುದೇ ಪ್ರಾಣಾಪಾಯವಿಲ್ಲ.

ಅಪರಿಚಿತ ವ್ಯಕ್ತಿಯಿಂದ ಇಬ್ಬರ ಮೇಲೆ ಫೈರಿಂಗ್ ನಡೆದಿದೆ. ಗ್ರಾಮ ಪಂಚಾಯ್ತಿ ಚುನಾವಣೆ ವೈಷಮ್ಯ ಹಿನ್ನೆಲೆ ಫೈರಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾಸ್ಕ್ ಹಾಕಿಕೊಂಡು 7 ಅಡಿ ಅಂತರದಿಂದ ಫೈರಿಂಗ್ ಮಾಡಿದ ಅಪರಿಚಿತ ಯಾವ ವೆಪನ್ ಬಳಸಿ ಫೈರಿಂಗ್ ಮಾಡಿದ್ದಾರೆ ಎನ್ನುವ ತನಿಖೆ ಪೊಲೀಸರು ಮಾಡುತ್ತಿದ್ದಾರೆ. ಸ್ಥಳಕ್ಕೆ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ಹಾಗೂ ಪಿಎಸ್‍ಐ ರಮೇಶ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

five × four =